ಬ್ರೇಕಿಂಗ್ ನ್ಯೂಸ್
01-02-25 10:11 pm Mangalore Correspondent ಕ್ರೈಂ
ಮಂಗಳೂರು, ಫೆ.1: ಬಂಟ್ವಾಳ ಠಾಣೆ ವ್ಯಾಪ್ತಿಯ ತುಂಬೆ ಟೋಲ್ ಗೇಟ್ ನಲ್ಲಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಹುಡುಗನೊಬ್ಬನಿಗೆ ಕಾರಿನಲ್ಲಿ ಬಂದಿದ್ದ ಯುವಕರು ತದ್ವಾತದ್ವಾ ಹಲ್ಲೆಗೈದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ, ಈ ಕೃತ್ಯವನ್ನು ಇಂಥವರೇ ಮಾಡಿದ್ದಾರೆಂದು ಬರೆದಿರುವ ಬರಹವೂ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಸ್ಕೂಟರಿನಲ್ಲಿ ಹರೆಯದ ಹುಡುಗನೊಬ್ಬ ಟೋಲ್ ಗೇಟ್ ಮುಂದೆ ಬಂದು ನಿಂತಿದ್ದು ಈ ವೇಳೆ ಕಾರಿನಿಂದ ಇಳಿದು ಬಂದ ನಾಲ್ವರು ದೃಢಕಾಯದ ಯುವಕರು ಆತನ ಮೇಲೆ ಹಲ್ಲೆ ನಡೆಸುತ್ತಾರೆ. ಸ್ಕೂಟರ್ ಮೇಲೆ ತುಳಿದು ಹುಡುಗನ ತಲೆ, ಮುಖಕ್ಕೆ ತದ್ವಾತದ್ವಾ ಏಟು ನೀಡುತ್ತಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯವನ್ನು ರೌಡಿ ಮನೋಜ್ ಕೋಡಿಕೆರೆ ತಂಡದ ಯುವಕರು ಮಾಡಿದ್ದಾರೆಂದು ಜೊತೆಗಿರುವ ಬರಹದಲ್ಲಿ ಬರೆಯಲಾಗಿದೆ. ಅಲ್ಲದೆ, ಇಂಥವರೇ ಮಾಡಿದ್ದಾರೆಂದು ನಾಲ್ವರ ಹೆಸರನ್ನೂ ಬರೆದಿದ್ದಾರೆ. ಅಮಾಯಕ ಹುಡುಗನ ಮೇಲೆ ಹಲ್ಲೆ ಮಾಡಿದ್ದರೂ, ಮಂಗಳೂರಿನ ಪೊಲೀಸರು ಸುಮ್ಮನಿದ್ದಾರೆಂದು ಟೀಕಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಠಾಣೆ ಪೊಲೀಸರನ್ನು ಕೇಳಿದರೆ, ಆ ಹುಡುಗನಲ್ಲಿ ದೂರು ಕೊಡಲು ಹೇಳಿದ್ದೇವೆ, ಆತ ಕೊಟ್ಟಿಲ್ಲ. ಹಾಗಾಗಿ ಪ್ರಕರಣ ದಾಖಲು ಮಾಡಿಲ್ಲ. ಹಲ್ಲೆ ಕೃತ್ಯದ ಸಿಸಿಟಿವಿ ವಿಡಿಯೋ ನೋಡಿದ್ದೇವೆ ಎಂದು ತಿಳಿಸಿದ್ದಾರೆ. ಒದೆ ತಿಂದ ಯುವಕ ಯಾರು, ಆತನಿಗೂ ಯುವಕರ ತಂಡಕ್ಕೂ ಏನು ದ್ವೇಷ ಇತ್ತು ಅನ್ನೋದು ತಿಳಿದಿಲ್ಲ. ಏನೋ ಓವರ್ ಟೇಕ್ ದ್ವೇಷದಿಂದ ಹುಡುಗ ಕಾರಿಗೆ ಅಡ್ಡಲಾಗಿ ಸ್ಕೂಟರ್ ಇಟ್ಟಿರುವಂತೆ ತೋರುತ್ತಿದೆ. ಅದಕ್ಕಾಗಿ ಯುವಕರು ಹಲ್ಲೆ ಮಾಡಿದ್ದಾರೆ.
#Mangalore A two-wheeler rider was attacked close to the Bantwal toll; the #Kodikere gang is suspected of being responsible; the video becomes viral. According to the #Bantwal Town Police Inspector, the complainant has not brought any legal action in this issue. #fightintoll pic.twitter.com/0KDcTe02ch
— Headline Karnataka (@hknewsonline) February 1, 2025
Mangalore Two wheeler guy assulted near bantwal toll, kodikere gang alleged behind Assult, video goes viral. Complainant has not filed any case in this matter said Bantwal Town Police Inspector.
01-02-25 05:12 pm
HK News Desk
ಕಾಂಗ್ರೆಸ್ ನಿಂದ ಬಿಜೆಪಿ ಹೋದವರಿಗೆ ಅಲ್ಲಿ ಯಾವ ಸ್ಥಾ...
31-01-25 10:10 pm
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
Cheque bounce, Snehamahi Krishna: ಮುಡಾ ಹಗರಣ ಹ...
31-01-25 02:02 pm
01-02-25 09:51 pm
HK News Desk
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ...
01-02-25 02:10 pm
Sonia Gandhi, president Murmu: ರಾಷ್ಟ್ರಪತಿ ಬಗ್...
31-01-25 09:10 pm
01-02-25 07:47 pm
Mangalore Correspondent
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
Mangalore builder Jitendra Kottary, prasanna...
31-01-25 11:05 pm
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
01-02-25 10:11 pm
Mangalore Correspondent
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm