ಬ್ರೇಕಿಂಗ್ ನ್ಯೂಸ್
22-06-22 01:13 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 22 : ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಇದ್ದುದು ಕೇವಲ ನಾಲ್ಕೂವರೆ ಗಂಟೆ. ಆದರೆ ಇಷ್ಟಕ್ಕೇ ಮೋದಿ ಭದ್ರತೆ, ಮೂಲಸೌಕರ್ಯ, ಪ್ರಧಾನಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿ ಬರೋಬ್ಬರಿ 23 ಕೋಟಿ ರೂಪಾಯಿ ಖರ್ಚು ಮಾಡಿದೆ.
ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಸೋಮವಾರ ಬೆಳಗ್ಗೆ 11.30 ಕ್ಕೆ ಯಲಹಂಕ ವಾಯುನೆಲೆಗೆ ಮೋದಿ ಆಗಮಿಸಿದ್ದರು. ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದರು.
ಮೋದಿ ಸಾಗುವ ರಸ್ತೆ, ಅಲ್ಲಿನ ಮೂಲ ಸೌಕರ್ಯ, ಇನ್ನಿತರ ಭದ್ರತಾ ವ್ಯವಸ್ಥೆಗಾಗಿ ಬಿಬಿಎಂಪಿ ಖರ್ಚು ನಿಭಾಯಿಸಿದೆ. ಅಂದಾಜು ಪ್ರಕಾರ, ಪ್ರತಿ ನಿಮಿಷಕ್ಕೆ 5,18,518 ರೂಪಾಯಿ ಖರ್ಚು ಮಾಡಿದೆ. ಅದರಂತೆ, ಪ್ರತಿ ಗಂಟೆಗೆ 3.11 ಕೋಟಿ ರೂ. ಖರ್ಚು ಮಾಡಲಾಗಿದ್ದು ನಾಲ್ಕೂವರೆ ಗಂಟೆಯ ಕಾರ್ಯಕ್ರಮ, ಇನ್ನಿತರ ಕೆಲಸಕ್ಕಾಗಿ ಒಟ್ಟು 14 ಕೋಟಿ ವ್ಯಯ ಮಾಡಲಾಗಿದ್ಯಂತೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ರವೀಂದ್ರ ಮಾಹಿತಿ ನೀಡಿದ್ದು ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ 14 ಕಿಮೀ ರಸ್ತೆಯನ್ನು ಡಾಮರೀಕರಣ ಸೇರಿದಂತೆ ರೀ ಡೆವಲಪ್ ಮಾಡಲಾಗಿದೆ. ಬಳ್ಳಾರಿ ರಸ್ತೆ, ಬೆಂಗಳೂರು ಯುನಿವರ್ಸಿಟಿ ರಸ್ತೆ, ಕೊಮ್ಮಘಟ್ಟ ರಸ್ತೆ ಸೇರಿ 15 ದಿನಗಳಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸಲಾಗಿದ್ದು ಇದಕ್ಕಾಗಿ 23 ಕೋಟಿ ರೂಪಾಯಿ ಮೊತ್ತವನ್ನು ತುರ್ತು ನಿಧಿಯಿಂದ ವ್ಯಯಿಸಲಾಗಿದೆ ಎಂದು ಹೇಳಿದರು.
ಮೋದಿ ಬೆಂಗಳೂರಿನಲ್ಲಿ ರೈಲು ಯೋಜನೆ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 28 ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಐಐಎಸ್ಸಿಯಲ್ಲಿ ಮಿದುಳು ಸಂಶೋಧನಾಲಯ ಉದ್ಘಾಟಿಸಿದ್ದರು. ಆ ಕಡೆ ಈ ಕಡೆ ಹತ್ತು ಕಿಮೀ ಪ್ರಯಾಣಿಸಿದ್ದರು. ಪ್ರಧಾನಿ ಆಗಮನ ಸಂದರ್ಭದಲ್ಲಿ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿರಬಾರದು ಎನ್ನುವ ಕಾರಣಕ್ಕೆ ಆ ಭಾಗದಲ್ಲಿ ತುರ್ತಾಗಿ ಕಾಮಗಾರಿ ನಿರ್ವಹಿಸಲಾಗಿತ್ತು.
Heavy showers have always made Bengaluru roads difficult to manoeuvre, for both vehicle users and pedestrians. This is especially true as people complain of the threat of potholes, open drains and manholes inundated with water which have led to fatalities in the past.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm