ಬ್ರೇಕಿಂಗ್ ನ್ಯೂಸ್
24-05-22 05:25 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 24 : ಬೆಂಗಳೂರಿನಲ್ಲೊಬ್ಬ ರಸ್ತೆ, ಗೋಡೆ, ಕಾಲೇಜು ಆವರಣದಲ್ಲಿ ಸಾರಿ ಸಾರಿ ಎಂದು ಕೆಂಪು ಬಣ್ಣದಲ್ಲಿ ನೂರಾರು ಕಡೆ ರಾತ್ರೋರಾತ್ರಿ ಬರೆದಿಟ್ಟಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. ಯಾರೋ ಪ್ರೀತಿ ಹುಚ್ಚಿನಲ್ಲಿ ಈ ಕೆಲಸ ಮಾಡಿರಬೇಕು. ಆದರೆ ಯಾರು, ಯಾರಿಗೆ ಈ ಸಾರಿ ಕೇಳಿದ್ದಾರೆ ಎನ್ನುವುದರ ಪತ್ತೆಗೆ ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ.
ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕ್ಷಮಿಸು (Sorry) ಎಂದು ಗೋಡೆ, ರಸ್ತೆಯಲ್ಲೆಲ್ಲಾ ಬರೆದಿದ್ದಾನೆ. ಬರೀ ಶಾಲೆ ಅಷ್ಟೇ ಅಲ್ಲ, ಅಲ್ಲೇ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್, ಮೆಟ್ಟಿಲ ಮೇಲೆಲ್ಲಾ 'Sorry' ಎಂದು ಬರೆಯಲಾಗಿದೆ. ಕಾಲೇಜ್ ಮುಂದಿನ ರಸ್ತೆ ಮೇಲೂ ಸಾರಿ ಅಂತ ನೂರಾರು ಸಾರಿ ಬರೆದಿದ್ದು ಕಂಡುಬಂದಿದೆ. ಇಂದು ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಅಚ್ಚರಿಯಾಗಿದ್ದು, ಯಾರು ಯಾರಿಗಾಗಿ ಬರೆದಿದ್ದಾನೆ ಎಂದು ಕುತೂಹಲಗೊಂಡಿದ್ದಾರೆ.
ರಾತ್ರಿ ಬೈಕ್ನಲ್ಲಿ ಬಂದು ಬರೆದ ಅಪರಿಚಿತರು !
ಸ್ಥಳೀಯರು ಹೇಳುವ ಪ್ರಕಾರ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಡ್ಯೂಕ್ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ಯುವಕರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಬಂದಿದ್ದರು. ಅವರೇ ಸ್ಪ್ರೇ ಪೈಂಟ್ ಮೂಲಕ ಸಿಕ್ಕ ಸಿಕ್ಕಲ್ಲಿ ಸಾರಿ ಎಂದು ಬರೆದಿದ್ದಾರೆ ಎನ್ನುವ ಶಂಕೆಯಿದೆ. ಪಾಗಲ್ ಪ್ರೇಮಿಗಳದ್ದೇ ಕೃತ್ಯ ಅಂತ ಸ್ಥಳೀಯರು ಶಂಕಿಸಿದ್ದಾರೆ.
ಬೆಳಗ್ಗೆ ಎದ್ದು ರಸ್ತೆ, ಶಾಲೆ ನೋಡಿದ ಸ್ಥಳೀಯರಿಗೆ ಶಾಕ್ ಆಗಿದೆ. ಬಳಿಕ ಸ್ಛಳೀಯರು ಹಾಗೂ ಕಾಲೇಜ್ ಪ್ರಿನ್ಸಿಪಾಲ್ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬರಹಗಳನ್ನು ಪರಿಶೀಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿ ಅಪರಿಚಿತ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ.
Roads and walls painted with Sorry in Bangalore, public approach police to investigate the case.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm