ಬ್ರೇಕಿಂಗ್ ನ್ಯೂಸ್
01-02-25 10:11 pm Mangalore Correspondent ಕ್ರೈಂ
ಮಂಗಳೂರು, ಫೆ.1: ಬಂಟ್ವಾಳ ಠಾಣೆ ವ್ಯಾಪ್ತಿಯ ತುಂಬೆ ಟೋಲ್ ಗೇಟ್ ನಲ್ಲಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಹುಡುಗನೊಬ್ಬನಿಗೆ ಕಾರಿನಲ್ಲಿ ಬಂದಿದ್ದ ಯುವಕರು ತದ್ವಾತದ್ವಾ ಹಲ್ಲೆಗೈದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ, ಈ ಕೃತ್ಯವನ್ನು ಇಂಥವರೇ ಮಾಡಿದ್ದಾರೆಂದು ಬರೆದಿರುವ ಬರಹವೂ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಸ್ಕೂಟರಿನಲ್ಲಿ ಹರೆಯದ ಹುಡುಗನೊಬ್ಬ ಟೋಲ್ ಗೇಟ್ ಮುಂದೆ ಬಂದು ನಿಂತಿದ್ದು ಈ ವೇಳೆ ಕಾರಿನಿಂದ ಇಳಿದು ಬಂದ ನಾಲ್ವರು ದೃಢಕಾಯದ ಯುವಕರು ಆತನ ಮೇಲೆ ಹಲ್ಲೆ ನಡೆಸುತ್ತಾರೆ. ಸ್ಕೂಟರ್ ಮೇಲೆ ತುಳಿದು ಹುಡುಗನ ತಲೆ, ಮುಖಕ್ಕೆ ತದ್ವಾತದ್ವಾ ಏಟು ನೀಡುತ್ತಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯವನ್ನು ರೌಡಿ ಮನೋಜ್ ಕೋಡಿಕೆರೆ ತಂಡದ ಯುವಕರು ಮಾಡಿದ್ದಾರೆಂದು ಜೊತೆಗಿರುವ ಬರಹದಲ್ಲಿ ಬರೆಯಲಾಗಿದೆ. ಅಲ್ಲದೆ, ಇಂಥವರೇ ಮಾಡಿದ್ದಾರೆಂದು ನಾಲ್ವರ ಹೆಸರನ್ನೂ ಬರೆದಿದ್ದಾರೆ. ಅಮಾಯಕ ಹುಡುಗನ ಮೇಲೆ ಹಲ್ಲೆ ಮಾಡಿದ್ದರೂ, ಮಂಗಳೂರಿನ ಪೊಲೀಸರು ಸುಮ್ಮನಿದ್ದಾರೆಂದು ಟೀಕಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಠಾಣೆ ಪೊಲೀಸರನ್ನು ಕೇಳಿದರೆ, ಆ ಹುಡುಗನಲ್ಲಿ ದೂರು ಕೊಡಲು ಹೇಳಿದ್ದೇವೆ, ಆತ ಕೊಟ್ಟಿಲ್ಲ. ಹಾಗಾಗಿ ಪ್ರಕರಣ ದಾಖಲು ಮಾಡಿಲ್ಲ. ಹಲ್ಲೆ ಕೃತ್ಯದ ಸಿಸಿಟಿವಿ ವಿಡಿಯೋ ನೋಡಿದ್ದೇವೆ ಎಂದು ತಿಳಿಸಿದ್ದಾರೆ. ಒದೆ ತಿಂದ ಯುವಕ ಯಾರು, ಆತನಿಗೂ ಯುವಕರ ತಂಡಕ್ಕೂ ಏನು ದ್ವೇಷ ಇತ್ತು ಅನ್ನೋದು ತಿಳಿದಿಲ್ಲ. ಏನೋ ಓವರ್ ಟೇಕ್ ದ್ವೇಷದಿಂದ ಹುಡುಗ ಕಾರಿಗೆ ಅಡ್ಡಲಾಗಿ ಸ್ಕೂಟರ್ ಇಟ್ಟಿರುವಂತೆ ತೋರುತ್ತಿದೆ. ಅದಕ್ಕಾಗಿ ಯುವಕರು ಹಲ್ಲೆ ಮಾಡಿದ್ದಾರೆ.
#Mangalore A two-wheeler rider was attacked close to the Bantwal toll; the #Kodikere gang is suspected of being responsible; the video becomes viral. According to the #Bantwal Town Police Inspector, the complainant has not brought any legal action in this issue. #fightintoll pic.twitter.com/0KDcTe02ch
— Headline Karnataka (@hknewsonline) February 1, 2025
Mangalore Two wheeler guy assulted near bantwal toll, kodikere gang alleged behind Assult, video goes viral. Complainant has not filed any case in this matter said Bantwal Town Police Inspector.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 07:40 pm
Mangalore Correspondent
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
ಪೊಲೀಸರಿಂದ ಅಧಿಕಾರ ದುರುಪಯೋಗ, ದಬ್ಬಾಳಿಕೆ ; ಬೆನ್ನು...
18-09-25 04:31 pm
Mangalore, Traffic Police: ನಂಗೆ ಕೈಮಾಡಲು ನಿಂಗೇ...
18-09-25 02:42 pm
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm