ಬ್ರೇಕಿಂಗ್ ನ್ಯೂಸ್
27-05-22 10:53 pm HK News Desk ಕರ್ನಾಟಕ
ಬೀದರ್, ಮೇ 27 : ಮಂಡ್ಯದ ಜಾಮಿಯಾ ಮಸೀದಿ, ಮಂಗಳೂರಿನ ಮಳಲಿ ಜುಮ್ಮಾ ಮಸೀದಿಯ ಬಳಿಕ ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಅದೇ ರೀತಿಯ ವಿವಾದ ಕೇಳಿಬಂದಿದ್ದು ಪ್ರಸಿದ್ಧ ಪೀರ್ ಪಾಶಾ ದರ್ಗಾ ಈ ಹಿಂದೆ ಬಸವಣ್ಣನ ಅನುಭವ ಮಂಟಪ ಆಗಿತ್ತು ಎನ್ನುವ ಮಾತು ಕೇಳಿಬಂದಿದೆ.
ಬಸವಕಲ್ಯಾಣ ನಗರದ ಪೀರ್ ಪಾಶಾ ದರ್ಗಾ ಆವರಣದಲ್ಲಿ ಬಸವಣ್ಣನ ಅನುಭವ ಮಂಟಪದ ಕುರುಹುಗಳಿದ್ದು ಗೋಡೆಯ ಚಿತ್ರಣಗಳು, ಕೆರೆ, ಪುಷ್ಕರಣಿಗಳು ವಾಸ್ತವ ಕಟ್ಟಿಕೊಡುತ್ತವೆ ಎಂದು ಹಿಂದು ಸಂಘಟನೆಗಳ ನಾಯಕರು ಹೇಳತೊಡಗಿದ್ದಾರೆ. 12 ನೇ ಶತಮಾನದಲ್ಲಿ ನಿರ್ಮಾಣ ಆಗಿದ್ದ ಅನುಭವ ಮಂಟಪವನ್ನು ನಿಜಾಮರ ಕಾಲದಲ್ಲಿ ವಶಕ್ಕೆ ಪಡೆದು ಪೀರ್ ಪಾಶಾ ದರ್ಗಾ ಎಂದು ಹೆಸರಿಸಲಾಗಿತ್ತು ಎನ್ನಲಾಗುತ್ತಿದೆ.
ಅಂದಿನ ಅನುಭವ ಮಂಟಪದ ಅಡುಗೆ ಕೋಣೆಗಳು, 771 ಶರಣರು ಕುಳಿತುಕೊಂಡು ಧರ್ಮೋಪದೇಶ ಮಾಡುತ್ತಿದ್ದ ಸ್ಥಳ ಯಥಾವತ್ತಾಗಿ ಈಗಲೂ ಇದೆ. ಅಂದಿನ ಕಾಲದಲ್ಲಿ ಈ ಜಾಗ ಲಿಂಗಾಯತ ಧರ್ಮದ ಪ್ರಮುಖ ತಾಣವಾಗಿತ್ತು ಎನ್ನುವ ಮಾಹಿತಿಗಳಿವೆ.
ವಿಶ್ವ ಹಿಂದು ಪರಿಷತ್ ಬೀದರ್ ಜಿಲ್ಲಾಧ್ಯಕ್ಷ ರಾಮಕೃಷ್ಣ , ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಬಸವಣ್ಣ ಅನುಯಾಯಿಗಳಿಗೆ ನ್ಯಾಯ ಕೊಡಬೇಕು. ಅಲ್ಲಿ ಹಿಂದೆ ದೇವಸ್ಥಾನ ಆಗಿತ್ತು ಎಂಬ ಬಗ್ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಅಲ್ಲಿ ಈಗಲೂ ದೇವಸ್ಥಾನದ ಕೆರೆ, ಕಲಶಗಳು, ಕಂಬಗಳಲ್ಲಿ ಕೆತ್ತನೆಗಳಿವೆ. ಅದು ಹಿಂದಿನ ಕಾಲದಲ್ಲಿ ದೇಗುಲ ಆಗಿತ್ತು ಎನ್ನುವುದಕ್ಕೆ ಬಹಳಷ್ಟು ಸಾಕ್ಷ್ಯಗಳು ಕಾಣಸಿಗುತ್ತಿವೆ ಎಂದಿದ್ದಾರೆ.
ವೀರಶೈವ, ಲಿಂಗಾಯತರು ಬಾಯಿ ಬಿಡಬೇಕು !
ಧಾರವಾಡದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಿಜಾಮನ ಕಾಲದಲ್ಲಿ ಮುಸ್ಲಿಂ ಆಚರಣೆಗಾಗಿ ಒಡೆದು ಹಾಕಿದ್ದಾರೆ. ಅದಕ್ಕೆ ಸಾಕಷ್ಟು ದಾಖಲೆ ಇವೆ. ಈಗ ಅದು ಪೀರ ಪಾಶಾ ಬಂಗ್ಲೆ ಆಗಿದೆ. ಇದು ಹಿಂದೂ ಧರ್ಮದ ನಿರ್ಲಕ್ಷ್ಯದಿಂದ ಆಗಿದೆ. ಸರ್ಕಾರ ಅದನ್ನ ವಾಪಸ್ ಪಡೆದುಕೊಳ್ಳಬೇಕು. ಮುಸ್ಲಿಂ ಸಮಾಜ ಹಠಕ್ಕೆ ಬಿಳದೇ ಅನುಭವ ಮಂಟಪ ಬಿಟ್ಟು ಕೊಡಬೇಕು. ಯಾರು ವೀರಶೈವ, ಲಿಂಗಾಯತ ಪ್ರತಿನಿಧಿಗಳು ಇದ್ದಾರೆ, ಅವರು ಬಾಯಿ ಬಿಡಬೇಕು. ಬಸವಕಲ್ಯಾಣಕ್ಕಾಗಿ ಒಟ್ಟಾಗಬೇಕು ಎಂದು ಹೇಳಿದ್ದಾರೆ.
A fresh mandir-masjid row has cropped up in Karnataka’s Bidar district, as the Vishva Hindu Parishad (VHP) claimed that a dargah in Basavakalyan was actually a Basavanna temple.The VHP has demanded that the government intervene in the dispute and grant justice to the followers of Basavanna. The Hindu outfit claimed there was clear evidence that the dargah was historically a temple.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 08:20 pm
Bangalore Correspondent
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm