ಬ್ರೇಕಿಂಗ್ ನ್ಯೂಸ್
02-01-24 02:21 pm HK News Desk ಕ್ರೈಂ
ಕುಣಿಗಲ್, ಜ 02: ರಸ್ತೆ ಅಪಘಾತ ಸಂಬಂಧ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಂಬಂಧಿಗಳ ಮತ್ತು ಬಿದನಗೆರೆ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು ಜಿಲ್ಲಾ ಎಸ್ಪಿ ಅವರ ತಾಯಿ ಮೇಲೆ ಹಲ್ಲೆ ನಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಬೈಪಾಸ್ನಲ್ಲಿ ನಡೆದಿದೆ.
ಘಟನೆಯಲ್ಲಿ ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜಿತಾ ಅವರ ತಾಯಿ ಎ.ಜೆ.ಮಹಮದ್ ಅಜೀಜಾ (60) ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಘಟನೆ ಸಂಬಂಧ ಬಿದನಗೆರೆ ಗ್ರಾಮದ ಮೂರು ಮಂದಿ ವಿರುದ್ದ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ. 1 ಸೋಮವಾರದಂದು ಮಧ್ಯಾಹ್ನ ಎ.ಜೆ.ಮಹಮದ್ ಅಜೀಜಾ ಹಾಗೂ ಅವರ ಸಂಬಂಧಿಕರು ಹಾಸನದಿಂದ ಕುಣಿಗಲ್ ಮಾರ್ಗವಾಗಿ ಎರ್ಟಿಗಾ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿರಬೇಕಾದರೆ, ಬಿದನಗೆರೆ ಬೈಪಾಸ್ ನಲ್ಲಿ ಯಾವುದೋ ಒಂದು ವಾಹನ ವ್ಯಕ್ತಿಯೋರ್ವನಿಗೆ ಅಪಘಾತ ಮಾಡಿ ಪರಾರಿಯಾಗಿತ್ತು, ತಕ್ಷಣ ನಾವು ಕಾರು ನಿಲ್ಲಿಸಿ ಅಪಘಾತವಾದ ವ್ಯಕ್ತಿಗೆ ಅಸ್ಪತ್ರೆಗೆ ಸೇರಿಸಬೇಕೆಂದು ಪರಿಶೀಲಿಸಲು ನಾವು ಪ್ರಯತ್ನಿಸಿದ್ದಾಗ 10 ಜನರ ಗುಂಪೊಂದು ನಮ್ಮನು ಸುತ್ತುವರೆದು, ನಮ್ಮೊಂದಿಗೆ ಜಗಳವಾಡಲು ಪ್ರಾರಂಭಿಸಿದರು, ಆ ವ್ಯಕ್ತಿಯನ್ನು ಪರೀಕ್ಷಿಸಲು ಅವರು ಅವಕಾಶ ಕೊಡಲಿಲ್ಲ, ಬದಲಾಗಿ ಅವರು ನಮ್ಮನು ನಿಂದಿಸಿ, ಹಣಕ್ಕೆ ಬೇಡಿಕೆ ಇಟ್ಟರು, ಆ ಗುಂಪಿನಲ್ಲಿ ಇದ್ದ ಕೆಲವರು ನಮಗೆ ಹಣ ನೀಡುವಂತೆ ಬೆದರಿಕೆ ಹಾಕಿದರು, ಕೈಯಲ್ಲಿ ಛತ್ರಿ ಹಿಡಿದಿದ್ದ ವ್ಯಕ್ತಿಯೋರ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.

ನನ್ನ ರಕ್ಷಣೆಗೆ ಬಂದ ನನ್ನ ಸಹೋದರ ಎ.ಜೆ.ಹಸನ್ ಅಲಿ ಶೇಕ್ ಗೂ ಹೊಡೆದರು, ನನ್ನ ಅಣ್ಣನ ಬೆನ್ನಿಗೆ ತೀವ್ರ ಹೊಡೆತ ಬಿದ್ದಿದೆ. ನಂತರ ಏಕಾಏಕಿ ಎರಡು ಮೂರು ಮಂದಿ ಕೂಡ ನನ್ನ ಮೇಲೆ ಹಲ್ಲೆ ನಡೆಸಿದರು, ಗುಂಪಿನಲ್ಲಿ ಇದ್ದ ಮಹಿಳೆಯೋರ್ವಳು ತನ್ನ ಕೈಯಲ್ಲಿ ಚಾಕು ತೆಗೆದುಕೊಂಡು ನನ್ನ ಗಂಟಲ ಬಳಿ ಇಟ್ಟು ಹಣ ನೀಡುವಂತೆ ಒತ್ತಾಯಿಸಿದರು, ಇಲ್ಲದಿದ್ದರೆ ನಮ್ಮನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಮತ್ತೊಬ್ಬ ವ್ಯಕ್ತಿ ನನ್ನ ತಲೆ ಹಿಂಭಾಗಕ್ಕೆ ಹೊಡೆದಿದ್ದು, ತಕ್ಷಣ ನಾನು ಪ್ರಜ್ಞೆ ತಪ್ಪಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಎ.ಜೆ.ಮಹಮದ್ ಅಜೀಜಾ ಆರೋಪಿಸಿದ್ದಾರೆ.
The incident took place at Bidanagere bypass on National Highway 75 after a scuffle broke out between the relatives of Hassan District Superintendent of Police and bidanagere villagers over a road accident.
24-04-26 10:52 pm
HK News Staffer
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
‘ಪಿಯುಸಿ ಸೈನ್ಸ್’ ಗುಮ್ಮ ಮುಂದಿಟ್ಟು ದಂಧೆಗಿಳಿದ ಖಾಸ...
23-04-26 07:06 pm
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭರ್ಜರಿ ದಾಖಲೆ ; ಒಟ್...
23-04-26 01:36 pm
ಪುತ್ತೂರಿನಲ್ಲಿ ಸಹಪಾಠಿ ಯುವತಿಗೆ ಮಗು ಪ್ರಕರಣ ; ಮದು...
23-04-26 01:07 pm
25-04-26 03:54 pm
HK News Staffer
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗ...
23-04-26 10:22 am
ಭಾರತಕ್ಕೆ ಬರುತ್ತಿದ್ದ ಮತ್ತೆ ಮೂರು ತೈಲ ಹಡಗು ಇರಾನ್...
22-04-26 09:10 pm
25-04-26 01:45 pm
HK News Staffer
Commissioner Sudheer Reddy, Mangalore: ಕಮಿಷನರ...
24-04-26 07:10 pm
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಮಂಗಳೂರಿನಲ್ಲಿ ಬೃ...
22-04-26 10:58 am
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
25-04-26 03:57 pm
HK News Staffer
ಮಣಿಪಾಲದಲ್ಲಿ ಪಬ್ಲಿಕ್ನಲ್ಲೇ ವಿದ್ಯಾರ್ಥಿಗಳ ಓಪನ್ ರೋ...
25-04-26 02:05 pm
ಕಾರ್ಕಳ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಬೈಕ್ ಗೆ ಡಿಕ...
25-04-26 12:55 pm
ವೇಣೂರು ; ಬಳಂಜ ದೇವಸ್ಥಾನಕ್ಕೆ ನುಗ್ಗಿ ದೇವರ ಮೂರ್ತಿ...
24-04-26 04:37 pm
ಪುತ್ತೂರಿನಲ್ಲಿ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ ;...
24-04-26 01:51 pm