ಬ್ರೇಕಿಂಗ್ ನ್ಯೂಸ್
12-08-24 09:37 pm Bangalore Correspondent ಕ್ರೈಂ
ಬೆಂಗಳೂರು, ಆ.13: ಆನ್ಲೈನ್ ವಂಚನೆಯಲ್ಲಿ ಹಣ ಕಳೆದುಕೊಂಡರೆ ಮತ್ತೆ ವಾಪಸ್ ಬರುವುದು ತೀರಾ ಅಪರೂಪ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಚ್ಚಿನ ಹಣವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಟೆಕ್ಕಿ ದಂಪತಿ ಆನ್ಲೈನ್ ವಂಚನೆಯೊಂದರಲ್ಲಿ 1.53 ಕೋಟಿ ರೂ. ಕಳೆದುಕೊಂಡಿದ್ದರು. ಇದರಲ್ಲಿ ಹೆಚ್ಚಿನ ಹಣವನ್ನು ಅಂದರೆ 1.40 ಕೋಟಿ ರೂ.ಗಳನ್ನು 50ಕ್ಕೂ ಹೆಚ್ಚು ಖಾತೆಗಳಿಂದ ಪೊಲೀಸರು ವಸೂಲಿ ಮಾಡಿಕೊಟ್ಟಿದ್ದಾರೆ.
ಪೂರ್ವ ವಲಯದ ಸೈಬರ್ ಕ್ರೈಮ್ ಪೊಲೀಸರು ಆನ್ಲೈನ್ ಹೂಡಿಕೆ ಸ್ಕ್ಯಾಮ್ನಲ್ಲಿ ಹಣ ಕಳೆದುಕೊಂಡಿದ್ದ ಸಾಫ್ಟ್ವೇರ್ ಇಂಜಿನಿಯರ್ ದಂಪತಿಯ ಹಣವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸಿಸುತ್ತಿರುವ ದಂಪತಿಗೆ ವಂಚಕನೊಬ್ಬ ಹೆಚ್ಚಿನ ಲಾಭದ ಆಸೆ ತೋರಿಸಿದ್ದ. ಇದನ್ನು ನಂಬಿ ದಂಪತಿ ಈತನ ವಂಚನೆ ಜಾಲಕ್ಕೆ ಬಿದ್ದಿದ್ದರು. ಬ್ರಿಟನ್ನಲ್ಲಿ ಕುಳಿತೇ ಈ ವಂಚನೆ ಜಾಲವನ್ನು ನಡೆಸುತ್ತಿದ್ದ ಈತ ಹಣ ಸ್ವೀಕರಿಸಲು ಉತ್ತರ ಭಾರತೀಯರ ಒಂದಿಷ್ಟು ಖಾತೆಗಳನ್ನು ಬಾಡಿಗೆಗೆ ಪಡೆದಿದ್ದ.
ಅಷ್ಟೇ ಅಲ್ಲ ಹೂಡಿಕೆ ನಿಜ ಎಂದು ಬಿಂಬಿಸಲು ಈತ ನಕಲಿ ವೆಬ್ಸೈಟ್ ಒಂದು ತೆರೆದು, ಇದರ ಆಕ್ಸೆಸ್ ಕೂಡ ನೀಡಿದ್ದ. ಇದರಲ್ಲಿ ತಮ್ಮ ಹೂಡಿಕೆ ಬೆಳೆಯುತ್ತಿರುವುದನ್ನು ಕಂಡು ದಂಪತಿ ಖುಷಿಯಾಗಿದ್ದರು. ಕೆಲವು ತಿಂಗಳ ನಂತರ ಒಂದಿಷ್ಟು ಹಣವನ್ನು ಹಿಂಪಡೆಯಲು ನೋಡಿದರೆ, ಹಣ ತೆಗೆಯಲು ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ನಕಲಿ ವೆಬ್ಸೈಟ್ನ ಆಕ್ಸೆಸ್ ಕೂಡ ಹೋಯ್ತು. ಕೊನೆಗೆ ಅವರನ್ನು ಆ ವೆಬ್ಸೈಟ್ ಬ್ಲಾಕೇ ಮಾಡಿತು. ಅಷ್ಟೊತ್ತಿಗೆ ತಾವು ವಂಚನೆಗೆ ಸಿಲುಕಿರುವುದು ದಂಪತಿಗೆ ತಿಳಿಯಿತು.
ಆಗ ದಂಪತಿ ಹೋಗಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ತನಿಖೆ ಆರಂಭಿಸಿದ್ದಲ್ಲದೆ ಬ್ಯಾಂಕ್ ಅಧಿಕಾರಿಗಳ ಜೊತೆ ಸೇರಿ ಈ ವಂಚನೆ ಜಾಲವನ್ನು ಪತ್ತೆ ಹಚ್ಚಿದರು. ಈ ಹಗರಣದಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಿದರು. ತಕ್ಷಣ ಕಾರ್ಯಪ್ರವೃತ್ತವಾಗಿದ್ದರಿಂದ ಒಂದಿಷ್ಟು ಮೊತ್ತ ವಾಪಸ್ ಪಡೆಯಲು ಸಾಧ್ಯವಾಯಿತು.
A tech industry couple from Bengaluru has managed to recover a significant portion of the money they lost in an online trading scam, thanks to the quick action of the local police. The East Division Cybercrime Police in Bengaluru successfully reclaimed Rs 1.4 crore out of the Rs 1.53 crore that had been swindled from the couple.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm