ಬ್ರೇಕಿಂಗ್ ನ್ಯೂಸ್
08-04-24 10:45 pm HK News Desk ಕ್ರೈಂ
ಮಹಾರಾಷ್ಟ್ರ, ಏ 08: ಆಕೆ ರಸ್ತೆ ಬದಿಯ ಬೀಡಾ ಅಂಗಡಿ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದಳು. ಆಕೆಯ ಜೊತೆ ಆಕೆಯ ಗೆಳತಿಯೂ ಇದ್ದರು. ಈ ವೇಳೆ ಅಂಗಡಿ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಿದ್ದ ಯುವತಿಯನ್ನೇ ಗುರಾಯಿಸುತ್ತಿದ್ದ. ಅಷ್ಟೇ.. ಯುವತಿ ಬುಲಾವ್ ಕೊಟ್ಟಿದ್ದೇ ತಡ ಸ್ಥಳಕ್ಕಾಗಮಿಸಿದ ಆಕೆಯ ಗೆಳೆಯರ ಜೊತೆ ಸೇರಿದ ಯುವತಿ ತನ್ನನ್ನು ಕೆಣಕಿದ ವ್ಯಕ್ತಿಯನ್ನು ಕೊಂದು ಮುಗಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆಯಲ್ಲಿ ನಡೆದ ಶಾಕಿಂಗ್ ಘಟನೆ ಇದು. 24 ವರ್ಷದ ಯುವತಿ ಪಾನ್ ಶಾಪ್ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದ ವೇಳೆ ಈ ಘಟನೆ ನಡೆದಿದೆ. ಆಕೆ ತನ್ನ ಇಬ್ಬರು ಪುರುಷ ಗೆಳೆಯರ ಜೊತೆ ಸೇರಿ 28 ವರ್ಷ ವಯಸ್ಸಿನ ರಂಜಿತ್ ರಾಥೋಡ್ ಎಂಬಾತನನ್ನ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿ 4 ಹೆಣ್ಣು ಮಕ್ಕಳ ತಂದೆ ಎಂದು ತಿಳಿದು ಬಂದಿದೆ.
ಕಳೆದ ಶನಿವಾರ ತಡ ರಾತ್ರಿ ನಡೆದ ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ. ನಾಗಪುರದ ಮನೇವಾಡ ಸಿಮೆಂಟ್ ರಸ್ತೆಯ ಪಾನ್ ಶಾಪ್ ಬಳಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಗುದ್ದಾಟದ ದೃಶ್ಯ ದಾಖಲಾಗಿದೆ. ಈ ವಿಡಿಯೋ ನೋಡಿ ಸ್ಥಳೀಯರು ಆಘಾತಕ್ಕೀಡಾಗಿದ್ದಾರೆ.
ಸಿಗರೇಟ್ ಸೇದುತ್ತಾ ನಿಂತಿದ್ದ ಯುವತಿ ಜಯಶ್ರೀ ಪಂಧಾರೆ ಅವರಿಗೆ ತಮ್ಮನ್ನು ರಾಥೋಡ್ ಗುರಾಯಿಸುತ್ತಿದ್ದ ರೀತಿ ಕಿರಿಕಿರಿ ಮೂಡಿಸಿದೆ. ಹೀಗಾಗಿ, ಆಕೆ ತನ್ನ ಗೆಳೆಯರಿಗೆ ಈ ವಿಷಯ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮೃತ ವ್ಯಕ್ತಿ ರಾಥೋಡ್ ತನ್ನ ಮೊಬೈಲ್ ಫೋನ್ನಲ್ಲಿ ಜಯಶ್ರೀ ಸಿಗರೇಟ್ ಖರೀದಿಸುವ, ಸಿಗರೇಟ್ ಸೇದುವ ಹಾಗೂ ಉಂಗುರಾಕೃತಿಯಲ್ಲಿ ಹೊಗೆಯನ್ನು ಬಿಡುವ ದೃಶ್ಯಗಳನ್ನ ಸೆರೆ ಹಿಡಿದ ಎನ್ನಲಾಗಿದೆ. ಈ ವೇಳೆ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ರಾಥೋಡ್ಗೆ ಜಯಶ್ರೀ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ವಿಡಿಯೋ ಮಾಡೋದನ್ನು ಮುಂದುವರೆಸಿದ ರಾಥೋಡ್, ಜಯಶ್ರೀಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಜಯಶ್ರೀ ಜೊತೆಗಿದ್ದ ಆಕೆಯ ಸ್ನೇಹಿತೆ ಸವಿತಾ ಸಯಾರೆ, ತಮ್ಮ ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಜಯಶ್ರೀ ಗೆಳೆಯರಾದ ಆಕಾಶ್ ರಾವತ್ ಹಾಗೂ ಜೀತು ಜಾಧವ್ ಅವರು ಸ್ಥಳಕ್ಕೆ ಧಾವಿಸಿದರು. ವಿಡಿಯೋ ಮಾಡುತ್ತಿದ್ದ ರಾಥೋಡ್ ಜೊತೆ ಜಗಳಕ್ಕೆ ಇಳಿದರು. ಈ ವೇಳೆ ಯುವಕರಿಂದ ತಪ್ಪಿಸಿಕೊಂಡ ರಾಥೋಡ್, ತನ್ನ ಮನೆ ಕಡೆಗೆ ಹೊರಟ. ಮನೆಗೆ ಹೋಗುವ ದಾರಿಯಲ್ಲಿ ಮಹಾಲಕ್ಷ್ಮಿ ನಗರ ಎಂಬಲ್ಲಿ ಬಾರ್ ಒಂದರ ಬಳಿ ಬಿಯರ್ ಖರೀದಿ ಮಾಡಲು ಮುಂದಾದ. ಈ ವೇಳೆ ಇಬ್ಬರೂ ಯುವಕರ ಜೊತೆ ಆಗಮಿಸಿದ ಯುವತಿ ಜಯಶ್ರೀ ರಾಥೋಡ್ನ ಬೆನ್ನು ಹತ್ತಿ ಹೋಗಿ ದಾಳಿ ನಡೆಸಿದ್ದಾರೆ.
ಜಯಶ್ರೀ ಹಾಗೂ ಆಕೆಯ ಗೆಳೆಯರು ರಾಥೋಡ್ ಮೇಲೆ ಹಲ್ಲೆ ನಡೆಸುವ, ಚಾಕುವಿನಿಂದ ಚುಚ್ಚುವ ವಿಡಿಯೋ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅದರಲ್ಲೂ ಆರೋಪಿ ಯುವತಿ ಜಯಶ್ರೀ ತನ್ನನ್ನು ಕೆಣಕಿದ ರಾಥೋಡ್ಗೆ ಚಾಕುವಿನಿಂದ ಹಲವು ಬಾರಿ ಚುಚ್ಚುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಇದಾದ ಕೂಡಲೇ ಜಯಶ್ರೀ, ಆಕೆಯ ಸ್ನೇಹಿತೆ ಸವಿತಾ ಹಾಗೂ ಇಬ್ಬರು ಪುರುಷ ಗೆಳೆಯರೂ ಸೇರಿದಂತೆ ನಾಲ್ವರೂ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೃತ ರಾಥೋಡ್ನ ಮೊಬೈಲ್ ಫೋನ್ನಲ್ಲಿ ಆತ ಯುವತಿ ಸಿಗರೇಟ್ ಸೇದುತ್ತಿದ್ದ ದೃಶ್ಯ ಸೆರೆ ಹಿಡಿದಿದ್ದ. ಅದನ್ನೂ ಸಾಕ್ಷ್ಯವಾಗಿ ಪರಿಗಣಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನೂ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ.
A 26-year-old man was murdered on Saturday after he allegedly stared at two women smoking at a cigarette shop in Maharashtra’s Nagpur. According to the Nagpur police, they have arrested the two women along with the killer and are looking for another accused.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm