ಬ್ರೇಕಿಂಗ್ ನ್ಯೂಸ್
15-02-24 03:01 pm HK News Desk ಕ್ರೈಂ
ಶಿವಮೊಗ್ಗ, ಫೆ.15: ಪ್ರೀತಿಸಿ ಮದುವೆಯಾಗಿ ಯುವಕರು ಕೆಲವೊಮ್ಮೆ ಕೈಕೊಡುವುದು ಕೇಳಿದ್ದೇವೆ. ಬೇರೆ ಮದುವೆಯಾಗಿ ವರದಕ್ಷಿಣೆ ಪಡೆದು ಮೋಸ ಮಾಡಿರೋದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಮೊದಲ ಮದುವೆ ಮುಚ್ಚಿಟ್ಟು ಯುವಕನ ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಕೈಕೊಟ್ಟ ಆರೋಪ ಕೇಳಿಬಂದಿದ್ದು ಯುವಕನೇ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಚೇತನ್ ಎಂಬ ಯುವಕ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ತನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ, ತನ್ನ ಬಳಿ ಇದ್ದ ಒಡವೆಯನ್ನೂ ಹೊತ್ತೊಯ್ದು ಮೋಸ ಮಾಡಿದ್ದಾಳೆಂದು ದೂರಿನಲ್ಲಿ ತಿಳಿಸಿದ್ದಾನೆ. ಯುವಕ ಶಿವಮೊಗ್ಗದಲ್ಲಿ ಸಣ್ಣ ಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದು, ಈ ವೇಳೆ ಯುವತಿ ಪರಿಚಯ ಆಗಿತ್ತು. ಆನಂತರ, ಪ್ರೀತಿಗೆ ತಿರುಗಿ ಯುವಕ ತನ್ನ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಗೆ ರೆಡಿಯಾಗಿದ್ದ. ಇದೇ ವೇಳೆ ತನ್ನ ವರಸೆ ಶುರು ಮಾಡಿದ್ದ ಯುವತಿ, ನಾವು ಊರಿನಲ್ಲಿ ಮನೆ ಕಟ್ಟುತ್ತಿದ್ದು, ಮನೆ ಕಟ್ಟುವ ವರೆಗೂ ಅಪ್ಪ ನನ್ನ ಮದುವೆ ಒಪ್ಪೋದಿಲ್ಲ. ಮನೆ ನಿರ್ಮಾಣಕ್ಕೆ ನಿನ್ನ ಬಳಿ ಹಣ ಇದ್ದರೆ ಕೊಡು, ಬೇಗ ಮದುವೆಯಾಗಬಹುದು ಕೇಳಿದ್ದಳಂತೆ. ಆದರೆ ಚೇತನ್ ಬಳಿ ಹಣ ಇಲ್ಲದ ಕಾರಣ ಆಕೆಯೇ ಬ್ಯಾಂಕ್ವೊಂದರಲ್ಲಿ ಆತನ ಹೆಸರಿನ ಮೇಲೆ 10 ಲಕ್ಷ ಲೋನ್ ಪಡೆದಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಇತ್ತ ಮನೆ ನಿರ್ಮಾಣ ಆಗುತ್ತಿದ್ದಂತೆ ಹೊಸ ವರಸೆ ತೆಗೆದಿದ್ದ ಯುವತಿ, ಅಪ್ಪ ನಮ್ಮ ಮದುವೆಗೆ ಒಪ್ಪುತ್ತಿಲ್ಲ. ನೀವೇ ಮದುವೆ ಎಲ್ಲಾ ಖರ್ಚು ಇಟ್ಟುಕೊಂಡರೆ ಮದುವೆ ಮಾಡಿಕೊಳ್ಳೋಣ ಅಂತ ಹೇಳಿ ಮದುವೆ ಒಪ್ಪಿಸಿದ್ದಳು. ಇನ್ನು ಪ್ರೀತಿಸಿದ ಯುವತಿಯ ಕೈ ಹಿಡಿಯಲು ಯುವಕ, ಮನೆಯವರ ಬಳಿ ಹೇಳಿ ಸಾಲ ಮಾಡಿ ಮದುವೆ ಮಾಡಿಕೊಂಡಿದ್ದಾನೆ. ಆದರೆ ಮದುವೆಯಾದ ಎರಡು ತಿಂಗಳು ಚೆನ್ನಾಗಿದ್ದ ಯುವತಿ, ಆ ಬಳಿಕ ಏಕಾಏಕಿ ಬೇರೆ ಯುವಕನ ಜೊತೆ ಮದುವೆಯಾಗಿರುವ ಫೋಟೋ ತೋರಿಸಿದ್ದು ನನಗೆ ನಿನ್ನ ಜೊತೆ ಇರೋದು ಇಷ್ಟ ಇಲ್ಲ ಎಂದಿದ್ದಾಳೆ. ಅಲ್ಲದೇ ಮನೆಯಲ್ಲಿದ್ದ ಒಡವೆ, ಸುಮಾರು 6 ಲಕ್ಷ ಹಣ ತೆಗೆದುಕೊಂಡು ತವರಿಗೆ ಎಸ್ಕೇಪ್ ಆಗಿದ್ದಾಳೆ.
ಇದರಿಂದ ಮನನೊಂದ ಯುವಕ ಹಿರಿಯರ ಸಮ್ಮುಖದಲ್ಲಿ ಆಕೆಯ ಕುಟುಂಬದ ಜೊತೆಗೆ ರಾಜಿ ನಡೆಸಿದ್ದಾನೆ. ಆದರೆ, ಈ ವೇಳೆ ನೀವು ನಮ್ಮ ಜಾತಿಯವರು ಅಲ್ಲ. ಕೆಳ ಜಾತಿಯವನು. ಮತ್ತೊಮ್ಮೆ ಮನೆಗೆ ಬಂದರೆ ಕೊಲೆ ಮಾಡುವುದಾಗಿ ಯುವತಿ ಪೋಷಕರು ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾನೆ. ಇಷ್ಟೆಲ್ಲ ಆದ ಮೇಲೆ ಯುವನ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೊದಲೇ ತನ್ನ ಮದುವೆಯಾಗಿದ್ದ ವಿಚಾರ ಮುಚ್ಚಿಟ್ಟು ನನ್ನನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ಮನೆ ನಿರ್ಮಾಣ, ಮದುವೆ ಖರ್ಚು, ಒಡವೆ ಅಂತ ಲಕ್ಷಾಂತರ ರೂಪಾಯಿ ತೆಗೆದುಕೊಂಡಿದ್ದಾಳೆ. ಮದುವೆ ಸಾಲ ತೀರಿಸಲು ಅಂತ ಮನೆಯಲ್ಲಿ ಇಟ್ಟಿದ್ದ ಹಣವನ್ನು ಎತ್ತಿಕೊಂಡು ತವರಿಗೆ ಹೋಗಿದ್ದಾಳೆ ಅಂತ ಆರೋಪಗಳನ್ನು ಮಾಡಿದ್ದಾನೆ.
Shivamogga married woman cheats youth with gold and cash case filed at Police station. Youth who got married didnt know that the girl he married was already married.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm