ಬ್ರೇಕಿಂಗ್ ನ್ಯೂಸ್
25-02-25 08:10 pm Mangalore Correspondent ಕ್ರೈಂ
ಮಂಗಳೂರು, ಫೆ.25: ಯಾವುದೇ ಅಪರಾಧ ಪ್ರಕರಣದಲ್ಲಿ ಪೊಲೀಸರು ಕರಾರುವಾಕ್ ಕೆಲಸ ಮಾಡಿದರೆ, ಅದಕ್ಕೆ ತಕ್ಕಂತೆ ಚಾರ್ಜ್ ಶೀಟ್ ಹಾಕಿದರೆ ಆರೋಪಿಗಳು ಕೋರ್ಟ್ ಕಟಕಟೆಯಲ್ಲು ಶಿಕ್ಷೆಗೆ ಒಳಗಾಗುತ್ತಾರೆ. ಯಾಕಂದ್ರೆ, ಇಂತಹ ಅಪರಾಧಕ್ಕೆ ಇಂಥದ್ದೇ ಶಿಕ್ಷೆ ಎನ್ನುವುದನ್ನು ಕಾನೂನು ಭಾಷೆಯಲ್ಲಿ ಮೊದಲು ನಮೂದಿಸುವುದು ಪೊಲೀಸರ ಕೆಲಸ. ಅದಕ್ಕಾಗಿಯೇ ಪೊಲೀಸರಿಗೆ ಅಪರಾಧ ಸಂಹಿತೆಯ ಬಗ್ಗೆ ತರಬೇತಿ ಆಗಿರುತ್ತದೆ. ಕೋರ್ಟಿನಲ್ಲಿ ಸಾಕ್ಷ್ಯಗಳನ್ನು ಮುಂದಿಟ್ಟು ಪೊಲೀಸರು ಅಪರಾಧ ಸಾಬೀತುಪಡಿಸಿದರೆ, ಅದನ್ನು ಅನುಮೋದಿಸಿ ಶಿಕ್ಷೆ ಕೊಡುವುದು ನ್ಯಾಯಾಂಗದ ಕೆಲಸ.
ಕೆಲವೊಮ್ಮೆ ಆರೋಪಿಗಳು ಪ್ರಭಾವಿಗಳಾದ ಸಂದರ್ಭದಲ್ಲಿ ತನಿಖೆ ನಡೆಸುವ ಪೊಲೀಸರನ್ನೇ ಖರೀದಿಸಿಬಿಡುವುದು, ತಮಗೆ ಬೇಕಾದಂತೆ ಸಡಿಲ ಚಾರ್ಜ್ ಶೀಟ್ ಹಾಕಿಸುವಂತೆ ಮಾಡುವುದು, ಕೋರ್ಟಿನಲ್ಲಿ ಸಾಕ್ಷಿಗಳನ್ನು ಪ್ರಭಾವಿಸಿ ಕೇಸು ಬಿದ್ದು ಹೋಗುವಂತೆ ಮಾಡುವುದೂ ಇರುತ್ತದೆ. ಸೈಬರ್ ಅಪರಾಧ ಪ್ರಕರಣ ಒಂದರಲ್ಲಿ ಬಂಧಿತರಾಗಿದ್ದ ಆರೋಪಿಗಳ ಜೊತೆಗೆ ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಸಲುಗೆಯಿಂದ ವರ್ತಿಸಿರುವ ಆರೋಪ ಕೇಳಿಬಂದಿದ್ದು, ಇದರ ಫೋಟೋ ಜಾಲತಾಣದಲ್ಲಿ ಲೀಕ್ ಆಗಿದೆ. ಆಮೂಲಕ ಮಂಗಳೂರಿನ ಪೊಲೀಸರೂ ಬಂಧಿತ ಆರೋಪಿಗಳನ್ನು ತನಿಖೆಗೆ ಒಳಪಡಿಸುವುದು ಬಿಟ್ಟು ಅವರ ಪರವಾಗಿ ವರ್ತಿಸಿದ್ದಾರೆಯೇ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಮೂರು ತಿಂಗಳ ಹಿಂದೆ ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೆ 30 ಕೋಟಿಗೂ ಹೆಚ್ಚು ದೋಖಾ ಮಾಡಿ ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ರಾಜಸ್ಥಾನಿ ಮೂಲದ ಇಬ್ಬರು ಕತರ್ನಾಕ್ ಆರೋಪಿಗಳನ್ನು ಮಂಗಳೂರಿನ ಉರ್ವಾ ಪೊಲೀಸರು ಬಾಡಿ ವಾರೆಂಟ್ ಪಡೆದು ಕರೆತಂದಿದ್ದರು. ಉರ್ವಾದಲ್ಲಿ ದಾಖಲಾದ ಪ್ರಕರಣದಲ್ಲಿ ರಾಜಕುಮಾರ್ ಮೀನಾ(26) ಮತ್ತು ಸುಭಾಸ್ ಗುಜ್ಜರ್ (27) ಎಂಬ ಇಬ್ಬರನ್ನು 2024ರ ನವೆಂಬರ್ 1ರಂದು ಅರೆಸ್ಟ್ ಮಾಡಲಾಗಿತ್ತು. ಬಂಧಿತರನ್ನು ನವೆಂಬರ್ ತಿಂಗಳಲ್ಲೇ ಹೆಚ್ಚಿನ ವಿಚಾರಣೆ ಸಲುವಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದು, ಈ ವೇಳೆ ರಾಜಸ್ಥಾನಕ್ಕೂ ಕರೆದೊಯ್ಯಲಾಗಿತ್ತು.
ಆದರೆ ಪೊಲೀಸರು ಆರೋಪಿಗಳ ಜೊತೆಗೇ ಸಲುಗೆ ಬೆಳೆಸಿಕೊಂಡು ರಾಜಸ್ಥಾನದ ಪ್ರವಾಸಿ ಸ್ಥಳಗಳಿಗೆ ಸುತ್ತಾಟ ಮಾಡಿರುವ ಫೋಟೋಗಳು ಲಭ್ಯವಾಗಿದ್ದು, ಪೊಲೀಸರ ಕರ್ತವ್ಯದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಆರೋಪಿ ರಾಜಕುಮಾರ್ ಮೀನಾ ಮೊಬೈಲ್ ಹಿಡಿದು ತಾನೇ ಪೊಲೀಸರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವ ಫೋಟೋಗಳಿವೆ. ಮತ್ತೊಂದು ಫೋಟೋದಲ್ಲಿ ಪೊಲೀಸ್ ಸಿಬಂದಿಯೇ ಆರೋಪಿ ಹೆಗಲಿಗೆ ಕೈಹಾಕಿರುವ ರೀತಿಯ ಪೋಸು ಇದೆ. ಇದನ್ನೆಲ್ಲ ನೋಡಿದರೆ ಕೋಟ್ಯಂತರ ವಹಿವಾಟು ನಡೆಸಿ ಸಿಕ್ಕಿಬಿದ್ದ ಆರೋಪಿಗಳು, ಉರ್ವಾ ಠಾಣೆ ಪೊಲೀಸರನ್ನು ಪ್ರಭಾವಿಸಿದ್ದಾರೆಯೇ ಎನ್ನುವ ಸಂಶಯ ಮೂಡುವಂತಾಗಿದೆ.
ಇದಲ್ಲದೆ, ಠಾಣೆಗೆ ಬಂದಿದ್ದ ಕಾಲೇಜು ಒಂದರ ವಿದ್ಯಾರ್ಥಿಗಳಿಗೆ ಉರ್ವಾ ಠಾಣೆಯ ಇನ್ಸ್ ಪೆಕ್ಟರ್ ಭಾರತಿ ಅವರು ಕ್ಲಾಸ್ ಮಾಡುತ್ತಿರುವಾಗಲೇ ಸೈಬರ್ ಪ್ರಕರಣದ ಆರೋಪಿಯನ್ನು ಜೊತೆಗೆ ನಿಲ್ಲಿಸಿ, ಆತನಿಂದಲೂ ಹೆಚ್ಚಿನ ಪಾಠ ಹೇಳಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ರೀತಿ ಪಾಠ ಹೇಳಿಸಿಕೊಳ್ಳುತ್ತಿರುವ ಫೋಟೋ ಲಭ್ಯವಾಗಿದ್ದು, ಸೈಬರ್ ಅಪರಾಧ ಎಸಗಿದ ಆರೋಪಿಯಿಂದಲೇ ಪೊಲೀಸರು ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿ ಪಾಠ ಮಾಡಿಸಿರುವಂತಿದೆ. ಆರೋಪಿಗಳು ಸೈಬರ್ ವಿಚಾರದಲ್ಲಿ ಎಷ್ಟೇ ಎಕ್ಸ್ ಪರ್ಟ್ ಆಗಿದ್ದರೂ, ಅಪರಾಧ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವಾಗ ಅವರನ್ನು ವಿದ್ಯಾರ್ಥಿಗಳ ಮುಂದೆ ರೋಲ್ ಮಾಡೆಲ್ ಮಾಡುವುದು ತಪ್ಪಾಗುತ್ತದೆ. ಈ ತಪ್ಪನ್ನು ಉರ್ವಾ ಪೊಲೀಸರು ಮಾಡಿದ್ದಾರೆ.
ನವೆಂಬರ್ ತಿಂಗಳಲ್ಲಿ ಆರೋಪಿಗಳ ಜೊತೆಗೆ ಪೊಲೀಸರು ಸುತ್ತಾಟ ಮಾಡಿದ್ದರೂ, ಇದರ ಫೋಟೋ ಮೂರು ತಿಂಗಳ ಬಳಿಕ ಲೀಕ್ ಆಗಿದೆ. ಉರ್ವಾ ಠಾಣೆಯಲ್ಲಿ ಗುಂಪುಗಾರಿಕೆ ಇದೆ ಎನ್ನಲಾಗುತ್ತಿದ್ದು, ಇದೇ ವೈಷಮ್ಯದಲ್ಲಿ ಒಂದು ಕಡೆಯವರು ಈ ಫೋಟೋ ಲೀಕ್ ಮಾಡಿದ್ದಾರೆಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಮಾಹಿತಿ ಕೇಳಲು ಕಮಿಷನರ್ ಅಥವಾ ಮಂಗಳೂರು ನಗರ ಡಿಸಿಪಿಗೆ ಫೋನ್ ಮಾಡಿದರೆ, ಸಂಪರ್ಕಕ್ಕೆ ಸಿಕ್ಕಿಲ್ಲ.
In a surprising turn of events, the Urwa police in Mangalore, led by Inspector Bharathi, recently apprehended an online fraudster from Rajasthan who allegedly orchestrated a scam that defrauded Amazon of a staggering Rs 30 crores. While the police team’s successful operation should be lauded, the situation took an unexpected twist when pictures surfaced showing the officers enjoying leisurely activities and sightseeing with the accused
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm