ಬ್ರೇಕಿಂಗ್ ನ್ಯೂಸ್
18-03-22 10:52 pm HK Desk news ಕ್ರೈಂ
ನವದೆಹಲಿ, ಮಾ.18: ಪ್ರಾಥಮಿಕ ಶಾಲೆಯಲ್ಲಿದ್ದಾಗ ಶಿಕ್ಷಕಿ ಅವಮಾನಿಸಿದ್ದನ್ನೇ ಸೇಡು ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ 30 ವರ್ಷಗಳ ನಂತರ ಆಕೆಯನ್ನು ಇರಿದು ಕೊಂದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.
1990ರಲ್ಲಿ ಶಿಕ್ಷಕಿಯಾಗಿದ್ದ ಮಾರಿಯಾ ವೆರ್ಲಿಂಡೆನ್ ಏಳು ವರ್ಷದ ಶಾಲಾ ಬಾಲಕ ಗುಂಟರ್ ಉವೆಂಟ್ಸ್ ಎಂಬಾತನ ಬಗ್ಗೆ ಮಾಡಿದ್ದ ಕಾಮೆಂಟ್ಗಳನ್ನು ಸೇಡು ಆಗಿ ಇರಿಸಿಕೊಂಡಿದ್ದ ಆತ ಮೂರು ದಶಕದ ಬಳಿಕ ಅದನ್ನು ತೀರಿಸಿಕೊಂಡಿದ್ದಾನೆ.
2020ರ ನವೆಂಬರ್ ನಲ್ಲಿ ಆಂಟ್ವರ್ಪ್ ನಗರದ ಹೆರೆಂಟಲ್ಸ್ ಎಂಬಲ್ಲಿನ ತನ್ನ ಮನೆಯಲ್ಲಿ 59 ವರ್ಷದ ವೆರ್ಲಿಂಡೆನ್ ಎಂಬ ಶಿಕ್ಷಕಿಯ ಘೋರ ಹತ್ಯೆ ನಡೆದಿತ್ತು. ಘಟನೆ ಬಗ್ಗೆ ಬೆಲ್ಜಿಯಂ ಪೊಲೀಸರು ತನಿಖೆ ನಡೆಸಿದ್ದು ನೂರಾರು ಡಿಎನ್ಎ ಮಾದರಿಗಳನ್ನು ಪಡೆದು ತನಿಖೆ ಕೈಗೊಂಡರೂ ಕೊಲೆಗಾರನನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಕೊನೆಗೆ, ಆಕೆಯ ಪತಿ ಸಾಕ್ಷಿಗಳಿಗಾಗಿ ಸಾರ್ವಜನಿಕ ಮನವಿಯನ್ನು ಮಾಡಿದ್ದರು.
ಆಕೆಯ ದೇಹದ ಮೇಲೆ 101 ಬಾರಿ ಇರಿಯಲಾಗಿದ್ದು ಭೀಭತ್ಸ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಶವದ ಪಕ್ಕದಲ್ಲಿದ್ದ ಡೈನಿಂಗ್ ಟೇಬಲ್ ಮೇಲಿದ್ದ ಹಣದ ಪರ್ಸ್ ಮುಟ್ಟದೆ ಇದ್ದದ್ದು ನೋಡಿದರೆ ಹಣಕ್ಕಾಗಿ ನಡೆದ ಕೊಲೆ ಅಲ್ಲ ಎಂಬುದು ಪೊಲೀಸರಿಗೆ ತಿಳಿದುಬಂದಿತ್ತು. 2020ರ ನವೆಂಬರ್ 20ರಂದು ಕೊಲೆ ನಡೆದಿತ್ತು. ಹದಿನಾರು ತಿಂಗಳ ನಂತರ ಇತ್ತೀಚೆಗೆ ಆರೋಪಿ ಗುಂಟರ್ ಉವೆಂಟ್ಸ್ ತನ್ನ ಸ್ನೇಹಿತರ ಬಳಿ ಕೊಲೆ ವಿಚಾರವನ್ನು ಹೇಳಿಕೊಂಡು ಸಾಧನೆ ಎಂಬಂತೆ ಬಿಂಬಿಸಿದ್ದ.
ಅತ್ಯಂತ ನಿಗೂಢವಾಗಿದ್ದ ಕೊಲೆ ಪ್ರಕರಣದ ಬಗ್ಗೆ ತಿಳಿಯುತ್ತಲೇ ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ, ತನಿಖೆ ಕೈಗೊಂಡ ಪೊಲೀಸರು ಆರೋಪಿ ಉವೆಂಟ್ಸ್ ನನ್ನು ಬಂಧಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕುರುಹುಗಳೊಂದಿಗೆ ಹೋಲಿಸಲು ಉವೆಂಟ್ಸ್ ಡಿಎನ್ಎ ಮಾದರಿಯನ್ನು ಪಡೆಯಲಾಗಿದೆ.
30 Years After Humiliation at School, Ex-Pupil Admits to Stabbing Teacher 101 Times.
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
01-11-25 01:31 pm
Mangalore Correspondent
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm