ಬ್ರೇಕಿಂಗ್ ನ್ಯೂಸ್
22-04-21 05:27 pm Mangalore Correspondent ಕ್ರೈಂ
ಮಂಗಳೂರು, ಎ.22: ಕೇರಳದಲ್ಲಿ ನಾಯಿಯನ್ನು ದರ ದರನೆ ಎಳ್ಕೊಂಡು ಹೋಗಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಅದರ ಬಗ್ಗೆ ಮಾನವೀಯತೆ ಇಲ್ಲದವರು ಎಂಬ ಆಕ್ರೋಶವೂ ಕೇಳಿಬಂದಿತ್ತು. ಆದರೆ, ಈಗ ಅಂಥದ್ದೇ ಘಟನೆ ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲೂ ನಡೆದಿದೆ. ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಬೈಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳ್ಕೊಂಡು ಹೋಗುವ ಘಟನೆಯ ವಿಡಿಯೋ ವೈರಲ್ ಆಗಿದ್ದು, ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸುರತ್ಕಲ್ ಬಳಿಯ ಎನ್ಐಟಿಕೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ವಿಡಿಯೋ ನೋಡಿದರೆ ಅಲ್ಲಿನ ಮೇಲ್ಸೇತುವೆಯಲ್ಲಿ ವಿಡಿಯೋ ಅಂತ್ಯವಾಗುತ್ತದೆ. ಬೈಕಿಗೆ ನಾಯಿಯನ್ನು ಕಟ್ಟಿದ್ದು, ಬೈಕಿನಲ್ಲಿ ಇಬ್ಬರು ಮಧ್ಯ ವಯಸ್ಕರು ಕುಳಿತಿದ್ದಾರೆ. ಇದನ್ನು ಇನ್ಯಾರೋ ಬೇರೊಂದು ಬೈಕಿನಲ್ಲಿದ್ದವರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.
ಎಪ್ರಿಲ್ 15ರಂದು ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗುತ್ತಿದೆ. ವಿಡಿಯೋ ಈಗ ಭಾರೀ ಷೇರ್ ಆಗಿದ್ದು ಮನುಷ್ಯತ್ವ ಇಲ್ಲದೆ ವರ್ತಿಸಿದವರನ್ನು ಬಂಧಿಸುವಂತೆ ಒತ್ತಾಯ ಕೇಳಿಬಂದಿದೆ. ಮಂಗಳೂರಿನ ಪೊಲೀಸರು ಇನ್ನೂ ಇದರ ಬಗ್ಗೆ ಎಚ್ಚತ್ತುಕೊಂಡಿಲ್ಲ.
ಕೇರಳದ ಮಲ್ಲಪ್ಪುರಂ ಜಿಲ್ಲೆಯ ಎಡಕ್ಕರ ಎಂಬಲ್ಲಿ ಇದೇ ಎಪ್ರಿಲ್ 15ರಂದು ಇದೇ ರೀತಿ ನಾಯಿಯನ್ನು ಒಬ್ಬಾತ ಬೈಕಿಗೆ ಕಟ್ಟಿ ಎಳ್ಕೊಂಡು ಹೋದ ಘಟನೆ ನಡೆದಿತ್ತು. ವಿಡಿಯೋ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಕ್ಸೇವಿಯರ್ ಎನ್ನುವ 53 ವರ್ಷದ ಆರೋಪಿ, ಆತನ ಚಪ್ಪಲಿಯನ್ನು ಕಚ್ಚಿ ತುಂಡರಿಸಿದ್ದ ಕೋಪದಲ್ಲಿ ಮನೆಯಲ್ಲಿದ್ದ ನಾಯಿಯನ್ನು ರಸ್ತೆಯಲ್ಲಿ ಎಳ್ಕೊಂಡು ಹೋಗಿದ್ದ.
A pet dog was tied to a two-wheeler and dragged along a road at NITK Surathkal in Mangalore. The incident took place on April 15th, 2021. A video of the incident has gone viral.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 06:54 pm
Mangalore Correspondent
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
17-09-25 06:04 pm
Mangalore Correspondent
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm