ಬ್ರೇಕಿಂಗ್ ನ್ಯೂಸ್
22-06-22 01:13 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 22 : ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಇದ್ದುದು ಕೇವಲ ನಾಲ್ಕೂವರೆ ಗಂಟೆ. ಆದರೆ ಇಷ್ಟಕ್ಕೇ ಮೋದಿ ಭದ್ರತೆ, ಮೂಲಸೌಕರ್ಯ, ಪ್ರಧಾನಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿ ಬರೋಬ್ಬರಿ 23 ಕೋಟಿ ರೂಪಾಯಿ ಖರ್ಚು ಮಾಡಿದೆ.
ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಸೋಮವಾರ ಬೆಳಗ್ಗೆ 11.30 ಕ್ಕೆ ಯಲಹಂಕ ವಾಯುನೆಲೆಗೆ ಮೋದಿ ಆಗಮಿಸಿದ್ದರು. ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದರು.
ಮೋದಿ ಸಾಗುವ ರಸ್ತೆ, ಅಲ್ಲಿನ ಮೂಲ ಸೌಕರ್ಯ, ಇನ್ನಿತರ ಭದ್ರತಾ ವ್ಯವಸ್ಥೆಗಾಗಿ ಬಿಬಿಎಂಪಿ ಖರ್ಚು ನಿಭಾಯಿಸಿದೆ. ಅಂದಾಜು ಪ್ರಕಾರ, ಪ್ರತಿ ನಿಮಿಷಕ್ಕೆ 5,18,518 ರೂಪಾಯಿ ಖರ್ಚು ಮಾಡಿದೆ. ಅದರಂತೆ, ಪ್ರತಿ ಗಂಟೆಗೆ 3.11 ಕೋಟಿ ರೂ. ಖರ್ಚು ಮಾಡಲಾಗಿದ್ದು ನಾಲ್ಕೂವರೆ ಗಂಟೆಯ ಕಾರ್ಯಕ್ರಮ, ಇನ್ನಿತರ ಕೆಲಸಕ್ಕಾಗಿ ಒಟ್ಟು 14 ಕೋಟಿ ವ್ಯಯ ಮಾಡಲಾಗಿದ್ಯಂತೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ರವೀಂದ್ರ ಮಾಹಿತಿ ನೀಡಿದ್ದು ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ 14 ಕಿಮೀ ರಸ್ತೆಯನ್ನು ಡಾಮರೀಕರಣ ಸೇರಿದಂತೆ ರೀ ಡೆವಲಪ್ ಮಾಡಲಾಗಿದೆ. ಬಳ್ಳಾರಿ ರಸ್ತೆ, ಬೆಂಗಳೂರು ಯುನಿವರ್ಸಿಟಿ ರಸ್ತೆ, ಕೊಮ್ಮಘಟ್ಟ ರಸ್ತೆ ಸೇರಿ 15 ದಿನಗಳಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸಲಾಗಿದ್ದು ಇದಕ್ಕಾಗಿ 23 ಕೋಟಿ ರೂಪಾಯಿ ಮೊತ್ತವನ್ನು ತುರ್ತು ನಿಧಿಯಿಂದ ವ್ಯಯಿಸಲಾಗಿದೆ ಎಂದು ಹೇಳಿದರು.
ಮೋದಿ ಬೆಂಗಳೂರಿನಲ್ಲಿ ರೈಲು ಯೋಜನೆ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 28 ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಐಐಎಸ್ಸಿಯಲ್ಲಿ ಮಿದುಳು ಸಂಶೋಧನಾಲಯ ಉದ್ಘಾಟಿಸಿದ್ದರು. ಆ ಕಡೆ ಈ ಕಡೆ ಹತ್ತು ಕಿಮೀ ಪ್ರಯಾಣಿಸಿದ್ದರು. ಪ್ರಧಾನಿ ಆಗಮನ ಸಂದರ್ಭದಲ್ಲಿ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿರಬಾರದು ಎನ್ನುವ ಕಾರಣಕ್ಕೆ ಆ ಭಾಗದಲ್ಲಿ ತುರ್ತಾಗಿ ಕಾಮಗಾರಿ ನಿರ್ವಹಿಸಲಾಗಿತ್ತು.
Heavy showers have always made Bengaluru roads difficult to manoeuvre, for both vehicle users and pedestrians. This is especially true as people complain of the threat of potholes, open drains and manholes inundated with water which have led to fatalities in the past.
02-07-22 10:15 pm
HK News Desk
ಮಕ್ಕಳನ್ನು ಮನೆಗೆ ಕರೆಸಿ ವಿಕೃತಿ ; 40ಕ್ಕೂ ಹೆಚ್ಚು...
02-07-22 11:17 am
ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿಯಿವೆ, ತಾಕತ್ತ...
01-07-22 05:32 pm
ಬೆಂಗಳೂರು ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ...
30-06-22 02:12 pm
ಜುಲೈ 1 ರಿಂದ ಬೆಂಗಳೂರಿನ NICE ರಸ್ತೆಯ ಟೋಲ್ ಹೆಚ್ಚಳ...
30-06-22 01:54 pm
02-07-22 10:54 am
HK News Desk
ದೇಶದಲ್ಲಿನ ಅನಾಹುತಗಳಿಗೆ ನೂಪುರ್ ಶರ್ಮಾ ಒಬ್ಬಳೇ ಕಾರ...
01-07-22 08:50 pm
ಭಾರತಕ್ಕೆ ರಷ್ಯಾ ತೈಲ ಪ್ರವಾಹ ; ಇರಾಕ್, ಸೌದಿ ಅರೇಬಿ...
01-07-22 03:14 pm
ಮೋದಿ, ಅಮಿತ್ ಷಾ, ಯೋಗಿಗೆ ಕೊಲೆ ಬೆದರಿಕೆ ಪೋಸ್ಟ್ ;...
01-07-22 02:16 pm
ಒಂದು ಕಾಲದ ಆಟೋ ಡ್ರೈವರ್, ಪ್ರಬಲ ಹಿಂದುತ್ವದ ಪ್ರತಿಪ...
30-06-22 11:06 pm
02-07-22 10:10 pm
HK News Desk
ಗೋಹತ್ಯೆಗೆ ಅವಕಾಶವೇ ಇಲ್ಲ ; ಬಕ್ರೀದ್ ವೇಳೆ ಗೋಮಾಂಸ...
01-07-22 11:25 pm
ಅಡ್ಯಾರ್, ವಳಚ್ಚಿಲ್ ನಲ್ಲಿ ಮೇಘಸ್ಫೋಟ ಆಗಿತ್ತೇ? ಜನ...
30-06-22 11:16 pm
ಮಂಗಳೂರು ನಗರ ಡಿಸಿಪಿ ಹುದ್ದೆಗೆ ಅನ್ಶು ಕುಮಾರ್ ಶ್ರೀ...
30-06-22 08:43 pm
ಮುಂದುವರಿದ ಮಳೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ...
30-06-22 07:24 pm
02-07-22 10:45 pm
HK News Desk
ಸಿಮೆಂಟ್, ಸ್ಟೀಲ್ ಮೇಲೆ ಹೂಡಿಕೆ ಮಾಡಿದರೆ ಭರಪೂರ ಲಾಭ...
02-07-22 10:24 pm
ಕನ್ನಯ್ಯಲಾಲ್ ಕೊಲೆಗೂ ಮೊದಲೇ ಮಹಾರಾಷ್ಟ್ರದಲ್ಲಿ ಫಾರ್...
02-07-22 05:02 pm
ವಿದೇಶದಿಂದ ಬಂದಿದ್ದ ಕಾಸರಗೋಡಿನ ಯುವಕನ ಅಪಹರಿಸಿ ಕೊಲ...
01-07-22 07:42 pm
ಕೇಸರಿ ಶಾಲು ಹಾಕಿದವರಿಂದ ಹಲ್ಲೆಯೆಂದು ಬಿಂಬಿಸಿ ಕೋಮು...
30-06-22 10:28 pm