ಬ್ರೇಕಿಂಗ್ ನ್ಯೂಸ್
18-03-22 10:52 pm HK Desk news ಕ್ರೈಂ
ನವದೆಹಲಿ, ಮಾ.18: ಪ್ರಾಥಮಿಕ ಶಾಲೆಯಲ್ಲಿದ್ದಾಗ ಶಿಕ್ಷಕಿ ಅವಮಾನಿಸಿದ್ದನ್ನೇ ಸೇಡು ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ 30 ವರ್ಷಗಳ ನಂತರ ಆಕೆಯನ್ನು ಇರಿದು ಕೊಂದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.
1990ರಲ್ಲಿ ಶಿಕ್ಷಕಿಯಾಗಿದ್ದ ಮಾರಿಯಾ ವೆರ್ಲಿಂಡೆನ್ ಏಳು ವರ್ಷದ ಶಾಲಾ ಬಾಲಕ ಗುಂಟರ್ ಉವೆಂಟ್ಸ್ ಎಂಬಾತನ ಬಗ್ಗೆ ಮಾಡಿದ್ದ ಕಾಮೆಂಟ್ಗಳನ್ನು ಸೇಡು ಆಗಿ ಇರಿಸಿಕೊಂಡಿದ್ದ ಆತ ಮೂರು ದಶಕದ ಬಳಿಕ ಅದನ್ನು ತೀರಿಸಿಕೊಂಡಿದ್ದಾನೆ.
2020ರ ನವೆಂಬರ್ ನಲ್ಲಿ ಆಂಟ್ವರ್ಪ್ ನಗರದ ಹೆರೆಂಟಲ್ಸ್ ಎಂಬಲ್ಲಿನ ತನ್ನ ಮನೆಯಲ್ಲಿ 59 ವರ್ಷದ ವೆರ್ಲಿಂಡೆನ್ ಎಂಬ ಶಿಕ್ಷಕಿಯ ಘೋರ ಹತ್ಯೆ ನಡೆದಿತ್ತು. ಘಟನೆ ಬಗ್ಗೆ ಬೆಲ್ಜಿಯಂ ಪೊಲೀಸರು ತನಿಖೆ ನಡೆಸಿದ್ದು ನೂರಾರು ಡಿಎನ್ಎ ಮಾದರಿಗಳನ್ನು ಪಡೆದು ತನಿಖೆ ಕೈಗೊಂಡರೂ ಕೊಲೆಗಾರನನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಕೊನೆಗೆ, ಆಕೆಯ ಪತಿ ಸಾಕ್ಷಿಗಳಿಗಾಗಿ ಸಾರ್ವಜನಿಕ ಮನವಿಯನ್ನು ಮಾಡಿದ್ದರು.
ಆಕೆಯ ದೇಹದ ಮೇಲೆ 101 ಬಾರಿ ಇರಿಯಲಾಗಿದ್ದು ಭೀಭತ್ಸ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಶವದ ಪಕ್ಕದಲ್ಲಿದ್ದ ಡೈನಿಂಗ್ ಟೇಬಲ್ ಮೇಲಿದ್ದ ಹಣದ ಪರ್ಸ್ ಮುಟ್ಟದೆ ಇದ್ದದ್ದು ನೋಡಿದರೆ ಹಣಕ್ಕಾಗಿ ನಡೆದ ಕೊಲೆ ಅಲ್ಲ ಎಂಬುದು ಪೊಲೀಸರಿಗೆ ತಿಳಿದುಬಂದಿತ್ತು. 2020ರ ನವೆಂಬರ್ 20ರಂದು ಕೊಲೆ ನಡೆದಿತ್ತು. ಹದಿನಾರು ತಿಂಗಳ ನಂತರ ಇತ್ತೀಚೆಗೆ ಆರೋಪಿ ಗುಂಟರ್ ಉವೆಂಟ್ಸ್ ತನ್ನ ಸ್ನೇಹಿತರ ಬಳಿ ಕೊಲೆ ವಿಚಾರವನ್ನು ಹೇಳಿಕೊಂಡು ಸಾಧನೆ ಎಂಬಂತೆ ಬಿಂಬಿಸಿದ್ದ.
ಅತ್ಯಂತ ನಿಗೂಢವಾಗಿದ್ದ ಕೊಲೆ ಪ್ರಕರಣದ ಬಗ್ಗೆ ತಿಳಿಯುತ್ತಲೇ ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ, ತನಿಖೆ ಕೈಗೊಂಡ ಪೊಲೀಸರು ಆರೋಪಿ ಉವೆಂಟ್ಸ್ ನನ್ನು ಬಂಧಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕುರುಹುಗಳೊಂದಿಗೆ ಹೋಲಿಸಲು ಉವೆಂಟ್ಸ್ ಡಿಎನ್ಎ ಮಾದರಿಯನ್ನು ಪಡೆಯಲಾಗಿದೆ.
30 Years After Humiliation at School, Ex-Pupil Admits to Stabbing Teacher 101 Times.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm