ಮಣಿಪಾಲ್ ಸಂಸ್ಥೆ ಸೇರಿ ದೇಶದ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ ; ಮಂಗಳೂರು, ಬೆಂಗಳೂರಿನಲ್ಲೂ ದಾಳಿ ಕಾರ್ಯಾಚರಣೆ

07-09-22 04:20 pm       Bangalore Correspondent   ಕರ್ನಾಟಕ

ರಾಜ್ಯದ ಪ್ರತಿಷ್ಠಿತ ಮಣಿಪಾಲ್  ಸಂಸ್ಥೆಗೆ ಸೇರಿದ ಮಂಗಳೂರು ಮತ್ತು ಬೆಂಗಳೂರಿನ ವಿವಿಧ ಕಚೇರಿಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ, ದೇಶಾದ್ಯಂತ 53ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿಸಿ ನಡೆಸಿದ್ದಾರೆ ಎನ್ನುವ ಮಾಹಿತಿಗಳಿವೆ. 

ಬೆಂಗಳೂರು, ಸೆ.7 : ರಾಜ್ಯದ ಪ್ರತಿಷ್ಠಿತ ಮಣಿಪಾಲ್  ಸಂಸ್ಥೆಗೆ ಸೇರಿದ ಮಂಗಳೂರು ಮತ್ತು ಬೆಂಗಳೂರಿನ ವಿವಿಧ ಕಚೇರಿಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ, ದೇಶಾದ್ಯಂತ 53ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿಸಿ ನಡೆಸಿದ್ದಾರೆ ಎನ್ನುವ ಮಾಹಿತಿಗಳಿವೆ. 

ಕರ್ನಾಟಕ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮುಂಬೈ, ಛತ್ತೀಸ್‍ಘಡ, ಉತ್ತರಾಖಂಡ್ ರಾಜ್ಯದ ಹಲವು ನಗರಗಳಲ್ಲಿ ಬುಧವಾರ ಮುಂಜಾನೆಯಿಂದಲೇ ದಾಳಿ ನಡೆದಿದೆ.‌ ಐಟಿ ಅಧಿಕಾರಿಗಳು ಇದಕ್ಕಾಗಿ 100ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಬಳಸಿದ್ದಾರೆ. 

ಬೆಂಗಳೂರಿನ ಮಣಿಪಾಲ್ ಸಂಸ್ಥೆ ಮೇಲೂ ದಾಳಿ ನಡೆದಿದ್ದು, ಉಡುಪಿ ಮತ್ತು ಮಂಗಳೂರಿನ ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ. ಮಣಿಪಾಲ್ ಗ್ರೂಪ್‍ನ ಹಣಕಾಸು ವಿಭಾಗದಲ್ಲಿ ಶೋಧ ನಡೆಸಿದ್ದಾರೆ. 

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಖ್ ಗೆಹ್ಲೋಟ್ ಅವರ ಅಪ್ತರಾದ ಸಚಿವ ರಾಜೇಂದ್ರ ಯಾದವ್ ಅವರ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ಇಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನು ಬಳಸಿಕೊಳ್ಳಲಾಗಿದೆ.

The Income Tax Department is seen in action mode across the country today. In Delhi, Rajasthan, Uttar Pradesh, Madhya Pradesh, Mumbai, Chhattisgarh, Uttarakhand, and Bangalore, the Income Tax Department team has raided the locations of many big businessmen including Manipal hospitals. In fact, these businessmen were on the target of income tax for tax evasion and political fading. After which today i.e. on Wednesday (September 7) morning, the team raided 53 places in different states of the country. The Income Tax Department has taken this action using 100 vehicles.