ಸತ್ತ ಬಾಲಕ ಬದುಕುತ್ತಾನೆಂದು ಉಪ್ಪಿನಲ್ಲಿ ಶವ ಮುಚ್ಚಿಟ್ಟು ಮಲಗಿಸಿದ ಪೋಷಕರು !! 

05-09-22 05:23 pm       HK News Desk   ಕರ್ನಾಟಕ

ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಬಾಲಕನ ಶವವನ್ನು ಉಪ್ಪಿನಲ್ಲಿ ಮಲಗಿಸಿದರೆ ಬದುಕುತ್ತಾರೆಂಬ ನಂಬಿಕೆಯಿಂದ ಉಪ್ಪಿನಲ್ಲಿ ಮುಚ್ಚಿಟ್ಟು ಮಲಗಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರವಾರ ಗ್ರಾಮದಲ್ಲಿ ನಡೆದಿದೆ.‌

ಬಳ್ಳಾರಿ, ಸೆ.5 : ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಬಾಲಕನ ಶವವನ್ನು ಉಪ್ಪಿನಲ್ಲಿ ಮಲಗಿಸಿದರೆ ಬದುಕುತ್ತಾರೆಂಬ ನಂಬಿಕೆಯಿಂದ ಉಪ್ಪಿನಲ್ಲಿ ಮುಚ್ಚಿಟ್ಟು ಮಲಗಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರವಾರ ಗ್ರಾಮದಲ್ಲಿ ನಡೆದಿದೆ.‌

ನೀರು ತುಂಬಿದ್ದ ಕೆರೆಯಲ್ಲಿ ಈಜಲು ಹೋಗಿದ್ದ ಸಿರವಾರ ಗ್ರಾಮದ ಶೇಖರಪ್ಪ ಎಂಬವರ ಮಗ ಸುರೇಶ್(10) ಎಂಬ ಬಾಲಕ ಈಜು ತಿಳಿಯದೆ ಸಾವು ಕಂಡಿದ್ದ.‌ ಭಾನುವಾರ ಸ್ನೇಹಿತರೊಂದಿಗೆ ಈಜಾಡಲು ಹೋಗಿದ್ದಾಗ ಘಟನೆ ನಡೆದಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೋಷಕರು ಮತ್ತು ಗ್ರಾಮಸ್ಥರು ಬಾಲಕನ ಶವ ಪತ್ತೆ ಮಾಡಿ ಮನೆಗೆ ತಂದಿದ್ದರು.‌

ಉಪ್ಪಿನಲ್ಲಿ ಮಲಗಿಸಿದರೆ ಕೆಲವೊಮ್ಮೆ ಬದುಕುತ್ತಾರೆಂಬ ನಂಬಿಕೆಯಿಂದ ನಾಲ್ಕು ತಾಸು ಕಾಲ ಪೋಷಕರು ಉಪ್ಪಿನಲ್ಲಿ ಶವ ಮಲಗಿಸಿಟ್ಟಿದ್ದಾರೆ.‌ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನೋಡಿದ್ದ ಪೋಷಕರು ಇಡೀ ದೇಹವನ್ನು ಉಪ್ಪಿನಲ್ಲಿ ಹುದುಗಿಸಿ ಮಲಗಿಸಿದ್ದಾರೆ.‌ ಕೊನೆಗೆ ಮಗು ಬದುಕುವುದಿಲ್ಲ ಎಂದು ತಿಳಿದು ಫೋಷಕರು ಅಂತ್ಯಸಂಸ್ಕಾರ ನಡೆಸಿದ್ದಾರೆ. ‌ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಶವವನ್ನು ಉಪ್ಪಿನಲ್ಲಿ ಮಲಗಿಸಿದ ಫೋಟೋಗಳು ವೈರಲ್ ಆಗಿವೆ.

Bellary 10 year old youth dies After drowning but parents dump him in salt thinking He can get back life.