ಬ್ರೇಕಿಂಗ್ ನ್ಯೂಸ್
20-07-22 10:06 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 20: ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಆರಂಭಿಸಿದೆ. ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು- ಜೋಗ ಜಲಪಾತ ಶಿವಮೊಗ್ಗ ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ ಅಂದರೆ, ಶುಕ್ರವಾರ ಮತ್ತು ಶನಿವಾರ ಪ್ಯಾಕೇಜ್ ಪ್ರವಾಸವನ್ನು ಜುಲೈ 22ರಿಂದ ಪ್ರಾರಂಭಿಸಲಿದೆ.
ಅದರಂತೆ, ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಟು ಬೆಳಗ್ಗೆ 5.30 ತಲುಪುವುದು, ಬೆಳಗ್ಗೆ 7ರ ವರೆಗೂ ವಿಶ್ರಾಂತಿ ಪಡೆಯುವುದು. ನಂತರ 7ಕ್ಕೆ ಉಪಹಾರ ಸೇವನೆ ಮಾಡಬಹುದು, 7.15ಕ್ಕೆ ಸಾಗರದಿಂದ ಹೊರಟು ವರದಹಳ್ಳಿಗೆ 7.30ಕ್ಕೆ ತಲುಪಲಿದೆ. ವರದಹಳ್ಳಿಯಿಂದ 7.15ಕ್ಕೆ ಹೊರಟು ವರದ ಮೂಲಕ್ಕೆ 9ಕ್ಕೆ ತಲುಪುತ್ತದೆ.
ವರದಾ ಮೂಲ ನೋಡಿಕೊಂಡು ಇಕ್ಕೇರಿಗೆ 9.30ಕ್ಕೆ ತಲುಪುವುದು, ಅಲ್ಲಿ 10ರ ವೆರಗೂ ತಾಣ ನೋಡುವುದು. ನಂತರ ಇಕ್ಕೇರಿ ನೋಡಿಕೊಂಡು 10.30ಕ್ಕೆ ಹೊರಟು 11ಕ್ಕೆ ಕೆಳದಿಗೆ ತಲುಪುವುದು. 12ಕ್ಕೆ ಕೆಳದಿಯಿಂದ ಹೊರಟು 12.30ಕ್ಕೆ ಸಾಗರ ತಲುಪಲಾಗುತ್ತದೆ. ನಂತರ ಸಾಗರದಲ್ಲಿ 12.45ರಿಂದ 1.15ರ ವರೆಗೆ ಊಟದ ಸಮಯ, 1.30ರ ವರೆಗೆ ಸಾಗರದಿಂದ ಹೊರಟು 2.13ಕ್ಕೆ ಜೋಗ ತಲುಪುವುದು ಅಲ್ಲಿ ಸಂಜೆ 5ರ ವರೆಗೂ ಜೋಗದ ಅಹ್ಲಾದಕರ ವಾತಾವರಣ ಸವಿಯಬಹುದು.
ನಂತರ 6.15ಕ್ಕೆ ಹೊರಟು ಸಂಜೆ 7ಕ್ಕೆ ಸಾಗರ ತಲುಪುವುದು, 7ರಿಂದ 8ರವರೆಗೆ ಒಂದು ಗಂಟೆ ಸಾಗರದಲ್ಲಿ ಶಾಪಿಂಗ್ ಸಮಯವಿರುತ್ತದೆ. ನಂತರ 8.30ಕ್ಕೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ನಂತರ ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರು ತಲುಪುತ್ತದೆ. ಬೆಂಗಳೂರು- ಜೋಗ ಜಲಪಾತ ಪ್ಯಾಕೇಜ್ ಟೂರ್ನ ಪ್ರಯಾಣದ ದರಗಳು ಇಂತಿವೆ. ವಯಸ್ಕರಿಗೆ 2,300 ರುಪಾಯಿಗಳು. 6ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 2100 ರುಪಾಯಿಗಳು ಎಂದು ಕೆಎಸ್ಆರ್ ಟಿಸಿ ಪ್ರಕಟಣೆ ತಿಳಿಸಿದೆ.
The Karnataka State Road Transport Corporation (KSRTC) will be introducing a new package tour from Bengaluru to Jog Falls via Shivamogga and Sagara with non-AC sleeper service on weekends (Fridays and Saturdays) from this Friday. The bus will depart from Bengaluru at 10.30 pm and will return at 5 am the day after. The ticket fare for an adult is Rs 2,300, while children aged 6-12 will be charged Rs 2,100.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm