Tumkur car burnt, Murder, Mangalore crime: ತುಮಕೂರು ; ಸುಟ್ಟ ಕಾರಿನಲ್ಲಿ ಬೆಳ್ತಂಗಡಿಯ ಮೂವರು ಯುವಕರ ಶವ ಪತ್ತೆ, ಕೊಲೆಗೈದು ಕಾರು ಸುಟ್ಟು ಹಾಕಿರುವ ಶಂಕೆ 

22-03-24 06:07 pm       HK News Desk   ಕ್ರೈಂ

ಕೆರೆಯ ಬಳಿಯಲ್ಲಿ ಕಾರೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದರಲ್ಲಿ ಮೂವರು ಅಪರಿಚಿತ ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿವೆ. ತುಮಕೂರು ತಾಲೂಕಿನ ಕೋರ ಹೋಬಳಿಯ ಕುಚ್ಚಂಗಿ ಕೆರೆಯ ಬಳಿ ಘಟನೆ ನಡೆದಿದೆ. 

ತುಮಕೂರು, ಮಾ.22: ಕೆರೆಯ ಬಳಿಯಲ್ಲಿ ಕಾರೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದರಲ್ಲಿ ಮೂವರು ಅಪರಿಚಿತ ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿವೆ. ತುಮಕೂರು ತಾಲೂಕಿನ ಕೋರ ಹೋಬಳಿಯ ಕುಚ್ಚಂಗಿ ಕೆರೆಯ ಬಳಿ ಘಟನೆ ನಡೆದಿದೆ. 

ಸುಟ್ಟು ಹೋಗಿರುವ ಕಾರಿನ ನಂಬರ್ ಪ್ಲೇಟ್ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ್ದು ಎನ್ನುವ ಮಾಹಿತಿಯಡಿ ಪೊಲೀಸರು ತ‌ನಿಖೆ ನಡೆಸಿದ್ದಾರೆ. ಕಾರು ಬೆಳ್ತಂಗಡಿ ಮೂಲಕ ರಫೀಕ್ ಎಂಬವರಿಗೆ ಸೇರಿದ್ದು ಎನ್ನುವ ಮಾಹಿತಿ ಇದೆ.‌ ಕಾರಿನಲ್ಲಿದ್ದ ಶವ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್‌ ನಿವಾಸಿ ಆಟೋ ಚಾಲಕ ಸಾಹುಲ್‌ (45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್‌ (56) ಮತ್ತು ಶಿರ್ಲಾಲು ನಿವಾಸಿ ಇಮ್ತಿಯಾಜ್‌ (34) ಎಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರು ತುಮಕೂರಿಗೆ ಬಂದಿದ್ದು ಮೂವರ ಶವಗಳೂ ಗುರುತು ಸಿಗದಷ್ಟು ಸುಟ್ಟು ಹೋಗಿವೆ. ಯಾರಾದ್ರೂ ಕೊಲೆಗೈದು ಸುಟ್ಟು ಹೋಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‌

ಕಾರಿನಲ್ಲಿ ಒಟ್ಟು ಐವರು ಬೆಳ್ತಂಗಡಿಯಿಂದ ತೆರಳಿದ್ದರು ಎನ್ನಲಾಗುತ್ತಿದ್ದು ಇನ್ನಿಬ್ಬರು ಎಲ್ಲಿದ್ದಾರೆ ಎನ್ನುವ ಮಾಹಿತಿ ಲಭಿಸಿಲ್ಲ. ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿದ್ದಾರೆ. ಶ್ವಾನದಳ, ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Car found in brunt condition at Tumkur, three bodies found of Mangalore native. The three are said to be from Belthangady. It is said they have been murdered and then burnt in the car. The deceased has been identified as Suhal, isaz and Imtiyaz.