ರೈತ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಬೆಂಗಳೂರಿನಲ್ಲಿ ಮಸಿ ಬಳಿದು ಹಲ್ಲೆ, ಮೋದಿ ಮೋದಿ ಕೂಗಿದ ವ್ಯಕ್ತಿಗೆ ಥಳಿಸಿದ ರೈತ ಮುಖಂಡರು !

30-05-22 03:01 pm       Bengalore Correspondent   ಕರ್ನಾಟಕ

ರೈತ ಸಂಘದ ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ, ಉತ್ತರ ಪ್ರದೇಶ ಮೂಲದ ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆಗೈದ ಘಟನೆ ನಗರದ ಗಾಂಧಿ ಭವನದಲ್ಲಿ ನಡೆದಿದೆ.

ಬೆಂಗಳೂರು, ಮೇ 30: ರೈತ ಸಂಘದ ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ, ಉತ್ತರ ಪ್ರದೇಶ ಮೂಲದ ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆಗೈದ ಘಟನೆ ನಗರದ ಗಾಂಧಿ ಭವನದಲ್ಲಿ ನಡೆದಿದೆ.

ಸಭೆ ನಡೆಸುತ್ತಿದ್ದಾಗಲೇ ಏಕಾಏಕಿ ವ್ಯಕ್ತಿಯೊಬ್ಬ ಮೋದಿ ಮೋದಿ ಘೋಷಣೆ ಕೂಗುತ್ತಾ ವೇದಿಕೆಗೆ ನುಗ್ಗಿದ್ದು ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಅಲ್ಲಿದ್ದ ರೈತ ಸಂಘದ ಇತರ ಮುಖಂಡರು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ರೈತ ಮುಖಂಡರು ಸಭೆ ಕರೆದಿದ್ದು, ರಾಕೇಶ್ ಸಿಂಗ್ ಟಿಕಾಯತ್, ಯುದ್ಧವೀರ ಸಿಂಗ್, ಪ್ರೊಫೆಸರ್ ರವಿವರ್ಮ ಕುಮಾರ್, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಲು ರೆಡಿಯಾಗುತ್ತಿದ್ದಂತೆ ಮಾಧ್ಯಮಗಳ ಕ್ಯಾಮರಾ ಮುಂದೆಯೇ ವ್ಯಕ್ತಿಯೊಬ್ಬ ವೈದಿಕೆಗೆ ನುಗ್ಗಿ ಹೈಡ್ರಾಮಾ ನಡೆಸಿದ್ದಾನೆ. ಅಲ್ಲಿದ್ದ ಇತರರು ವ್ಯಕ್ತಿಯ ಮೇಲೆ ಕುರ್ಚಿಯನ್ನು ತೂರಿದ್ದಲ್ಲದೆ, ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

ಸಭೆ ನಡೆಯುತ್ತಿದ್ದ ಹಾಲ್ ಹೊರಗಡೆ ಮೋದಿ ಮೋದಿ ಕೂಗುತ್ತಿದ್ದ ಕಾರ್ಯಕರ್ತರು ಸೇರಿದ್ದರು. ಕಾರ್ಯಕರ್ತರು ವಾಹನದಲ್ಲಿ ಬಂದಿದ್ದು ಅದರಲ್ಲೊಬ್ಬಾತ ಒಳಗೆ ನುಗ್ಗಿದ್ದು ಆನಂತರ ರೈತ ಮುಖಂಡರು ಮತ್ತು ತಂಡದ ಮಧ್ಯೆ ಹೊಡೆದಾಟ ನಡೆದಿದೆ. ಬಿಜೆಪಿಯವರೇ ಈ ಕುತಂತ್ರ ನಡೆಸಿ, ಹಲ್ಲೆ ನಡೆಸಿದ್ದಾರೆ ಎಂದು ರೈತ ಮುಖಂಡರು ಆರೋಪ ಮಾಡಿದ್ದಾರೆ. ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಆದರೆ ಸ್ಥಳೀಯ ಪೊಲೀಸರು ಸೆಕ್ಯುರಿಟಿ ನೀಡಿಲ್ಲ. ನಮ್ಮ ರಾಷ್ಟ್ರೀಯ ನಾಯಕರಿಗೆ ಮಸಿ ಬಳಿದಿದ್ದಾರೆ. ಬಿಜೆಪಿ ಸರಕಾರವೇ ಈ ಕೆಲಸ ಮಾಡಿದೆ ಎಂದು ಆರೋಪ ಮಾಡಿದ್ದಾರೆ.

About a dozen people barged into a press meet and threw ink at farmer leader Rakesh Tikait in Bengaluru today. Mr Tikait, a leader of Bharatiya Kisan Union, was addressing the media when a group of people approached him and threw ink. What followed was chaos at the venue with visuals showing chairs being flung around.