ಬ್ರೇಕಿಂಗ್ ನ್ಯೂಸ್
09-03-24 10:20 pm HK News Desk ಕ್ರೈಂ
ನವದೆಹಲಿ, ಮಾ.9: ವ್ಯಕ್ತಿಯೊಬ್ಬ ತನ್ನ ಪತ್ನಿ ತನ್ನನ್ನು ಕ್ಯಾರ್ ಮಾಡುತ್ತಿಲ್ಲ. ಉದ್ದೇಶಪೂರ್ವಕ ದೂರ ಮಾಡುತ್ತಿದ್ದಾಳೆ, ಮಗನ ಜೊತೆ ಐಷಾರಾಮಿ ಜೀವನ ಮಾಡುತ್ತಿದ್ದಾಳೆಂಬ ಹೊಟ್ಟೆಕಿಚ್ಚಿನಿಂದಾಗಿ ಜಿಮ್ ಟ್ರೈನರ್ ಆಗಿದ್ದ ಮಗನನ್ನೇ ಕ್ರೂರವಾಗಿ ಕೊಲೆ ಮಾಡಿಸಿದ ಘಟನೆ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಫೆ.6-7ರ ರಾತ್ರಿ ದೆಹಲಿಯ ಅಪಾರ್ಟ್ಮೆಂಟ್ ಒಂದರಲ್ಲಿ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಗೌರವ್ ಸಿಂಘಾಲ್ ಎಂಬ 29 ವರ್ಷದ ಯುವಕ 15ಕ್ಕೂ ಹೆಚ್ಚು ಬಾರಿ ಇರಿಯಲ್ಪಟ್ಟು ಕೊಲ್ಲಲ್ಪಟ್ಟಿದ್ದ. ತನಿಖೆ ನಡೆಸಿದ ಪೊಲೀಸರು ಘಟನೆ ಸಂದರ್ಭದಲ್ಲಿ ಕಾಣೆಯಾಗಿದ್ದ ತಂದೆ ರಂಗ ಲಾಲ್ (54)ನನ್ನು ಕೆಲವು ದಿನಗಳ ಬಳಿಕ ವಶಕ್ಕೆ ಪಡೆದಿದ್ದರು. ವಿಚಾರಣೆ ಸಂದರ್ಭದಲ್ಲಿ ರಂಗಲಾಲ್ ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವೂ ಇಲ್ಲದೆ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ತಾನು ಮಾಡಿದ್ದೇ ಸರಿ ಎನ್ನುವಂತೆ ಪೊಲೀಸರಲ್ಲಿ ಹೇಳಿದ್ದಾನೆ.
ಅಂದು ರಾತ್ರಿ ಮಗನ ಜೊತೆಗೆ ತೀವ್ರ ಜಗಳ ಆಗಿತ್ತು. ಮಾತಿಗೆ ಮಾತು ಬೆಳೆದು ಮಗನೇ ತಂದೆಯ ಮೇಲೆ ಕೈಮಾಡಿದ್ದ. ಇದರಿಂದ ಸಿಟ್ಟುಗೊಂಡು ತಾನು ಸುಪಾರಿ ಕೊಟ್ಟಿದ್ದವರಿಗೆ ಹೇಳಿ ಮಗ ಗೌರವ್ ನನ್ನು ಕೊಲೆ ಮಾಡಿಸಿದ್ದಾನೆ. ರಂಗಲಾಲ್ ಜೊತೆಗೆ ಆತನ ಪತ್ನಿಗೆ ಸಂಬಂಧ ಸರಿ ಇರಲಿಲ್ಲ. ಹಾಗಾಗಿ ಆತನಿಂದ ದೂರವಾಗಿದ್ದಲ್ಲದೆ, ಮಗನ ಜೊತೆಗೆ ವಾಸವಿದ್ದಳು. ಮಗ ಜಿಮ್ ಟ್ರೈನರ್ ಆಗಿದ್ದರಿಂದ ಆತನ ಜೊತೆಯಲ್ಲೇ ಇದ್ದಳು. ಇದರಿಂದ ಪತಿ- ಪತ್ನಿಯ ನಡುವೆ ಗಲಾಟೆ ಆಗಿತ್ತು.
ಪತ್ನಿಗೆ ಬುದ್ಧಿ ಕಲಿಸಬೇಕು, ಆಕೆಗೆ ಹಣದ ಬೆಲೆ ತಿಳಿಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ರಂಗಲಾಲ್ ಸಂಚು ಹೂಡಿದ್ದ. ಮೂವರನ್ನು 75 ಸಾವಿರ ರೂ. ಕೊಟ್ಟು ನೇಮಿಸಿದ್ದು, ಮೂರ್ನಾಲ್ಕು ತಿಂಗಳಿನಿಂದ ಮಗನ ಕೊಲೆಗೆ ಸ್ಕೆಚ್ ಹಾಕಿದ್ದ. ಕೊನೆಗೆ, ತನ್ನ ಮೇಲೆ ಮಗನೇ ಕೈಮಾಡಿದ ಕೋಪದಲ್ಲಿ ಆವತ್ತೇ ಕೊಲೆ ಮಾಡುವಂತೆ ತನ್ನ ಸಹಚರರಿಗೆ ಸೂಚನೆ ನೀಡಿದ್ದ. ನಡುರಾತ್ರಿಯಲ್ಲಿ ಕೊಲೆಗೈದು ಬಳಿಕ ಮಗನ ಮನೆಯಲ್ಲಿ ಮದುವೆ ಉದ್ದೇಶಕ್ಕಾಗಿ ರೆಡಿ ಮಾಡಿಕೊಂಡಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 15 ಲಕ್ಷ ನಗದನ್ನು ಕದ್ದೊಯ್ದಿದ್ದರು. ತಿಂಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಆಭರಣ ವಶಕ್ಕೆ ಪಡೆದಿದ್ದಾರೆ.
The man who killed his 29-year-old son, a gym trainer, in Delhi committed the crime to "teach his estranged wife a lesson", police said on Friday. He had been planning the murder for three to four months, the investigation revealed.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am