ಸಾವರ್ಕರ್ ಅವಮಾನ ; ನೀಚರನ್ನು ಒದ್ದು ಒಳಗೆ ಹಾಕಿರುತ್ತಿದ್ದರೆ ಹೀಗೆ ಆಗುತ್ತಿರಲಿಲ್ಲ, ಸರಕಾರಕ್ಕೆ ಧಿಕ್ಕಾರ ಹೇಳ್ತೇನೆ ! 

15-08-22 10:59 pm       HK News Desk   ಕರ್ನಾಟಕ

ಸಾವರ್ಕರ್ ಫೋಟೊ ತೆಗೆಯಬೇಕು ಎಂದು ಹೇಳಿದ ನೀಚರಿಗೆ ಆವತ್ತೇ ಒದ್ದು ಒಳಗೆ ಹಾಕಿದ್ದರೆ ಈ ಕೃತ್ಯ ಆಗುತ್ತಿರಲಿಲ್ಲ. ಧಿಕ್ಕಾರ ಹೇಳ್ತೇನೆ, ನಾಚಿಕೆ ಮಾನ ಮರ್ಯಾದೆ ಇಲ್ಲದೇ ಸಾವರ್ಕರ್ ಗೆ ಅವಮಾನ ಮಾಡತಾರೆ.

ಕಾರವಾರ, ಆಗಸ್ಟ್ 15 : ಸಾವರ್ಕರ್ ಫೋಟೊ ತೆಗೆಯಬೇಕು ಎಂದು ಹೇಳಿದ ನೀಚರಿಗೆ ಆವತ್ತೇ ಒದ್ದು ಒಳಗೆ ಹಾಕಿದ್ದರೆ ಈ ಕೃತ್ಯ ಆಗುತ್ತಿರಲಿಲ್ಲ. ಧಿಕ್ಕಾರ ಹೇಳ್ತೇನೆ, ನಾಚಿಕೆ ಮಾನ ಮರ್ಯಾದೆ ಇಲ್ಲದೇ ಸಾವರ್ಕರ್ ಗೆ ಅವಮಾನ ಮಾಡತಾರೆ. ಸಾವರ್ಕರ್ ಗೆ ಅವಮಾನ ಮಾಡಿದರೂ ನೀವು ಬಾಯಿ ಮುಚಕೊಂಡು ಇರತ್ತೀರಿ. ಇವತ್ತು ನಿಮ್ಮ ಕೋಟೆಯಲ್ಲಿ ನಿಮ್ಮನ್ನ ಅವಮಾನ ಮಾಡಿದ ಕೃತ್ಯಕ್ಕೆ ನೀವು ಹೊಣೆಗಾರರು ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಫೋಟೊ ತೆಗೆದು ಅವಮಾನ ಮಾಡಿದವರಿಗೆ ಒದ್ದು ಒಳಗೆ ಹಾಕುವದಲ್ಲ, ಅವರ ಸೊಕ್ಕನ್ನ ಮುರಿಬೇಕು. ದೇಶದ್ರೋಹಿಗಳು. ನೀವು ಅವರನ್ನ ಹದ್ದು ಬಸ್ತಿನಲ್ಲಿ ಇಡದೇ ಇದ್ದರೆ ಹಿಂದು ಸಂಘಟನೆ ಬೀದಿಗೆ ಇಳಿಯಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ‌

Bengaluru: Murderous attack on Tanveer Sait - Government mulling to ban SDPI?  - Daijiworld.com

ಶಿವಮೊಗ್ಗ ನಗರದಲ್ಲಿ ಹೊಣೆಗೇಡಿತನದಿಂದ ಎಸ್ಡಿ‌ಪಿಐ, ಪಿಎಫ್ ಐನವರು ಟಿಪ್ಪು ಫೋಟೊ ಇಟ್ಟು ಅಶಾಂತಿ ಸೃಷ್ಟಿ ಮಾಡಿದ್ದಾರೆ. ಟಿಪ್ಪುಸುಲ್ತಾನ ಮತಾಂಧ ಇದ್ದ, ಸಾವಿರಾರು ದೇವಾಲಯ ಒಡೆದಿದ್ದಕ್ಕೆ ಸಾಕ್ಷಿ ಇದೆ. ಲಕ್ಷಾಂತರ ಜನರಿಗೆ ಖಡ್ಗದ ಮೇಲೆ ಮತಾಂತರ ಮಾಡಿದ ದಾಖಲೆ‌ ಇದೆ. ಕನ್ನಡ ವಿರೋಧಿ, ಕನ್ನಡ ದ್ರೋಹಿ ಆಗಿದ್ದ.‌ ಇಷ್ಟೆಲ್ಲ ಇದ್ರೂ ಕೂಡ ಇಲ್ಲಿಯ ಸೊಕ್ಕಿನ ಮುಸ್ಲಿಮರು ಟಿಪ್ಪು ದೇಶದ ಸ್ವಾತಂತ್ರ್ಯ ದಿನ ಫೋಟೊ ಇಟ್ಟು ಮೆರೀತಾರೆ. ಎರಡು ದಿನದ ಹಿಂದೆ ಸಾವರ್ಕರ್ ಫೋಟೊ ಗೆ ಅವಮಾನ ಮಾಡಿದ್ರು. 

ಸಾವರ್ಕರ್ ಒಬ್ಬ ದೇಶ ಭಕ್ತ. ಎರಡು ಕರಿ‌ ನೀರಿನ ಶಿಕ್ಷೆಯಾದಂತ ಕ್ರಾಂತಿಕಾರಿ. ಅಂಥವರಿಗೆ ಬ್ರಿಟಿಷರು ಜೈಲಿನಲ್ಲಿ ಇಟ್ಟಿದ್ರು. ಅವರ ಇಡೀ ಕುಟುಂಬ ದೇಶಕ್ಕೆ ಸಮರ್ಪಣೆ‌ ಮಾಡಿದ ಸಾವರ್ಕರ್ ಅವರನ್ನ ಈ ದಿನ ನೆನಪಿಸುವುದು ನಮ್ಮ ಕರ್ತವ್ಯ ಎಂದು ಮುತಾಲಿಕ್ ಹೇಳಿದರು.

Pramod Muthalik slams BJP over Savarkar banner row in Shivamogga. He added that if the govt had arrested and taken action long back all these incidents would have never repeated.