ಆಯೋಜಕರ ನಿರ್ಲಕ್ಷ್ಯ ; ಕಿಕ್ ಬಾಕ್ಸಿಂಗ್ ವೇಳೆ ಮೈಸೂರಿನ ಖ್ಯಾತ ಬಾಕ್ಸರ್ ಸಾವು ! 

14-07-22 03:19 pm       Bangalore Correspondent   ಕರ್ನಾಟಕ

ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದ್ದಾಗಲೇ ಮೈಸೂರು ಮೂಲದ ಖ್ಯಾತ ಕಿಕ್ ಬಾಕ್ಸರ್ ನಿಖಿಲ್ ಎದುರಾಳಿಯ ಹೊಡೆತಕ್ಕೆ ತಲೆಗೆ ಗಾಯಗೊಂಡು ಸಾವನ್ನಪ್ಪಿದ ಘಟನೆ ನಾಗರಭಾವಿಯಲ್ಲಿ ನಡೆದಿದೆ. 

ಬೆಂಗಳೂರು, ಜುಲೈ 14 : ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದ್ದಾಗಲೇ ಮೈಸೂರು ಮೂಲದ ಖ್ಯಾತ ಕಿಕ್ ಬಾಕ್ಸರ್ ನಿಖಿಲ್ ಎದುರಾಳಿಯ ಹೊಡೆತಕ್ಕೆ ತಲೆಗೆ ಗಾಯಗೊಂಡು ಸಾವನ್ನಪ್ಪಿದ ಘಟನೆ ನಾಗರಭಾವಿಯಲ್ಲಿ ನಡೆದಿದೆ. 

ನಾಗರಭಾವಿಯ ರ್ಯಾಪಿಡ್ ಫಿಟ್ನೆಸ್ ತಂಡ ಆಯೋಜಿಸಿದ್ದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಬಾಕ್ಸರ್ ನಿಖಿಲ್ ಸ್ಪರ್ಧಿಸಿದ್ದರು. ಮೊನ್ನೆ ಭಾನುವಾರ ಕಿಕ್ ಬಾಕ್ಸಿಂಗ್ ನಡೆಯುತ್ತಿದ್ದಾಗ ಘಟನೆ ನಡೆದಿದ್ದು ನಿಖಿಲ್ ತಲೆಗೆ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. 

ತಲೆಗೆ ಗಂಭೀರ ಪೆಟ್ಟು ಬಿದ್ದು ನಿಖಿಲ್ ಸ್ಥಳದಲ್ಲೆ ಕುಸಿದುಬಿದ್ದಿದ್ದರು.‌ ಆದರೆ ಸ್ಥಳದಲ್ಲಿ ತುರ್ತು ಚಿಕಿತ್ಸೆ ನೀಡಲು ವೈದ್ಯರಾಗಲೀ, ಆಂಬುಲೆನ್ಸ್ ಸೇರಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಆನಂತರ ಆಯೋಜಕರೇ ಆಸ್ಪತ್ರೆಗೆ ದಾಖಲು ಮಾಡಿದ್ದರು.‌ ಹೀಗಾಗಿ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಆಯೋಜಕ ರವಿಶಂಕರ್ ನಿರ್ಲಕ್ಷ್ಯದಿಂದ ಸಾವು ಆಗಿದೆಯೆಂದು ವಿರುದ್ಧ ನಿಖಿಲ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. 

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆಯೋಜಕ‌ರ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ. ದೂರು ದಾಖಲಾಗ್ತಿದ್ದಂತೆ ನವೀನ್ ರವಿಶಂಕರ್ ಎಸ್ಕೇಪ್ ಆಗಿದ್ದಾರೆ.

An Indian MMA fighter Nikhil Suresh has passed away following injuries sustained during the fight at the K1 Kickboxing championship organized by the K1 association of Karnataka on the 9th and 10th of July 2022 in Bangalore. The news was shared by his team on social media.