ಬ್ರೇಕಿಂಗ್ ನ್ಯೂಸ್
04-08-24 10:48 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 4: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಮಹಿಳೆಯೊಬ್ಬರು 1.65 ಕೋಟಿ ರೂಪಾಯಿ ಹಣ ಕಳಕೊಂಡಿದ್ದು ತಾನು ಮೋಸಕ್ಕೀಡಾದ ಬಗ್ಗೆ ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಇನ್ಸ್ ಟಾ ಗ್ರಾಮಿನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ, ಅಂಕಿತಾ ಪಟೇಲ್ ಹೆಸರಿನ ಅಪರಿಚಿತ ವ್ಯಕ್ತಿ ವಾಟ್ಸಪ್ ನಲ್ಲಿ ಚಾಟ್ ಮಾಡಿ, ಷೇರ್ ಮಾರ್ಕೆಟ್ ಕುರಿತ ಗ್ರೂಪಿಗೆ ಜಾಯಿನ್ ಮಾಡಿಸಿದ್ದ. ಆನಂತರ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡಿದ್ದ.
ನಂತರ, Fidelity pearl of south Asia ಎಂಬ ಷೇರು ಮಾರುಕಟ್ಟೆ ವಾಟ್ಸಪ್ ಗ್ರೂಪಿಗೆ ಜಾಯಿನ್ ಮಾಡಿಸಿದ್ದರು. ಅದರಲ್ಲಿ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದಂತೆ, ಫಿಡೆಲಿಟಿ ಏಪ್ ಡೌನ್ಲೋಡ್ ಮಾಡಿ ತನ್ನ ಎಚ್ ಡಿಎಫ್ ಸಿ ಬ್ಯಾಂಕಿನಿಂದ ಜೂನ್ 26ರಿಂದ ಜುಲೈ 31ರ ನಡುವೆ ಹಂತ ಹಂತವಾಗಿ ಒಟ್ಟು 1,65,92,293 ರೂ. ಮೊತ್ತವನ್ನು ವರ್ಗಾವಣೆ ಮಾಡಿದ್ದರು.
ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಅದು ತಿಳಿಯುತ್ತಿದ್ದನಂತೆ ಮಹಿಳೆಗೆ ಮೋಸದ ಅರಿವಾಗಿದ್ದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿ ಹೇಳಿದಂತೆ ಬೇರೆ ಬೇರೆ ಖಾತೆಗಳಿಗೆ IMPS ಮತ್ತು RTGS ಮೂಲಕ ಮಹಿಳೆ ಹಣ ವರ್ಗಾವಣೆ ಮಾಡಿದ್ದರು. ಈ ಹಣ ಹೂಡಿಕೆ ರೂಪದಲ್ಲಿ ಫಿಡೆಲಿಟಿ ಏಪ್ ನಲ್ಲಿ ತೋರಿಸುತ್ತಿತ್ತು. ಆದರೆ ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯುವ ಅವಕಾಶ ಇರಲಿಲ್ಲ. ಈ ರೀತಿ ಹಲವಾರು ಸಾರ್ವಜನಿಕರನ್ನು ವಂಚಕರು ನೇರವಾಗಿ ಸಂಪರ್ಕಿಸಿ ಮೋಸದ ಜಾಲಕ್ಕೆ ಸಿಲುಕಿಸುತ್ತಾರೆ. ಅತಿ ಹೆಚ್ಚು ಲಾಭ ಕೊಡಿಸುವ ಭರವಸೆಯನ್ನೂ ಕೊಡುತ್ತಾರೆ. ಮೋಸದ ಅರಿವಿರದೆ ಹಣ ಹೂಡಿಕೆ ಮಾಡಿದವರನ್ನು ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಾರೆ. ಇದೇ ಕಾರಣಕ್ಕೆ ಏಪ್ ನಲ್ಲಿ ಹೂಡಿಕೆ ಮಾಡಿದ ಮೊತ್ತ ಹೆಚ್ಚು ಅಪ್ ಆದ ರೀತಿ ಕಾಣಿಸುತ್ತಾರೆ. ಆಮೂಲಕ ಹಣ ಇದ್ದವರನ್ನು ಮತ್ತಷ್ಟು ಹೂಡಿಕೆ ಮಾಡಲು ಪ್ರೇರೇಪಿಸುತ್ತದೆ. ಇದೊಂದು ಸೈಬರ್ ವಂಚಕರ ಜಾಲವಾಗಿದ್ದು ತಂಡವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ತರ ಭಾರತದ ಮೂಲೆಯಲ್ಲಿ ಕುಳಿತು ಈ ಕೃತ್ಯ ಎಸಗುತ್ತಿದ್ದು ಇವರನ್ನು ಪತ್ತೆ ಮಾಡಲು ಪೊಲೀಸರೂ ಸರ್ವ ಪ್ರಯತ್ನ ಹಾಕದೇ ಇರುವುದು ಮತ್ತಷ್ಟು ವಂಚನೆಗೆ ದಾರಿಯಾಗಿಸಿದೆ.
Mangalore Share market fraud, women looses 1.65 crore money. Fidelity Pearl of South Asia company share market Fraud exposed. A case has been registered at cyber crime police station.
09-09-24 10:55 pm
Bangalore Correspondent
Bangalore Cafe Blast, BJP Office, NIA: ರಾಮೇಶ್...
09-09-24 10:12 pm
ಮುಂದಿನ ಸಿಎಂ ಪರಮೇಶ್ವರ್ ; ಸಿದ್ದರಾಮಯ್ಯ ಕುರಿತ ಕೋರ...
09-09-24 04:49 pm
Samyukta Karnataka, Vasant Nadiger: ನಾಡಿನ ಹಿರ...
09-09-24 12:56 pm
Chikkodi Accident, Bus: ಚಿಕ್ಕೋಡಿ ; ರಸ್ತೆ ಬದಿ...
08-09-24 05:54 pm
09-09-24 01:00 pm
HK News Desk
ಅಮೆರಿಕದಲ್ಲೂ ಟ್ರಬಲ್ ಶೂಟರ್ ಆಗ್ತಾರಾ ಡಿಕೆಶಿ ; ಚುನ...
08-09-24 11:07 pm
TMC MP Jawhar Sircar resigns: ಕೊಲ್ಕತ್ತಾ ವೈದ್ಯ...
08-09-24 02:45 pm
Vinesh Phogat, Haryanas Julana: ಜಾಟ್ ಪ್ರಾಬಲ್ಯ...
08-09-24 01:47 pm
ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಸೇವೆಯಿಂ...
07-09-24 10:44 pm
09-09-24 11:12 pm
Mangalore Correspondent
Mangalore Tulu lipi Unicode fake, Akash Jain:...
09-09-24 10:08 pm
Mangalore Tulu, Unicode: ಯುನಿಕೋಡ್ ಕೀಲಿಮಣೆಗೆ ತ...
09-09-24 05:45 pm
Mangalore Catholics, Sanghaniketan Ganeshotsa...
09-09-24 05:17 pm
Mangalore, Kinnigoli auto accident: ಕಿನ್ನಿಗೋಳ...
08-09-24 10:16 pm
07-09-24 05:45 pm
HK News Desk
Serial Killers Of Andhra Pradesh: ಸೈನೈಡ್ ಬೆರೆ...
07-09-24 03:06 pm
Puttur online fraud, Mangalore: ಸಿಆರ್ ಪಿಎಫ್ ಯ...
05-09-24 02:55 pm
Mangalore crime, Court, Murder: ದಂಪತಿಯೆಂದು ಮನ...
05-09-24 11:49 am
Uppinangady, Mangalore Crime: ನಡುರಾತ್ರಿಯಲ್ಲಿ...
04-09-24 06:33 pm