ಬ್ರೇಕಿಂಗ್ ನ್ಯೂಸ್
01-02-25 10:11 pm Mangalore Correspondent ಕ್ರೈಂ
ಮಂಗಳೂರು, ಫೆ.1: ಬಂಟ್ವಾಳ ಠಾಣೆ ವ್ಯಾಪ್ತಿಯ ತುಂಬೆ ಟೋಲ್ ಗೇಟ್ ನಲ್ಲಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಹುಡುಗನೊಬ್ಬನಿಗೆ ಕಾರಿನಲ್ಲಿ ಬಂದಿದ್ದ ಯುವಕರು ತದ್ವಾತದ್ವಾ ಹಲ್ಲೆಗೈದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ, ಈ ಕೃತ್ಯವನ್ನು ಇಂಥವರೇ ಮಾಡಿದ್ದಾರೆಂದು ಬರೆದಿರುವ ಬರಹವೂ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಸ್ಕೂಟರಿನಲ್ಲಿ ಹರೆಯದ ಹುಡುಗನೊಬ್ಬ ಟೋಲ್ ಗೇಟ್ ಮುಂದೆ ಬಂದು ನಿಂತಿದ್ದು ಈ ವೇಳೆ ಕಾರಿನಿಂದ ಇಳಿದು ಬಂದ ನಾಲ್ವರು ದೃಢಕಾಯದ ಯುವಕರು ಆತನ ಮೇಲೆ ಹಲ್ಲೆ ನಡೆಸುತ್ತಾರೆ. ಸ್ಕೂಟರ್ ಮೇಲೆ ತುಳಿದು ಹುಡುಗನ ತಲೆ, ಮುಖಕ್ಕೆ ತದ್ವಾತದ್ವಾ ಏಟು ನೀಡುತ್ತಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯವನ್ನು ರೌಡಿ ಮನೋಜ್ ಕೋಡಿಕೆರೆ ತಂಡದ ಯುವಕರು ಮಾಡಿದ್ದಾರೆಂದು ಜೊತೆಗಿರುವ ಬರಹದಲ್ಲಿ ಬರೆಯಲಾಗಿದೆ. ಅಲ್ಲದೆ, ಇಂಥವರೇ ಮಾಡಿದ್ದಾರೆಂದು ನಾಲ್ವರ ಹೆಸರನ್ನೂ ಬರೆದಿದ್ದಾರೆ. ಅಮಾಯಕ ಹುಡುಗನ ಮೇಲೆ ಹಲ್ಲೆ ಮಾಡಿದ್ದರೂ, ಮಂಗಳೂರಿನ ಪೊಲೀಸರು ಸುಮ್ಮನಿದ್ದಾರೆಂದು ಟೀಕಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಠಾಣೆ ಪೊಲೀಸರನ್ನು ಕೇಳಿದರೆ, ಆ ಹುಡುಗನಲ್ಲಿ ದೂರು ಕೊಡಲು ಹೇಳಿದ್ದೇವೆ, ಆತ ಕೊಟ್ಟಿಲ್ಲ. ಹಾಗಾಗಿ ಪ್ರಕರಣ ದಾಖಲು ಮಾಡಿಲ್ಲ. ಹಲ್ಲೆ ಕೃತ್ಯದ ಸಿಸಿಟಿವಿ ವಿಡಿಯೋ ನೋಡಿದ್ದೇವೆ ಎಂದು ತಿಳಿಸಿದ್ದಾರೆ. ಒದೆ ತಿಂದ ಯುವಕ ಯಾರು, ಆತನಿಗೂ ಯುವಕರ ತಂಡಕ್ಕೂ ಏನು ದ್ವೇಷ ಇತ್ತು ಅನ್ನೋದು ತಿಳಿದಿಲ್ಲ. ಏನೋ ಓವರ್ ಟೇಕ್ ದ್ವೇಷದಿಂದ ಹುಡುಗ ಕಾರಿಗೆ ಅಡ್ಡಲಾಗಿ ಸ್ಕೂಟರ್ ಇಟ್ಟಿರುವಂತೆ ತೋರುತ್ತಿದೆ. ಅದಕ್ಕಾಗಿ ಯುವಕರು ಹಲ್ಲೆ ಮಾಡಿದ್ದಾರೆ.
#Mangalore A two-wheeler rider was attacked close to the Bantwal toll; the #Kodikere gang is suspected of being responsible; the video becomes viral. According to the #Bantwal Town Police Inspector, the complainant has not brought any legal action in this issue. #fightintoll pic.twitter.com/0KDcTe02ch
— Headline Karnataka (@hknewsonline) February 1, 2025
Mangalore Two wheeler guy assulted near bantwal toll, kodikere gang alleged behind Assult, video goes viral. Complainant has not filed any case in this matter said Bantwal Town Police Inspector.
16-04-25 09:07 pm
Bangalore Correspondent
Bigg Boss Kannada, Rajath arrested: ರೀಲ್ಸ್ ಶೋ...
16-04-25 06:42 pm
CM Siddaramaiah, Lokayukta, Muda: ಸಿಎಂ ಸಿದ್ದರ...
15-04-25 08:44 pm
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
16-04-25 08:22 pm
Mangalore Correspondent
Asif Apatbandava, Rauf Bengre Honey Trap, Man...
16-04-25 02:02 pm
Panambur Bike Accident, Mangalore: ಪಣಂಬೂರಿನಲ್...
16-04-25 01:29 pm
NIA, Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ...
15-04-25 09:57 pm
Drowning, Surathkal Beach, Mangalore, News: ಮ...
15-04-25 09:21 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm