ಬ್ರೇಕಿಂಗ್ ನ್ಯೂಸ್
19-08-24 10:35 pm Mangalore Correspondent ಕ್ರೈಂ
ಉಳ್ಳಾಲ, ಆ.19: ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧದ ನಡುವೆಯೂ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾತ್ರ ನಿತ್ಯ, ನಿರಂತರವಾಗಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಲೇ ಇದೆ. ಉಚ್ಚಿಲದ ಅಜ್ಜಿನಡ್ಕ ಗುಡ್ಡೆ ಎಂಬಲ್ಲಿನ ಸಮತಟ್ಟಾದ ಗುಡ್ಡ ಪ್ರದೇಶದಲ್ಲಿ ಟನ್ ಗಟ್ಟಲೆ ಮರಳನ್ನು ದಾಸ್ತಾನು ಇರಿಸಲಾಗಿದ್ದು ನಸುಕಿನ ಜಾವ ಇಲ್ಲಿಂದ ಮರಳು ಸರಬರಾಜು ನಡೆಯುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಉಳ್ಳಾಲ ಪೊಲೀಸರು ತಮಗೇನೂ ತಿಳಿಯದ ರೀತಿ ಮರಳು ಮಾಫಿಯಾಕ್ಕೆ ಬೆದರಿ ಮಂಡಿ ಊರಿ ಸುಮ್ಮನಾಗಿದ್ದಾರೆ.
ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ-ಬಟ್ಟಪ್ಪಾಡಿ, ತಲಪಾಡಿ, ಕೋಟೆಪುರ ಸಮುದ್ರ,ನದಿ ತೀರದಿಂದ ನಿತ್ಯವೂ ಅಕ್ರಮವಾಗಿ ಮರಳು ಎತ್ತಲಾಗುತ್ತಿದೆ. ಮುಂಜಾನೆ ನಸುಕಿನ ಜಾವ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಹೆದ್ದಾರಿಯ ವಿರುದ್ಧ ಧಿಕ್ಕಿನಲ್ಲಿ ಮರಳುಗಾರಿಕೆಯ ಲಾರಿಗಳು ಬುಸುಗುಟ್ಟಿ ಧಾವಿಸುತ್ತಿದ್ದರೂ ಇವರ ವಿರುದ್ಧ ಉಳ್ಳಾಲ ಪೊಲೀಸರಾಗಲಿ, ಸಂಚಾರಿ ಪೊಲೀಸರಾಗಲೀ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮರಳು ಮಾಫಿಯಾಕ್ಕೆ ಪೊಲೀಸರೇ ಬೆದರಿ ಬಾಲ ಮುದುಡಿ ಕುಳಿತರೇ ಎಂಬಂತಿದೆ ಪರಿಸ್ಥಿತಿ.




ಉಚ್ಚಿಲ ಸಮೀಪದ ಅಜ್ಜಿನಡ್ಕದ ಗುಡ್ಡೆ ಕೊಪ್ಪಲ್ ಎಂಬ ಸಮತಟ್ಟಾದ ಗುಡ್ಡ ಪ್ರದೇಶದಲ್ಲಿ ಮೆಟ್ರಿಕ್ ಟನ್ ಗಳಷ್ಟು ಮರಳನ್ನ ಅಕ್ರಮವಾಗಿ ದಾಸ್ತಾನು ಇರಿಸಲಾಗಿದೆ. ದಿನ ನಿತ್ಯವೂ ರಾತ್ರಿ ವೇಳೆ ಇಲ್ಲಿಗೆ ಮರಳು ಬರುತ್ತಿದ್ದು ಅಕ್ರಮವಾಗಿ ದಾಸ್ತಾನು ಇರಿಸಲಾಗುತ್ತಿದೆ. ಜಾಸ್ತಿ ಬೆಲೆ ಕೊಡುವ ಗಿರಾಕಿಗಳಿಗೆ ಇಲ್ಲಿಂದ ಮರಳನ್ನ ಲಾರಿಗಳಲ್ಲಿ ಸಾಗಾಟ ನಡೆಸಲಾಗುತ್ತಿದೆ. ಅಜ್ಜಿನಡ್ಕದ ಮುಖ್ಯ ರಸ್ತೆ ಬದಿಯಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಉಳ್ಳಾಲ ಪೊಲೀಸರ ಕಣ್ಣಿಗೆ ಮಾತ್ರ ಇದು ಕಂಡೇ ಇಲ್ಲ. ಬಡ ವರ್ಗದವರಿಗೆ ಕಟ್ಟಡ ನಿರ್ಮಾಣ ಮಾಡಲು ಮರಳೇ ಸಿಗದ ಸಮಯದಲ್ಲಿ ಉಳ್ಳವರಿಗೆ ಈ ರೀತಿ ಅಕ್ರಮವಾಗಿ ದಾಸ್ತಾನು ಇರಿಸಿದ ಮರಳು ಪೂರೈಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಕ್ರಮ ಮರಳುಗಾರಿಕೆಯ ವಿರುದ್ಧ ಕ್ರಮಕ್ಕೇನೋ ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ಕ್ರಮ ಕೈಗೊಳ್ಳುವವರು ಯಾರು ಎನ್ನೋದು ಯಕ್ಷಪ್ರಶ್ನೆ.
Mangalore Illegal sand sale at Ajjinadka in ulllal, police take no action. Ajjinadka near uchila is filled with illegal sand and customers throng to purchase sand
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm