ಮೈಸೂರಲ್ಲಿ ವಿಭಿನ್ನ ಪ್ರತಿಭಟನೆ ; ತಲೆ ಮೇಲೆ ಕಲ್ಲು ಹೊತ್ತು ರೈತನ ಆಕ್ರೋಶ

28-09-20 10:41 am       Mysore Correspondent   ಕರ್ನಾಟಕ

ಕೃಷಿ ವಿಧೇಯಕ ತಿದ್ದುಪಡಿ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಸೂರು, ಸೆಪ್ಟಂಬರ್ 28:  ಕೃಷಿ ವಿಧೇಯಕ ತಿದ್ದುಪಡಿ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಸೂರಲ್ಲಿ ರೈತರು ತಲೆ ಮೇಲೆ ಕಲ್ಲು ಹೊತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರ ತಲೆ ಮೇಲೆ ಸರ್ಕಾರ ಕಲ್ಲು ಚಪ್ಪಡಿ ಎಳೆದಿದೆ ಅಂತ ಕಲ್ಲು ಮತ್ತು ಕೃಷಿ ಪರಿಕರಗಳನ್ನ ಹೊತ್ತು ಅಣಕು ಪ್ರದರ್ಶನದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Join our WhatsApp group for latest news updates (2)