ರೈತ ಮುಖಂಡ ರಾಕೇಶ್ ಟಿಕಾಯತ್ ಹಲ್ಲೆ ಪ್ರಕರಣ ; ಮೂವರು ಆರೋಪಿಗಳು ವಶಕ್ಕೆ, ಕನ್ನಡ ಮಾತನಾಡಿಲ್ಲ ಎಂದು ಹಲ್ಲೆಯಂತೆ ! 

31-05-22 12:33 pm       Bengalore Correspondent   ಕರ್ನಾಟಕ

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಭರತ್ ಶೆಟ್ಟಿ, ಪ್ರದೀಪ್ ನಾಯ್ಕ್, ಸುರೇಶ್  ಬಂಧಿತರು. 

ಬೆಂಗಳೂರು, ಮೇ 31 :  ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಭರತ್ ಶೆಟ್ಟಿ, ಪ್ರದೀಪ್ ನಾಯ್ಕ್, ಸುರೇಶ್  ಬಂಧಿತರು. 

ಹೈ ಗ್ರೌಂಡ್ಸ್ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಡಾ‌.ಶರಣಪ್ಪ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.‌ 

DCP Sharanappa – EESANJE / ಈ ಸಂಜೆ

ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಹೈಗ್ರೌಂಡ್ ಠಾಣಾ ವ್ಯಾಪ್ತಿಯ ಗಾಂಧಿಭವನದಲ್ಲಿ ರೈತರ ‍ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ ಇತ್ತು. ಅಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡ್ತಿದ್ದಾರೆ ಎಂಬ ಕಾರಣಕ್ಕೆ ಹಲ್ಲೆ ಮಾಡಿ ಮಸಿ ಬಳಿಯಲಾಗಿದೆ ಎಂದು ದೂರು ನೀಡಿದ್ದಾರೆ. ಈಗಾಗ್ಲೇ ಮೂವರನ್ನ ವಶಕ್ಕೆ ಪಡೆದು, ವಿಚಾರಣೆ ಮಾಡಲಾಗ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸೋದು ಅವರ ಉದ್ದೇಶವಾಗಿತ್ತು ಎನ್ನೋದು ತಿಳಿದುಬಂದಿದೆ. ಆದ್ರೆ ನಿಖರ ಕಾರಣವೇನೆಂದು ವಿಚಾರಣೆ ಬಳಿಕ ತಿಳಿಯಲಿದೆ. ಅಲ್ಲಿ ಸೇರಿದ್ದವರು ಮತ್ತು ಮಸಿ ಬಳಿದವರ ಮಧ್ಯೆ ಗಲಾಟೆ ಆಗಿದೆ. 

ಐಪಿಸಿ ಸೆಕ್ಷನ್ 355, 354, 324 ,504 , 506,323,134 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.‌ ರೈತರ ಸಭೆಗೆ ಆಹ್ವಾನಿತರಾಗಿ ಈ ಮೂವರು ಬಂದಿದ್ರು ಎನ್ನುವ ಮಾಹಿತಿಯಿದ್ದು ಸಿಸಿಟಿವಿ ಹಾಗೂ ಮೊಬೈಲ್ ವಿಶ್ಯೂವಲ್ಸ್ ಗಳನ್ನು ವಶಕ್ಕೆ ತೆಗೆದು ಪರಿಶೀಲನೆ ಮಾಡಲಾಗ್ತಿದೆ‌‌ ಎಂದಿದ್ದಾರೆ. ‌

Three people were arrested following an ink attack on Bharatiya Kisan Union (BKU) leader Rakesh Tikait and subsequent clashes at an event in Bengaluru on Monday, police said.