ಬಸವಣ್ಣ ಬಳಿಕ ಅಂಬೇಡ್ಕರ್ ಪಠ್ಯ ವಿವಾದ ; ಸಂವಿಧಾನ ಶಿಲ್ಪಿ ಬಿರುದು ಕೈಬಿಟ್ಟ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ! 

05-06-22 01:59 pm       HK News Desk   ಕರ್ನಾಟಕ

ಬಸವಣ್ಣ ಪಠ್ಯ ವಿವಾದದ ಬಳಿಕ ಇದೀಗ ಅಂಬೇಡ್ಕರ್ ಪಠ್ಯದ ಬಗ್ಗೆ ಆಕ್ಷೇಪ ಕೇಳಿಬಂದಿದೆ. ಅಂಬೇಡ್ಕರ್ ಅವರಿಗೆ ಇದ್ದ ಬಿರುದನ್ನು ರೋಹಿತ್ ಚಕ್ರತಿರ್ಥ ಸಮಿತಿ ಕೈಬಿಟ್ಟಿದೆ ಎನ್ನುವ ಆರೋಪ ಉಂಟಾಗಿದೆ. 

ಬೆಂಗಳೂರು, ಜೂನ್ 5 : ಬಸವಣ್ಣ ಪಠ್ಯ ವಿವಾದದ ಬಳಿಕ ಇದೀಗ ಅಂಬೇಡ್ಕರ್ ಪಠ್ಯದ ಬಗ್ಗೆ ಆಕ್ಷೇಪ ಕೇಳಿಬಂದಿದೆ. ಅಂಬೇಡ್ಕರ್ ಅವರಿಗೆ ಇದ್ದ ಬಿರುದನ್ನು ರೋಹಿತ್ ಚಕ್ರತಿರ್ಥ ಸಮಿತಿ ಕೈಬಿಟ್ಟಿದೆ ಎನ್ನುವ ಆರೋಪ ಉಂಟಾಗಿದೆ. 

ಫಠ್ಯದಲ್ಲಿ ಅಂಬೇಡ್ಕರ್ ಅವರಿಗೆ ನೀಡಿದ್ದ 'ಸಂವಿಧಾನ ಶಿಲ್ಪಿ' ಎಂಬ ಬಿರುದನ್ನು ಪಠ್ಯದಿಂದ ಪರಿಷ್ಕರಣಾ ಸಮಿತಿ ತೆಗೆದುಹಾಕಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಅಂಬೇಡ್ಕರ್ ಅವರಿಗೆ ಇದ್ದ 'ಸಂವಿಧಾನ ಶಿಲ್ಪಿ' ಬಿರುದನ್ನು ಕೈಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

NCERT Solution - Constitutional Design Notes | Study Indian Polity for UPSC  CSE - UPSC

9ನೇ ತರಗತಿಯ 'ನಮ್ಮ ಸಂವಿಧಾನ' ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ. 'ಸಂವಿಧಾನ ಶಿಲ್ಪಿ' ಪಠ್ಯದಲ್ಲಿ ಸಂವಿಧಾನ ಕರಡು ರಚನಾ ಸಮಿತಿ ಬಗ್ಗೆ ಮಾಹಿತಿ ಇದೆ. ಭಾರತದ ಸಂವಿಧಾನ ರಚನೆಗೆ ನೀಡಿದ ಕೊಡುಗೆ ಆಧರಿಸಿ ಅಂಬೇಡ್ಕರ್ ಅವರಿಗೆ 'ಸಂವಿಧಾನ ಶಿಲ್ಪಿ' ಬಿರುದು ನೀಡಲಾಗಿತ್ತು.

Baragur Ramachandrappa refutes Minister's charge on 'abandoning' lessons -  The Hindu

ಅಂಬೇಡ್ಕರ್ ಅವರನ್ನು 'ಸಂವಿಧಾನ ಶಿಲ್ಪಿ' ಎಂದು ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯದಲ್ಲಿ ಉಲ್ಲೇಖಿಸಿತ್ತು. ಆದರೆ, 'ಸಂವಿಧಾನ ಶಿಲ್ಪಿ' ಎಂಬ ಉಲ್ಲೇಖವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯದಿಂದ ಕೈಬಿಟ್ಟಿದೆ. 'ಸಂವಿಧಾನ ಶಿಲ್ಪಿ' ಬಿರುದನ್ನು ತೆಗೆದಿರುವುದಕ್ಕೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಂಬೇಡ್ಕರ್ ಅವರಿಗೆ ಉದ್ದೇಶಪೂರ್ವಕ ಅವಹೇಳನ ಮಾಡಲಾಗಿದೆ ಎಂದು ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ಆಕ್ರೋಶ ತೀವ್ರಗೊಂಡಿದೆ.

Textbook Review Controversy Not yet over. There is a dispute arose. The Ambedkar controversy has come to light after Basavanna’s controversy. The Department of Education, which was all cool, was once again hot. CM Bommai, who has let out a sigh as the controversy is over, is back in tension. It is true that the government’s text revision has been controversial.