ಬ್ರೇಕಿಂಗ್ ನ್ಯೂಸ್
10-12-24 03:59 pm HK News Desk ಕ್ರೈಂ
ನವದೆಹಲಿ, ಡಿ.9: ಒಂದು ಸ್ಮಾರ್ಟ್ ಫೋನ್ ಕೈಗೆ ಸಿಕ್ಕರೆ ಏನೂ ಮಾಡಲು ಸಾಧ್ಯ ಎಂಬುದನ್ನು ಹಲವರು ತೋರಿಸಿಕೊಟ್ಟಿದ್ದಾರೆ. ಸೈಬರ್ ವಂಚಕರು ತಮ್ಮ ಸ್ಮಾರ್ಟ್ ಬುದ್ಧಿಯನ್ನು ಬಳಸಿ ಕೇವಲ ಮೊಬೈಲ್ ಬಳಸಿಯೇ ಹಲವಾರು ಜನರನ್ನು ಯಾಮಾರಿಸಿ ಹಣ ಕಬಳಿಸಿದ್ದನ್ನೂ ನೋಡಿದ್ದೇವೆ. ಸ್ಪೈನ್ ದೇಶದಲ್ಲಿ 26 ವರ್ಷದ ಯುವತಿಯೊಬ್ಬಳು ಕೇವಲ 8 ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರನ್ನು ತನ್ನ ಬಲೆಗೆ ಬೀಳಿಸಿ ಹಣ ಪೀಕಿಸಿದ್ದು ಈಗ ಸುದ್ದಿಯಾಗಿದೆ.
ಸ್ಪೈನ್ ಪೊಲೀಸರು 26 ವರ್ಷದ ಯುವತಿಯನ್ನು ಅರೆಸ್ಟ್ ಮಾಡಿದ್ದು, 311 ವಂಚನೆ ಕೇಸುಗಳಲ್ಲಿ ಆಕೆಯೇ ಆರೋಪಿಯೆಂದು ಕೇಸು ಜಡಿದಿದ್ದಾರೆ. ಈಕೆ, ಕೇವಲ ಸಾಮಾನ್ಯ ಸ್ಮಾರ್ಟ್ ಫೋನ್ ಮತ್ತು ಕೆಲವು ಏಪ್ಸ್ ಗಳನ್ನು ಬಳಸ್ಕೊಂಡು ಯುವಕರನ್ನು ಪರಿಚಯಿಸ್ಕೊಂಡು ಅವರನ್ನೇ ಯಾಮಾರಿಸುತ್ತ ವಂಚನೆ ಮಾಡುತ್ತಿದ್ದಳು. ಕೇವಲ 8 ತಿಂಗಳಲ್ಲಿ 13,500 ಪೌಂಡ್ ಹಣವನ್ನು ಅಂದರೆ, ಅಂದಾಜು 15 ಲಕ್ಷ ರೂ. ಹಣವನ್ನು ವಂಚನೆ ಮೂಲಕ ಸಂಪಾದಿಸಿದ್ದಾಳೆ.
ಸ್ಪೇನ್ ದೇಶದ ಸ್ಯಾನ್ ಸೆಬಾಸ್ಟಿಯನ್ ನಗರದ ಅಜ್ಕೋಟಿಯಾ ಎಂಬಲ್ಲಿ ಯುವತಿಯ ಬಂಧನ ಮಾಡಲಾಗಿದೆ. ಪೊಲೀಸರು ಬಂಧನ ಮಾಡುತ್ತಲೇ ಯುವತಿ ತನ್ನ ವಂಚನೆ ಜಾಲದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇವಳಲ್ಲಿ ಸಾಮಾನ್ಯ ರೀತಿಯ ಸ್ಮಾರ್ಟ್ ಫೋನ್ ಇದ್ದು, ಯುವಕರ ಚಿತ್ರಗಳನ್ನು ಎಐ ತಂತ್ರಜ್ಞಾನದ ಮೂಲಕ ಇನ್ಯಾರದ್ದೋ ಹುಡುಗಿಯರ ಜೊತೆಗಿರುವ ರೀತಿ ಕ್ರಿಯೇಟ್ ಮಾಡುತ್ತಿದ್ದಳು. ಆನಂತರ ಆ ಚಿತ್ರವನ್ನು ಯುವಕನ ಕುಟುಂಬಸ್ಥರಿಗೆ ಕಳಿಸಿಕೊಟ್ಟು ಹಣ ಕೊಡದೇ ಇದ್ದರೆ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದಳು. ಆಮೂಲಕ ಹಣ ಗಿಟ್ಟಿಸಿಕೊಳ್ಳುತ್ತಿದ್ದಳು.
ಪೊಲೀಸರು ಆಕೆಯ ಮೊಬೈಲ್ ತಪಾಸಣೆ ನಡೆಸಿದಾಗ, ಬರೋಬ್ಬರಿ 3500 ಮಂದಿ ಜೊತೆಗೆ ಇದೇ ರೀತಿ ಮೋಸದ ಚಾಟಿಂಗ್ ಮಾಡಿರುವುದು ಕಂಡುಬಂದಿದೆ. ಅವರನ್ನೆಲ್ಲ ಬ್ಲಾಕ್ಮೇಲ್ ಮಾಡಿದ್ದಾಳೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
With the advent of the internet and smartphones, our lives have become increasingly intertwined with these technologies. While some utilise them for personal and societal benefit, others exploit them for malicious purposes.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm