ಬ್ರೇಕಿಂಗ್ ನ್ಯೂಸ್
05-09-24 02:55 pm Mangalore Correspondent ಕ್ರೈಂ
ಪುತ್ತೂರು, ಸೆ.5: ತನ್ನನ್ನು ಸಿಆರ್ ಪಿಎಫ್ ಯೋಧನೆಂದು ಫೇಸ್ಬುಕ್ ನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ತನಗೆ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ, ಫರ್ನಿಚರ್ ಗಳನ್ನು ಮಾರಾಟ ಮಾಡುತ್ತೇನೆಂದು ಹೇಳಿ ಅಡ್ವಾನ್ಸ್ ಹಣ ಪಡೆದು ಪುತ್ತೂರಿನ ವ್ಯಕ್ತಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕು ಪಂಚಾಯಿತಿ ನರೇಗಾ ಸಂಯೋಜಕ ಭರತ್ ಕುಮಾರ್ ಹಣ ಕಳಕೊಂಡವರು. ಇವರಿಗೆ ಫೇಸ್ಬುಕ್ ಮೆಸೆಂಜರ್ ನಲ್ಲಿ ಗೆಳೆಯ ರಾಧಾಕೃಷ್ಣ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ನನ್ನ ಗೆಳೆಯ ಸಂತೋಷ್ ಸಿಆರ್ ಪಿಎಫ್ ಯೋಧನಾಗಿದ್ದು, ಕಾಶ್ಮೀರಕ್ಕೆ ವರ್ಗಾವಣೆಯಾಗುತ್ತಿದ್ದಾನೆ. ಆತನ ಮನೆಯಲ್ಲಿರುವ ಪೀಠೋಪಕರಣ, ಇಲೆಕ್ಟ್ರಾನಿಕ್ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಸಂದೇಶ ಬಂದಿತ್ತು.
ಬಳಿಕ ಸಂತೋಷ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಭರತ್ ಗೆ ಕರೆ ಮಾಡಿದ್ದು ಮನೆ ಸಾಮಗ್ರಿಗಳನ್ನು ಕಳಿಸಿಕೊಡುವುದಾಗಿ ಹೇಳಿ ಫೋಟೋ ಕಳಿಸಿದ್ದಾನೆ. ಸಾಮಗ್ರಿಗೆ 95 ಸಾವಿರ ರೂ. ಎಂದು ಹೇಳಿದ ಆ ವ್ಯಕ್ತಿಯ ಜೊತೆಗೆ ಭರತ್ ಚೌಕಾಶಿ ಮಾಡಿದ್ದು, ಹತ್ತು ಸಾವಿರ ರೂ. ಅಡ್ವಾನ್ಸ್ ಮಾಡಿದ್ದಾರೆ. ಬಳಿಕ ಬೆಂಗಳೂರಿನಿಂದ ಸಿಆರ್ ಪಿಎಫ್ ಲಾರಿಯಲ್ಲಿ ಸಾಮಗ್ರಿ ಕಳಿಸಿಕೊಡುತ್ತಿದ್ದೇನೆ, ಕೂಡಲೇ ಉಳಿಕೆ ಹಣ ಕಳಿಸುವಂತೆ ವ್ಯಕ್ತಿ ಒತ್ತಡ ಹೇರಿದ್ದ. ಈ ಹಂತದಲ್ಲಿ ಸಂಶಯಕ್ಕೀಡಾದ ಭರತ್, ಫೇಸ್ಬುಕ್ ಗೆಳೆಯ ರಾಧಾಕೃಷ್ಣ ಅವರಿಗೆ ಕರೆ ಮಾಡಿದಾಗ, ತಾನೇನೂ ಮೆಸೇಜ್ ಹಾಕಿಲ್ಲ ಎಂದುತ್ತರ ಬಂದಿದೆ. ಇದರಿಂದ ಮೋಸ ಹೋಗಿದ್ದು ಅರಿವಾಗುತ್ತಲೇ ಭರತ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮೆಸೇಜ್ ಕಳಿಸಿದ್ದ ಫೇಸ್ಬುಕ್ ಖಾತೆ ಬ್ಲಾಕ್ ಆಗಿದೆ. ಹಣ ಕಳಿಸಿದ್ದ ಫೋನ್ ಪೇ ನಂಬರ್ ಚಾಲ್ತಿಯಲ್ಲಿದ್ದು, ಫೋನ್ ಮಾಡಿದರೆ ರಿಂಗ್ ಆಗುತ್ತಿದೆ. ಫೋನ್ ಪೇ ಮಾಡಿದಾಗ ಬಾಬುಲಾಲ್ ಎಂದು ಆ ಹೆಸರನ್ನು ತೋರಿಸಿತ್ತು. ಅವರಲ್ಲಿ ಕೇಳಿದಾಗ, ಅದು ತನ್ನ ತಂದೆಯದೆಂದು ಸಂತೋಷ್ ಹೇಳಿದ್ದ ಎಂದು ಭರತ್ ಕುಮಾರ್ ತಿಳಿಸಿದ್ದಾರೆ.
Online fraud in the name of CRSF solider, puttur man cheated of 10 thousand rs.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm