ಬ್ರೇಕಿಂಗ್ ನ್ಯೂಸ್
30-07-20 12:43 pm Special Correspondant ಡಿಜಿಟಲ್ ಟೆಕ್
ಚೀನಾ ಸಂಸ್ಥೆಗಳ ಜೊತೆ ಸಹಭಾಗಿತ್ವ ಹೊಂದಿರುವ 250 ಆಪ್ ಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎನ್ನಲಾಗಿದೆ. ಇದರಲ್ಲಿ ಪಬ್ ಜಿ ಆ್ಯಪ್ ಕೂಡ ಒಳಗೊಂಡಿತ್ತು. ಅಚ್ಚರಿ ಎಂದರೆ, ಈಗ ಪಬ್ ಜಿ ತನ್ನ ಪ್ರೈವಸಿ ಪಾಲಿಸಿಯನ್ನು ಅಪ್ಡೇಟ್ ಮಾಡಿದೆ. ಈ ಮೂಲಕ ಬ್ಯಾನ್ ಆಗುವುದರಿಂದ ತಪ್ಪಿಸಿಕೊಳ್ಳಲು ದಾರಿ ಕಂಡು ಕೊಂಡಿದೆ.
ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಕೇಂದ್ರ ಸರ್ಕಾರ 59 ಚೀನಾ ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಮಹತ್ವದ ಕ್ರಮ ಕೈಗೊಂಡಿತ್ತು.
ಬ್ಯಾನ್ ಮಾಡಲಾದ 59 ಆಪ್ ಗಳು ದೇಶದ ಬಳಕೆದಾರರ ಮಾಹಿತಿಯನ್ನು ಕದ್ದು ಚೀನಾ ಸರ್ಕಾರಕ್ಕೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ಭಾರತ ಸರ್ಕಾರ ಸ್ಪಷ್ಟನೆ ನೀಡಿತ್ತು.
ಇದಾದ ಬೆನ್ನಲ್ಲೇ ಚೀನಾ ಸಂಸ್ಥೆಗಳ ಜೊತೆ ಸಹಭಾಗಿತ್ವ ಹೊಂದಿರುವ 250 ಆಪ್ ಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎನ್ನಲಾಗಿದೆ. ಇದರಲ್ಲಿ ಪಬ್ ಜಿ ಆ್ಯಪ್ ಕೂಡ ಒಳಗೊಂಡಿತ್ತು.
ಅಚ್ಚರಿ ಎಂದರೆ, ಈಗ ಪಬ್ ಜಿ ತನ್ನ ಪ್ರೈವಸಿ ಪಾಲಿಸಿಯನ್ನು ಅಪ್ಡೇಟ್ ಮಾಡಿದೆ. ಈ ಮೂಲಕ ಬ್ಯಾನ್ ಆಗುವುದರಿಂದ ತಪ್ಪಿಸಿಕೊಳ್ಳಲು ದಾರಿ ಕಂಡು ಕೊಂಡಿದೆ.
ಪಬ್ ಜಿ ಉಗಮ ಅಗಿದ್ದು ದಕ್ಷಿಣ ಕೊರಿಯಾದಲ್ಲಿ. ಈ ಆಟ ಮೊದಲು ಪರಿಚಯಗೊಂಡಿದ್ದು 2017ರ ಡಿಸೆಂಬರ್ 20ರಂದು. Players Unknown Battleground ಪಬ್ಜಿ ವಿಸ್ತ್ರತ ರೂಪ. ಪಬ್ಜಿ ಕಾರ್ಪೋರೇಷನ್ ಈ ಆಟದ ಸೃಷ್ಟಿಕರ್ತ.
ಪಬ್ ಜಿ ಈ ಮೊದಲು ಕೇವಲ ವಿಡಿಯೋ ಗೇಮ್ ಆಗಿತ್ತು. ನಂತರ ಇದನ್ನು ಪಬ್ ಜಿ ಮೊಬೈಲ್ ಆಗಿ ಬದಲಾಯಿಸಿದ್ದು ಚೀನಾ ಮೂಲದ Tencent Games ಕಂಪನಿ. ಹೀಗಾಗಿ ಪಬ್ ಜಿಯಲ್ಲಿ ಈ ಸಂಸ್ಥೆಯ ಷೇರು ಕೂಡ ಇದೆ.
ಈ ಕಾರಣಕ್ಕೆ ಪಬ್ ಜಿಜಿನ್ನು ಬ್ಯಾನ್ ಮಾಡಲಾಗುತ್ತದೆ ಎನ್ನಲಾಗಿತ್ತು. ಇದಾದ ಬೆನ್ನಲ್ಲೇ ಪ್ರೈವಸಿ ಪಾಲಿಸಿಯನ್ನು ಸಂಸ್ಥೆ ಬದಲಿಸಿದೆ.
ಬದಲಾದ ಪ್ರೈವಸಿ ಪಾಲಿಸಿಯಲ್ಲಿ ಯಾವ ಯಾವ ಡಾಟಾಗಳನ್ನು ಆಪ್ ತೆಗೆದುಕೊಳ್ಳಲಾಗುತ್ತದೆ ಮತ್ತು ಅದನ್ನು ಏಕೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಉಲ್ಲೇಖ ಮಾಡಲಾಗಿದೆ.
ಅಲ್ಲದೆ ಬದಲಾದ ಪಾಲಿಸಿಯಲ್ಲಿ ಭಾರತೀಯರಿಗೆ ಸಂಬಂಧಿಸಿದ ಡೇಟಾ ಭಾರತದಲ್ಲಿಯೇ ಇರುತ್ತದೆ. ಭಾರತೀಯ ಬಳಕೆದಾರರು ಪಬ್ಜಿ ಸಂಸ್ಥೆಯ ಸಂಪರ್ಕಿಸಿ ತಮ್ಮ ಡೇಟಾವನ್ನು ಅಳಿಸಿ ಹಾಕುವ ಹಕ್ಕನ್ನು ಹೊಂದಿದ್ದಾರೆ. ಈ ಮೂಲಕ ಸಂಪೂರ್ಣ ಪಾರದರ್ಶಕತೆಯನ್ನು ತಂದಿದ್ದೇವೆ ಎಂದು ಪಬ್ ಜಿ ಹೇಳಿದೆ.
12-12-25 08:47 pm
Bangalore Correspondent
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
ನಾಯಕತ್ವ ಗೊಂದಲ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾತ...
12-12-25 01:36 pm
12-12-25 11:00 pm
HK News Desk
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
12-12-25 10:28 pm
Mangalore Correspondent
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
12-12-25 01:58 pm
Mangalore Correspondent
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm