ಕಾಂಗ್ರೆಸ್ ಬಿಟ್ಟು ಆಮ್ ಆದ್ಮಿಯ ಪೊರಕೆ ಹಿಡಿದ ಮುಖ್ಯಮಂತ್ರಿ ಚಂದ್ರು

07-06-22 05:54 pm       Bengalore Correspondent   ಕರ್ನಾಟಕ

ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದ ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು, ಜೂನ್ 7: ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದ ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಕುರಿತು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಕರ್ನಾಟಕದ ಮುಖ್ಯಮಂತ್ರಿ ಈಗ ಆಮ್ ಆದ್ಮಿ. ನಮ್ಮ ಕುಟುಂಬಕ್ಕೆ ಸ್ವಾಗತ ಮುಖ್ಯಮಂತ್ರಿಗಳೇ ಎಂದು ಆಪ್ ಪಕ್ಷವು ಟ್ವೀಟ್ ಮಾಡಿದೆ. ಜೊತೆಗೆ ಚಂದ್ರು ಅವರು ಪಕ್ಷ ಸೇರ್ಪಡೆ ಆಗಿರುವ ಫೇಸ್ಬುಕ್ ನೇರಪ್ರಸಾರದ ವಿಡಿಯೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದೆ.

ವಿಧಾನ ಪರಿಷತ್ತಿಗೆ ಸ್ಥಾನ ಸಿಗದ ಬೇಸರದಿಂದಾಗಿ ಮೇ 29ರಂದು ಕಾಂಗ್ರೆಸ್ ಪಕ್ಷ ತ್ಯಜಿಸುವುದಾಗಿ ಹೇಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ರಾಜಿನಾಮೆ ನೀಡಿದ್ದರು. ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. 2018ರಲ್ಲಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡಲು ಹೆಸರು ಸೂಚಿಸಿ, ಕೊನೆಗೆ ನಾಯಕರೊಬ್ಬರ ಹಸ್ತಕ್ಷೇಪದಿಂದ ಹೆಸರು ಕೈಬಿಡಲಾಗಿತ್ತು. ಇದರಿಂದ ತೀವ್ರ ನೋವು ಅನುಭವಿಸಿದ್ದೇನೆ ಎಂದು ರಾಜಿನಾಮೆ ವೇಳೆ ಹೇಳಿದ್ದರು. ಇದೀಗ ಆಮ್ ಆದ್ಮಿ ಪಕ್ಷದಲ್ಲಿದ್ದು ಹೊಸ ರಾಜಕೀಯ ನಡೆಸುವ ಸುಳಿವು ನೀಡಿದ್ದಾರೆ.

ಮುಖ್ಯಮಂತ್ರಿ ಚಂದ್ರು ಬೆಂಗಳೂರಿನಲ್ಲಿಯೇ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

The Aam Aadmi Party (APP) has joined the party. Senior Congress leader and actor Mukhyamantri Chandru, who resigned from the Congress, is now joining the Aam Aadmi Party. The Aam Aadmi Party is set to join hands with AAP President Prithvirady Reddy at a private hotel in Bengaluru tomorrow at 11 am.AAP CM Chandru Ready to join the party.