ವಿದ್ಯುತ್ ತಂತಿ ತುಳಿದು 10 ವರ್ಷದ ಕಾಡಾನೆ ಸಾವು

06-10-20 03:30 pm       Headline Karnataka News Network   ಕರ್ನಾಟಕ

ಅಕ್ರಮವಾಗಿ ವಿದ್ಯುತ್ ಹಾಯಿಸಿ ಬೆಳೆ ರಕ್ಷಣೆಗಾಗಿ ಹಾಕಿದ್ದ ತಂತಿ ಬೇಲಿಯನ್ನು ತುಳಿದ 10 ವರ್ಷದ ಕಾಡಾನೆಯೊಂದು ಮೃತಪಟ್ಟ ಘಟನೆ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ. 

ಚಾಮರಾಜನಗರ, ಅಕ್ಟೋಬರ್ 6: ಅಕ್ರಮವಾಗಿ ವಿದ್ಯುತ್ ಹಾಯಿಸಿ ಬೆಳೆ ರಕ್ಷಣೆಗಾಗಿ ಹಾಕಿದ್ದ ತಂತಿ ಬೇಲಿಯನ್ನು ತುಳಿದ 10 ವರ್ಷದ ಕಾಡಾನೆಯೊಂದು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ರೈತ ಗೋಪಾಲನಾಯಕ ಎಂಬವರು ತಮ್ಮ ಬೆಳೆ ರಕ್ಷಣೆಗಾಗಿ ಜಮೀನಿನಲ್ಲಿ ತಂತಿ ಬೇಲಿ ಹಾಕಿದ್ದರು. ಆ ಬೇಲಿಗೆ ಅಕ್ರಮವಾಗಿ ವಿದ್ಯುತ್​ ಕಂಬದಿಂದ ಸಂಪರ್ಕ ನೀಡಿದ್ದರು. ಬಂಡೀಪುರದ ಓಂಕಾರ ಅರಣ್ಯ ವಲಯದಿಂದ ಮೇವನ್ನರಸಿ ಬಂದಿದ್ದ ಗಂಡಾನೆ ಈ ತಂತಿ ತಗುಲಿ ಸಾವನ್ನಪ್ಪಿದೆ.

ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಜಮೀನು ಮಾಲೀಕ ನಾಪತ್ತೆಯಾಗಿದ್ದಾರೆ.