ಬ್ರೇಕಿಂಗ್ ನ್ಯೂಸ್
27-02-24 03:45 pm HK News Desk ಕ್ರೈಂ
ಮಂಡ್ಯ, ಫೆ 27: ಹಣಕ್ಕಾಗಿ ಮಗನೇ ತಂದೆಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಮಂಡ್ಯದ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಂಜಪ್ಪ (65) ಎಂಬವರು ಹತ್ಯೆಯಾದ ದುರ್ದೈವಿ. ಮಹದೇವ್ ಕೊಲೆ ಆರೋಪಿಯಾಗಿದ್ದು, ಹಣಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ತಂದೆಯನ್ನು ಹತ್ಯೆಗೈದ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ನಂಜಪ್ಪ ತಮ್ಮ ಜಮೀನನ್ನು ಮಗನಿಗೆ ಹಾಗೂ ಮಗಳಿಗೆ ಹಂಚಿದ್ದರು. ಇತ್ತೀಚೆಗೆ 20 ಗುಂಟೆ ಜಮೀನನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಒಂದು ಭಾಗ ಮಗನಿಗೆ, ಒಂದು ಭಾಗ ಮಗಳು ಸೌಭಾಗ್ಯ ಎಂಬವರಿಗೆ ನೀಡಿದ್ದರು. ಸ್ವಲ್ಪ ಹಣವನ್ನು ನಂಜಪ್ಪ ಅವರು ಇಟ್ಟುಕೊಂಡಿದ್ದರು. ಆರೋಪಿ ಮಹದೇವ್ ತಂದೆ ನೀಡಿದ್ದ ಹಣ ಖರ್ಚು ಮಾಡಿಕೊಂಡು, ತಂದೆಯ ಬಳಿ ಹಣಕ್ಕಾಗಿ ಆಗಾಗ ಜಗಳ ಆಡುತ್ತಿದ್ದ ಎಂದು ತಿಳಿದು ಬಂದಿದೆ.
ಹಣದ ವಿಚಾರಕ್ಕೆ ಸೋಮವಾರ ರಾತ್ರಿ ಸಹ ತಂದೆಯ ಮನೆಗೆ ನುಗ್ಗಿ, ತಂದೆ-ತಾಯಿಗಳ ಮೇಲೆ ಮಹದೇವ್ ಹಲ್ಲೆ ಮಾಡಿದ್ದಾನೆ. ಬಳಿಕ ತಂದೆಯ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಇನ್ನೂ ಗಂಭೀರವಾಗಿ ಗಾಯಗೊಂಡಿರುವ ತಾಯಿ ಮಹದೇವಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Mandya murder, son fills own father over money and flees away. Mandya police are now on the hunt for the missing son.
06-01-26 08:23 pm
Bangalore Correspondent
ಸಿನಿಮಾ ಥಿಯೇಟರ್ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ರೆ...
06-01-26 12:57 pm
ಅರಣ್ಯ ಸಚಿವ ಈಶ್ವರ ಖಂಡ್ರೆ ಎದುರಲ್ಲೇ ಕೈ ಕೈ ಮಿಲಾಯಿ...
05-01-26 10:06 pm
Devaraj Aras, CM Siddaramaiah: ದೀರ್ಘ ಮುಖ್ಯಮಂತ...
05-01-26 10:00 pm
ಶಾರ್ಟ್ ಸರ್ಕಿಟ್ ; ಹೊಗೆಯಿಂದ ಉಸಿರುಗಟ್ಟಿ ಮಂಗಳೂರು...
05-01-26 08:39 pm
06-01-26 12:40 pm
HK News Desk
ಹರಿದ್ವಾರ - ಹೃಷಿಕೇಶ ಪರಿಸರದಲ್ಲಿ ಹಿಂದುಯೇತರ ವ್ಯಕ್...
05-01-26 02:13 pm
Venezuelan President Maduro: ವೆನಿಜುವೆಲಾ ಅಧ್ಯಕ...
04-01-26 06:38 pm
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
06-01-26 08:25 pm
Mangalore Correspondent
ನವೋದಯ ಟ್ರಸ್ಟ್ ನಿಂದ ಮಹಿಳಾ ಸಬಲೀಕರಣಕ್ಕೆ ಕೊಡುಗೆ ;...
06-01-26 07:51 pm
ಕೋಳಿ ಅಂಕದ ಮೇಲೆ ತೋರುವ ಕಾಳಜಿ, ಸೂರಿಲ್ಲದೆ ಬೀದಿಗೆ...
06-01-26 04:09 pm
ಜ.9ರಿಂದ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ, ಟ್ರಯತ್ಲಾ...
06-01-26 04:01 pm
ಪ್ರೇಮ ವೈಫಲ್ಯ ; ಗುರುಪುರ ನದಿಗೆ ಹಾರಿ ಯುವತಿ ಆತ್ಮಹ...
05-01-26 05:11 pm
06-01-26 07:04 pm
Bangalore Correspondent
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm