ನಮ್ಗೆ ನಿಮ್ ರೊಕ್ಕ ಬ್ಯಾಡ್ರೀ ಎನ್ನುತ್ತಾ ಸಿದ್ದರಾಮಯ್ಯ ಕೊಟ್ಟ ಎರಡು ಲಕ್ಷದ ಹಣದ ಕಂತೆಯನ್ನೇ ರಸ್ತೆಗೆಸೆದ ಮಹಿಳೆ ! 

15-07-22 06:23 pm       HK News Desk   ಕರ್ನಾಟಕ

ಗುಂಪು ಗಲಭೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ಹಿಂತಿರುಗಿ ಹೋಗುವಾಗ ನೀಡಿದ ಎರಡು ಲಕ್ಷ ರೂಪಾಯಿ ನಗದು ಪರಿಹಾರ ಹಣವನ್ನೇ ಮಹಿಳೆಯೊಬ್ಬರು ರಸ್ತೆಗೆಸೆದು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ. 

ಬಾಗಲಕೋಟೆ, ಜುಲೈ15 : ಗುಂಪು ಗಲಭೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ಹಿಂತಿರುಗಿ ಹೋಗುವಾಗ ನೀಡಿದ ಎರಡು ಲಕ್ಷ ರೂಪಾಯಿ ನಗದು ಪರಿಹಾರ ಹಣವನ್ನೇ ಮಹಿಳೆಯೊಬ್ಬರು ರಸ್ತೆಗೆಸೆದು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ. 

ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಗುಂಪು ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾದ ಸಿದ್ದರಾಮಯ್ಯ ಮುಸ್ಲಿಂ ಕುಟುಂಬ ಒಂದಕ್ಕೆ ಎರಡು ಲಕ್ಷ ನಗದನ್ನು ಪರಿಹಾರ ರೂಪದಲ್ಲಿ ನೀಡಿದ್ರು. ಈ ವೇಳೆ, ಮಹಿಳೆ ತನಗೆ ರೊಕ್ಕ ಬ್ಯಾಡ್ರೀ ಸಿದ್ದರಾಮಯ್ಯ ಇದ್ದ ವಾಹನಕ್ಕೆ ಹಣದ ಕಂತೆಯನ್ನೇ ಎಸೆದು ಬಿಟ್ಟಿದ್ದಾರೆ. ಸಿದ್ದರಾಮಯ್ಯ ಜೊತೆಗೆ ಬೆಂಗಾವಲು ವಾಹನವೂ ಇದ್ದು ಹಣ ನೀಡುತ್ತಲೇ ಮಹಿಳೆ ನಿರಾಕರಣೆ ಮಾಡಿದ್ದರು. ಕೊನೆಗೆ ಸಿದ್ದರಾಮಯ್ಯ ಇದ್ದ ವಾಹನ ನೇರವಾಗಿ ಮುಂದಕ್ಕೆ ಚಲಿಸಿದ್ದು ತನ್ನ ಕೈಲಿದ್ದ 2  ಲಕ್ಷ ರೂ. ಹಣವನ್ನ ಹಿಡ್ಕೊಂಡು ಓಡಿದ ಮಹಿಳೆ ಕಂತೆಯನ್ನ ವಾಹನದ ಮೇಲೆಸೆದಿದ್ದಾರೆ. ಏಯ್, ನಂಗೆ ನಿಮ್ ರೊಕ್ಕ ಬ್ಯಾಡ್ರೀ ಎಂದು ಮುಸ್ಲಿಂ ಮಹಿಳೆ ಹಣ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ನಗರದ ಆಶೀರ್ವಾದ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ ನೀಡಿದ ಸಿದ್ದರಾಮಯ್ಯ, ಗಾಯಗೊಂಡ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

A family member of one of the four persons injured in Kerur violence threw Rs 2 lakh given by Leader of Opposition Siddaramaiah at his vehicle in Karnataka's Bagalkot district on Friday.Siddaramaiah tried to console them, and gave Rs 50,000 each to the family members of four injured persons, including one Mohammad Hanif, even as they refused to take money. After Siddaramaiah's vehicle started moving, a woman threw the money at the vehicle, saying that they do not need money.