ಬ್ರೇಕಿಂಗ್ ನ್ಯೂಸ್
06-06-22 08:03 pm HK News Desk ಕರ್ನಾಟಕ
ಬಾಗಲಕೋಟೆ, ಜೂನ್ 6 : ವರ್ಷಗಳ ಹಿಂದೆ ಸಾವನ್ನಪ್ಪಿದ ಪತಿಯೇ ಹಾವಿನ ರೂಪದಲ್ಲಿ ಬಂದಿದ್ದಾಗಿ ಮನೆಗೆ ಬಂದ ಹಾವನ್ನು ಅಜ್ಜಿಯೊಬ್ಬಳು ಬೆಡ್ಡಿನಲ್ಲಿಯೇ ಮಲಗಲು ಬಿಟ್ಟ ವಿಚಿತ್ರ ಘಟನೆ ಬಾಗಲಕೋಟ ಜಿಲ್ಲೆಯ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯ ವಿಚಿತ್ರ ನಂಬಿಕೆ ಇಟ್ಟುಕೊಂಡು ನಾಲ್ಕು ದಿನಗಳಿಂದ ಹಾವಿನ ಜೊತೆಗೇ ಮಲಗುತ್ತಿದ್ದಾಳಂತೆ.
ನಾಲ್ಕು ದಿನಗಳ ಹಿಂದೆ ಮನೆಗೆ ನಾಗರಹಾವು ಬಂದಿತ್ತು. ಹಾವನ್ನು ಹೊರಗೆ ಹಾಕಲು ನೋಡಿದ್ರೂ ಅದು ಹೋಗಿರಲಿಲ್ಲ. ಇದರಿಂದ ಅಜ್ಜಿಯೇನು ಆತಂಕಗೊಳ್ಳಲಿಲ್ಲ. ಇದು ತನ್ನ ಪತಿಯೇ ಹಾವಿನ ರೂಪದಲ್ಲಿ ಬಂದಿರಬಹುದೆಂಬ ನಂಬಿಕೆಯಿಂದ ಮನೆಯಲ್ಲೇ ಇರಲಿ ಎಂದು ಹಾಗೇ ಉಳಿಸಿಬಿಟ್ಟಿದ್ದಾಳೆ.

ಅಜ್ಜಿಯ ಪತಿ ಮೋನೇಶ್ ಎನ್ನುವವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅವರೇ ಇದೀಗ ಹಾವಿನ ರೂಪದಲ್ಲಿ ತನ್ನ ಹತ್ತಿರ ಬಂದಿದ್ದಾರೆ. ಅದಕ್ಕೆ ಯಾರೂ ದಕ್ಕೆ ಮಾಡಬಾರದು, ಹಿಡಿಯಬಾರದು ಎಂದು ಅಜ್ಜಿ ಸಲಹೆ ಮಾಡುತ್ತಾಳೆ.
ನಾಲ್ಕು ದಿನ ಮನೆಯಲ್ಲಿ ತಾನು ಮಲಗುವ ಚಾಪೆಯ ಮೇಲೆ ಹಾವನ್ನು ಇರಿಸಿದ್ದಳು. ಬಳಿಕ ಅಜ್ಜಿ ಮನೆಯಲ್ಲಿ ವಿಚಿತ್ರ ಹಾವು ಇದೆ ಎಂದು ತಿಳಿದು ಅನೇಕರು ವೀಕ್ಷಿಸಲು ಬರ್ತಿದ್ದರು. ನಾಲ್ಕು ದಿನಗಳಿಂದ ಅಜ್ಜಿ ಮನೆಯಲ್ಲಿ ಆಹಾರ ಇಲ್ಲದೇ ಹಾವು ಕೂಡ ಬಳಲಿತ್ತು. ನಾಲ್ಕು ದಿನಗಳ ಕಾಲ ಮನೆಯಲ್ಲಿದ್ದ ಹಾವು ಈಗ ಕಣ್ಮರೆ ಆಗಿದೆಯಂತೆ. ತನ್ನ ಗಂಡನ ರೂಪದಲ್ಲಿ ಇದ್ದಾನೆ ಎಂದು ನಂಬಿಕೊಂಡಿದ್ದ ಅಜ್ಜಿಗೆ ಹಾವು ಕಡಿದಿಲ್ಲವಂತೆ..
Bagalkote old woman sleep with snake says its my husbands spirit. Since four days she's been sleeping with the snake taking care of it. She says that it's my husband who has come in the spirit of snake. The video of this has gone viral on social media.
10-03-26 01:47 pm
HK News Staffer
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
ಕಲಬುರಗಿ ಜಾತ್ರೆಯಲ್ಲಿ ಭೀಕರ ದುರಂತ; ರಥದ ಚಕ್ರಕ್ಕೆ...
09-03-26 09:51 pm
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
10-03-26 04:30 pm
Giridhar Shetty, ಗಿರಿಧರ್ ಶೆಟ್ಟಿ
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
10-03-26 05:00 pm
HK News Staffer
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
10-03-26 08:32 pm
Mangaluru Staffer
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm