ಇಡೀ ದೇಶದಲ್ಲಿ ಕಾಂಗ್ರೆಸ್ ಚಡ್ಡಿ ಕಳಚಿ ಹೋಗಿದೆ, ಸಿದ್ದರಾಮಯ್ಯ ಚಡ್ಡಿ ಲೂಸ್ ಆಗಿದೆ, ಮೊದಲು ನಿಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳಿ ; ಪ್ರಹ್ಲಾದ ಜೋಷಿ ಲೇವಡಿ 

06-06-22 06:14 pm       HK News Desk   ಕರ್ನಾಟಕ

ಸಿದ್ದರಾಮಯ್ಯ, ಕಾಂಗ್ರೆಸ್ ನವರಿಗೆ ಚಡ್ಡಿ ಲೂಸ್ ಆಗಿದೆ. ಅವರು ಚಡ್ಡಿ ಹರಕರಾಗಿದ್ದಾರೆ. ಹಾಗಾಗಿ ಅವರು ನಮ್ಮ ಚಡ್ಡಿ ಸುಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆರೆಸ್ಸೆಸ್ ಚಡ್ಡಿ ಸುಡುವ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಟಾಂಗ್ ಇಟ್ಟಿದ್ದಾರೆ. 

ವಿಜಯಪುರ, ಜೂನ್ 6 : ಸಿದ್ದರಾಮಯ್ಯ, ಕಾಂಗ್ರೆಸ್ ನವರಿಗೆ ಚಡ್ಡಿ ಲೂಸ್ ಆಗಿದೆ. ಅವರು ಚಡ್ಡಿ ಹರಕರಾಗಿದ್ದಾರೆ. ಹಾಗಾಗಿ ಅವರು ನಮ್ಮ ಚಡ್ಡಿ ಸುಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆರೆಸ್ಸೆಸ್ ಚಡ್ಡಿ ಸುಡುವ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಟಾಂಗ್ ಇಟ್ಟಿದ್ದಾರೆ. 

ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದಲ್ಲಿ ಅವರ ಚಡ್ಡಿ ಪೂರ್ತಿ ಕಳಚಿ ಕಳಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚಡ್ಡಿ, ಪಂಚೆ ಪೂರ್ತಿ ಕಳೆದು ಕಳಿಸಿದ್ದಾರೆ. ಆ ಸಿಟ್ಟಿನಿಂದ ನಮ್ಮ ಆರ್ ಎಸ್ ಎಸ್ ಚಡ್ಡಿ ಸುಡ್ತೀವಿ ಅಂತಿದ್ದಾರೆ. ಹಾಲಿ ಸಿಎಂ ಆಗಿದ್ದಾಗ ಚಾಮುಂಡೇಶ್ವರಿಯಿಂದ 30 ಸಾವಿರ ಮತಗಳಿಂದ ಸೋಲಿಸಿ ಓಡಿಸಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಉಳಿದುಕೊಂಡಿದ್ದಾರೆ, ಅಲ್ಲಿನ ಕ್ಷೇತ್ರದ ಜನರಿಗೆ ಅವರು ಕೃತಜ್ಞ ಆಗಿರಬೇಕು. 

Siddaramaiah demands judicial probe into alleged irregularities in COVID  management - The Economic Times

rahul gandhi: Father's death single biggest learning experience of life: Rahul  Gandhi in UK - The Economic Times

ನೀವು ವಿಧಾನಸಭೆಯಲ್ಲಿದ್ದೀರಿ. ಐದು ವರ್ಷ ಆಡಳಿತ ಮಾಡಿದ್ದವರು ನೀವು, ಆದರೂ ಜನ ನಿಮ್ಮ ಚಡ್ಡಿ ಕಳೆದು ಕಳಿಸಿದ್ದಾರೆ. ನಿಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಆನಂತರ ಆರ್ ಎಸ್ ಎಸ್ ಚಡ್ಡಿ ಸುಡುವ ಕಾರ್ಯ ಮಾಡಿರಿ. ಕಾಂಗ್ರೆಸ್, ರಾಹುಲ್, ಅಜ್ಜ ಅಜ್ಜಿ ಸೇರಿ ರಾಷ್ಟ್ರೀಯ ನಾಯಕರು ಒಳಗೊಳಗೇ ಚಡ್ಡಿ ಸುಡಲು ಹೋಗಿ. ಅವರ ಪರಿಸ್ಥಿತಿ ಏನಾಗಿದೆ ಈಗ. ದೇಶದಲ್ಲಿ ಅಲ್ಲಲ್ಲಿ ನಿಮ್ಮ ಚಡ್ಡಿ ಇದೆ. ದೇಶದಲ್ಲಿ ಕಾಂಗ್ರೆಸ್ ಪೂರ್ತಿ ಚಡ್ಡಿ ಕಳೆದು ಬೆತ್ತಲೆ ಮಾಡುವವರಿದ್ದಾರೆ. ಕ್ರಿಮಿನಲ್ ಗಳಿಂದ ನೀವು ಚಡ್ಡಿ ಸುಡಿಸ್ತಿದ್ದೀರಿ, ಅಷ್ಟೇ ಎಂದು ಪ್ರಹ್ಲಾದ್ ಜೋಷಿ ಕಿಡಿಕಾರಿದ್ದಾರೆ.

Minister Pralhad Joshi slams Siddaramaiah over RSS chaddi remarks. Continuing his attack on the Rashtriya Swayamsevak Sangh (RSS), former chief minister and leader of opposition in the legislative assembly Siddaramaiah on Sunday sought to underscore the outfit’s essentially upper caste leanings.