ಬ್ರೇಕಿಂಗ್ ನ್ಯೂಸ್
17-06-22 11:03 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 17 : ದಂತ ವೈದ್ಯನ ಎಡವಟ್ಟಿನಿಂದಾಗಿ ಕಿರುತೆರೆ ನಟಿಯೊಬ್ಬರು ದವಡೆ ಊದಿಕೊಂಡು ವಿಕಾರಕ್ಕೆ ಒಳಗಾಗಿದ್ದು ನಟನಾ ವೃತ್ತಿಯಿಂದಲೇ ದೂರವಾಗುವ ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಬೊಜ್ಹು ಕರಗಿಸಲು ಹೋದ ನಟಿ ಚೇತನಾ ಶಸ್ತ್ರಚಿಕಿತ್ಸೆಯಿಂದಾಗಿ ಸಾವು ಕಂಡ ಬೆನ್ನಲ್ಲೇ ಮತ್ತೊಬ್ಬ ನಟಿ ಹಲ್ಲು ಚಿಕಿತ್ಸೆಗೆ ಹೋಗಿ ದುರಂತಕ್ಕೀಡಾಗಿದ್ದಾರೆ.

ದಂತ ವೈದ್ಯರ ನಿರ್ಲಕ್ಷ್ಯದಿಂದಾಗಿ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಟಿ ಸ್ವಾತಿ ಮುಖ ವಿಕಾರವಾಗಿದೆ. 'ಎಫ್ಐಆರ್ 6' ಸಿನಿಮಾದ ನಟಿ ಸ್ವಾತಿ, ಬಣ್ಣ ಬದಲಿಸಿದ್ದ ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡಿದ್ದು ಮುಖ, ಮೂತಿ ಊದಿ ಬಿಟ್ಟಿದೆ. ಇದರಿಂದ ಮನೆಯಿಂದ ಬರಲಾಗದೇ ತೊಂದರೆಗೊಳಗಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೂ ಹೋಗಲಾಗ್ತಿಲ್ಲ, ಬೇರೆ ಕೆಲಸವೂ ಮಾಡ್ತಿಲ್ಲ. ಅವಶಾಶಗಳು ಬರ್ತಿದ್ದರೂ ಮುಖ ಕಂಡ ಕೂಡ್ಲೇ ಕ್ಯಾನ್ಸಲ್ ಆಗುವಂತಹ ಸ್ಥಿತಿ ಎದುರಾಗಿದೆ.

ರೂಟ್ ಕ್ಯಾನಲ್ ಗೆ ಅಂತ ಹೋಗಿದ್ದ ನಟಿಗೆ ಡೆಂಟಲ್ ಕ್ಲಿನಿಕ್ ಚಿಕಿತ್ಸೆಯೇ ಆಪತ್ತು ಉಂಟು ಮಾಡಿದೆ. ಗೂಗಲ್ ನಲ್ಲಿ ಐ ಸ್ಟಾರ್ ರಿವ್ಯೂ ನೋಡಿ ನಟಿ ಕ್ಲಿನಿಕ್ ಗೆ ಹೋಗಿದ್ದರು ಎನ್ನಲಾಗುತ್ತಿದೆ. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಭಾರಿ ಬದಲಾವಣೆಯಾಗಿದ್ದು ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಹೇಳಿ ಕಳಿಸಿದ್ದ ಡಾಕ್ಟರ್ ಮಾತು ಸುಳ್ಳಾಗಿದೆ.
20 ದಿನಗಳು ಕಳೆದ್ರು ಒರಿಜಿನಲ್ ಫೇಸ್ ವಾಪಸ್ಸಾಗದೇ ನಟಿ ಖಿನ್ನತೆಗೆ ಒಳಗಾಗಿದ್ದಾರೆ. ನಟನೆಯೂ ಇಲ್ಲ, ಕೆಲಸವೂ ಇಲ್ಲ ಎನ್ನುವಂತಹ ಸ್ಥಿತಿ ಎದುರಾಗಿದೆ.
Bangalore Dental doctors treatment effects serial actress face. Swathi a Kannada serial actress who underwent treatment at a private dental clinic has called up trouble as her face lips and face goes swollen.
27-05-26 06:26 pm
HK News Staffer
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 08:34 pm
HK News Staffer
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm