ಬ್ರೇಕಿಂಗ್ ನ್ಯೂಸ್
09-05-22 01:35 pm Mangalore Correspondent ಕ್ರೈಂ
ಮಂಗಳೂರು, ಮೇ 9: ಎಮ್ಮೆಕೆರೆ ಮೈದಾನದಲ್ಲಿ ವಾರದ ಹಿಂದೆ ನಡೆದ ರೌಡಿಶೀಟರ್ ರಾಹುಲ್ ತಿಂಗಳಾಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಮಹೇಂದ್ರ ಶೆಟ್ಟಿ(27), ಅಕ್ಷಯ್ ಕುಮಾರ್(25), ಸುಶಿತ್ (20), ದಿಲ್ಲೇಶ್ ಬಂಗೇರ(21), ಶುಭಂ ಶೆಟ್ಟಿ(26), ವಿಷ್ಣು (20) ಬಂಧಿತ ಆರೋಪಿಗಳು. ಇವರೆಲ್ಲ ಎಮ್ಮೆಕೆರೆ ಮತ್ತು ಬೋಳಾರ ಭಾಗದ ನಿವಾಸಿಗಳು. ಎಪ್ರಿಲ್ 28ರಂದು ಎಮ್ಮೆಕೆರೆ ಮೈದಾನದಲ್ಲಿ ಕೋಳಿ ಅಂಕಕ್ಕೆ ಬಂದಿದ್ದ ರಾಹುಲ್ ತಿಂಗಳಾಯ ಅಲಿಯಾಸ್ ಕಕ್ಕೆ ಎಂಬಾತನನ್ನು ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶಿತ್ ಮತ್ತು ದಿಲ್ಲೇಶ್ ಬಂಗೇರ ಎಂಬ ನಾಲ್ವರು ಬೆನ್ನಟ್ಟಿಕೊಂಡು ಬಂದು ಮಾರಕಾಸ್ತ್ರಗಳಿಂದ ಹೊಡೆದು ಕೊಂದು ಹಾಕಿದ್ದರು. ಬಳಿಕ ಎಮ್ಮೆಕೆರೆ ಮೈದಾನದ ಮುಂದಿನ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಬಳಿಗೆ ಎಳೆದೊಯ್ದು ರಾಹುಲ್ ನನ್ನು ಹಾಕಿದ್ದರು. ಕೃತ್ಯದಲ್ಲಿ ನೇರ ಭಾಗಿಯಾದ ಈ ನಾಲ್ವರನ್ನು ಸುರತ್ಕಲ್ ರೈಲ್ವೇ ಸ್ಟೇಶನ್ ಬಳಿಯಿಂದ ಪೊಲೀಸರು ಬಂಧಿಸಿದ್ದಾರೆ.


ಬಂಧಿತರಿಂದ ಮೂರು ತಲವಾರು, ಕತ್ತಿ ನಾಲ್ಕು, ಚೂರಿ ಮೂರು, ಎರಡು ಸ್ಕೂಟರ್, ರಾಯಲ್ ಎನ್ ಫೀಲ್ಡ್ ಬುಲೆಟ್, ಐದು ಮೊಬೈಲ್ ಹ್ಯಾಂಡ್ ಸೆಟ್ ವಶಕ್ಕೆ ಪಡೆಯಲಾಗಿದೆ. ಶುಭಮ್ ಶೆಟ್ಟಿ ಎಂಬಾತ, ರಾಹುಲ್ ಮೇಲಿನ ದ್ವೇಷದಿಂದ ಆತನನ್ನು ಮುಗಿಸಲು ಸಂಚು ಹೂಡಿದ್ದ. ಇದಕ್ಕಾಗಿ ಕಾರ್ತಿಕ್ ಮತ್ತು ಆತನ ತಮ್ಮ ಭರತ್ ಶೆಟ್ಟಿಯನ್ನು ಎಮ್ಮೆಕೆರೆಗೆ ಕರೆದುಕೊಂಡು ಬಂದು ತಂಡದ ಇತರ ಯುವಕರಿಗೆ ಪರಿಚಯ ಮಾಡಿಸಿದ್ದ. ಅಲ್ಲದೆ, ಎರಡೂ ತಂಡದವರಿಗೆ ಹಲ್ಲೆಗೈದಿರುವ ರಾಹುಲ್ ತಿಂಗಳಾಯ ಎಲ್ಲಿ ಸಿಕ್ಕಿದರೂ, ಕೊಲೆ ಮಾಡಬೇಕು ಎಂದು ಟಾರ್ಗೆಟ್ ಕೊಟ್ಟಿದ್ದ. ಘಟನೆ ನಡೆಸಿದ ಬಳಿಕ ಅಕ್ಷಯ್ ಕುಮಾರ್ ಎಂಬಾತನ ಜೊತೆ ಸೇರಿ ಕೃತ್ಯ ಎಸಗಿದ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದ. ಆರೋಪಿ ವಿಷ್ಣು ಇತರರ ಜೊತೆ ಸೇರಿ ಕೃತ್ಯಕ್ಕೆ ಒಳಸಂಚು ರೂಪಿಸಿದ್ದು ಹಾಗೂ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ನೆರವು ನೀಡಿದ್ದ. ಆರೋಪಿ ಸುಶಿತ್ ಗೆ ಸೇರಿದ ಮೊಬೈಲನ್ನು ತನ್ನ ಜೊತೆಗಿಟ್ಟುಕೊಂಡು ಪರಾರಿಯಾಗಲು ಸಹಕರಿಸಿದ್ದ.


ಇದುವರೆಗಿನ ತನಿಖೆಯಲ್ಲಿ ಪ್ರಕರಣದಲ್ಲಿ 13 ಜನ ಆರೋಪಿಗಳು ಭಾಗಿಯಾಗಿರುವುದು ಕಂಡುಬಂದಿದೆ. ಈ ಪೈಕಿ ಎಂಟು ಮಂದಿ ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ. ಸುಶಿತ್ ಮೇಲೆ ಕೊಲೆಯತ್ನ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಹಲ್ಲೆ ಪ್ರಕರಣ ಈ ಹಿಂದೆ ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿತ್ತು.
Six persons were arrested in connection to the murder of rowdy sheeter Rahul alias Kakke Rahul. The 27-year-old rowdy sheeter was hacked to death at Yemmekere ground on April 28. The arrested are identified as Mahendra Shetty (27), Sushith (20) and Vishnu (20) from Yemmekere, Akshay Kumar (25) and Shubam (26) from Bolar, and Dilesh Bangera (21) from Morgansgate.
15-12-25 02:23 pm
Bangalore Correspondent
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
15-12-25 12:19 pm
Udupi Correspondent
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm