ಬ್ರೇಕಿಂಗ್ ನ್ಯೂಸ್
04-08-24 10:48 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 4: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಮಹಿಳೆಯೊಬ್ಬರು 1.65 ಕೋಟಿ ರೂಪಾಯಿ ಹಣ ಕಳಕೊಂಡಿದ್ದು ತಾನು ಮೋಸಕ್ಕೀಡಾದ ಬಗ್ಗೆ ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಇನ್ಸ್ ಟಾ ಗ್ರಾಮಿನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ, ಅಂಕಿತಾ ಪಟೇಲ್ ಹೆಸರಿನ ಅಪರಿಚಿತ ವ್ಯಕ್ತಿ ವಾಟ್ಸಪ್ ನಲ್ಲಿ ಚಾಟ್ ಮಾಡಿ, ಷೇರ್ ಮಾರ್ಕೆಟ್ ಕುರಿತ ಗ್ರೂಪಿಗೆ ಜಾಯಿನ್ ಮಾಡಿಸಿದ್ದ. ಆನಂತರ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡಿದ್ದ.
ನಂತರ, Fidelity pearl of south Asia ಎಂಬ ಷೇರು ಮಾರುಕಟ್ಟೆ ವಾಟ್ಸಪ್ ಗ್ರೂಪಿಗೆ ಜಾಯಿನ್ ಮಾಡಿಸಿದ್ದರು. ಅದರಲ್ಲಿ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದಂತೆ, ಫಿಡೆಲಿಟಿ ಏಪ್ ಡೌನ್ಲೋಡ್ ಮಾಡಿ ತನ್ನ ಎಚ್ ಡಿಎಫ್ ಸಿ ಬ್ಯಾಂಕಿನಿಂದ ಜೂನ್ 26ರಿಂದ ಜುಲೈ 31ರ ನಡುವೆ ಹಂತ ಹಂತವಾಗಿ ಒಟ್ಟು 1,65,92,293 ರೂ. ಮೊತ್ತವನ್ನು ವರ್ಗಾವಣೆ ಮಾಡಿದ್ದರು.
ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಅದು ತಿಳಿಯುತ್ತಿದ್ದನಂತೆ ಮಹಿಳೆಗೆ ಮೋಸದ ಅರಿವಾಗಿದ್ದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿ ಹೇಳಿದಂತೆ ಬೇರೆ ಬೇರೆ ಖಾತೆಗಳಿಗೆ IMPS ಮತ್ತು RTGS ಮೂಲಕ ಮಹಿಳೆ ಹಣ ವರ್ಗಾವಣೆ ಮಾಡಿದ್ದರು. ಈ ಹಣ ಹೂಡಿಕೆ ರೂಪದಲ್ಲಿ ಫಿಡೆಲಿಟಿ ಏಪ್ ನಲ್ಲಿ ತೋರಿಸುತ್ತಿತ್ತು. ಆದರೆ ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯುವ ಅವಕಾಶ ಇರಲಿಲ್ಲ. ಈ ರೀತಿ ಹಲವಾರು ಸಾರ್ವಜನಿಕರನ್ನು ವಂಚಕರು ನೇರವಾಗಿ ಸಂಪರ್ಕಿಸಿ ಮೋಸದ ಜಾಲಕ್ಕೆ ಸಿಲುಕಿಸುತ್ತಾರೆ. ಅತಿ ಹೆಚ್ಚು ಲಾಭ ಕೊಡಿಸುವ ಭರವಸೆಯನ್ನೂ ಕೊಡುತ್ತಾರೆ. ಮೋಸದ ಅರಿವಿರದೆ ಹಣ ಹೂಡಿಕೆ ಮಾಡಿದವರನ್ನು ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಾರೆ. ಇದೇ ಕಾರಣಕ್ಕೆ ಏಪ್ ನಲ್ಲಿ ಹೂಡಿಕೆ ಮಾಡಿದ ಮೊತ್ತ ಹೆಚ್ಚು ಅಪ್ ಆದ ರೀತಿ ಕಾಣಿಸುತ್ತಾರೆ. ಆಮೂಲಕ ಹಣ ಇದ್ದವರನ್ನು ಮತ್ತಷ್ಟು ಹೂಡಿಕೆ ಮಾಡಲು ಪ್ರೇರೇಪಿಸುತ್ತದೆ. ಇದೊಂದು ಸೈಬರ್ ವಂಚಕರ ಜಾಲವಾಗಿದ್ದು ತಂಡವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ತರ ಭಾರತದ ಮೂಲೆಯಲ್ಲಿ ಕುಳಿತು ಈ ಕೃತ್ಯ ಎಸಗುತ್ತಿದ್ದು ಇವರನ್ನು ಪತ್ತೆ ಮಾಡಲು ಪೊಲೀಸರೂ ಸರ್ವ ಪ್ರಯತ್ನ ಹಾಕದೇ ಇರುವುದು ಮತ್ತಷ್ಟು ವಂಚನೆಗೆ ದಾರಿಯಾಗಿಸಿದೆ.
Mangalore Share market fraud, women looses 1.65 crore money. Fidelity Pearl of South Asia company share market Fraud exposed. A case has been registered at cyber crime police station.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm