ಪ್ರವಾದಿ ಪ್ರಕರಣ ಮುಗಿದ ಅಧ್ಯಾಯ, ಪ್ರತಿಭಟನೆ ಅನವಶ್ಯಕ, ಹಿಂಸೆಗೆ ತಿರುಗಿದ್ರೆ ಕಠಿಣ ಕ್ರಮ ; ಆರಗ ಜ್ಞಾನೇಂದ್ರ 

11-06-22 01:32 pm       Bengalore Correspondent   ಕರ್ನಾಟಕ

ನಿನ್ನೆ ಶುಕ್ರವಾರವಾಗಿರೋದ್ರಿಂದ ರಾಜ್ಯದಲ್ಲಿ ಕೆಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಯಾವುದೇ ತೊಂದರೆ ಇಲ್ಲ. ಇದು ಮುಗಿದು ಹೋದ ಅಧ್ಯಾಯ, ಕ್ಷಮೆ ಕೇಳಿಯೂ ಆಗಿದೆ.

ಬೆಂಗಳೂರು, ಜೂನ್ 11 : ನಿನ್ನೆ ಶುಕ್ರವಾರವಾಗಿರೋದ್ರಿಂದ ರಾಜ್ಯದಲ್ಲಿ ಕೆಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಯಾವುದೇ ತೊಂದರೆ ಇಲ್ಲ. ಇದು ಮುಗಿದು ಹೋದ ಅಧ್ಯಾಯ, ಕ್ಷಮೆ ಕೇಳಿಯೂ ಆಗಿದೆ. ಅವರ ಮೇಲೆ ಕ್ರಮ ಕೂಡ ಆಗಿದೆ, ಆದ್ರೆ ಮತ್ತೇಕೆ ಪ್ರತಿಭಟನೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಕರ್ನಾಟಕ ಶಾಂತಿ ಪ್ರಿಯರ ರಾಜ್ಯ ಇದನ್ನ‌ ಕೆದಕುವ ಅಗತ್ಯವಿಲ್ಲ. ಸಿಎಂ ಅಧ್ಯಕ್ಷತೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಎಲ್ಲಾ ಸ್ಟೇಷನ್‌ ಲಿಮಿಟ್ಸ್ ನಲ್ಲೂ ಸಮುದಾಯದ ನಾಯಕರನ್ನ‌ ಕರೆದು ಮಾತನಾಡಿಸಲು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಕೆಎಸ್ ಆರ್ ಪಿ ಬ್ಯಟಾಲಿಯನ್ ಗಳನ್ನ ಕಳುಹಿಸಲಾಗಿದೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ನಾನು ನಾಡಿನ‌ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ. ನಿನ್ನೆ ಶುಕ್ರವಾರವಾಗಿರೋದ್ರಿಂದ ಪ್ರತಿಭಟನೆ ನಡೆಸಿದ್ದಾರೆ. ಇವತ್ತು ಪ್ರತಿಭಟನೆ ಮಾಡ್ಲಿಕ್ಕಿಲ್ಲ. 

ಸೋಷಿಯಲ್ ಮೀಡಿಯಾವನ್ನ ಎಲ್ಲಾ ಸ್ಟೇಷನ್ ನಲ್ಲೂ ಗಮನಿಸಲು ಸೂಚನೆ‌ ಕೊಡಲಾಗಿದೆ. ಪ್ರಚೋದನಕಾರಿ ಸಂದೇಶ ಹಾಕಿದ್ರೆ ಅವರ ಮೇಲೆ ತಕ್ಷಣ ಪೋಲಿಸ್ ಕ್ರಮ‌ ಕೈಗೊಳ್ಳಬೇಕು. ಶಾಂತಿಯುತ ಪ್ರತಿಭಟನೆಗೆ ಎಲ್ಲರಿಗೂ ಅವಕಾಶ ಇದೆ. ಪರ್ಮಿಷನ್ ತಗೊಬೇಕು, ಎಲ್ಲಿ ಅಂತ ನಿರ್ದಿಷ್ಟ ಸ್ಥಳ ಹೇಳಬೇಕು. ಇಲ್ಲಾಂದ್ರೆ ಪ್ರತಿಭಟನೆ ಮಾಡೋಕೆ ಅವಕಾಶ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ. 

ಈ ಪ್ರತಿಭಟನೆ ಅನವಶ್ಯಕ ಅಂತ ನನಗೆ ಅನ್ನಿಸ್ತಿದೆ. ಕೇಂದ್ರ ಗೃಹ ಇಲಾಖೆ ಸಹ ಅಲರ್ಟ್ ಕೊಟ್ಟಿದೆ. ರಾಜ್ಯ ಗುಪ್ತದಳ ಸಹ ಗಮನಿಸಿ ವರದಿ ಕೊಡ್ತಿದೆ. ಅದರ ಆಧಾರದ ಮೇಲೆ ಪೊಲೀಸ್ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

 Home Minister Araga Jnanendra Speaks On Protest Over Prophet Remark In Karnataka.