ಹಳೆ ಪ್ರಕರಣಗಳ ತನಿಖೆ ; ಏನ್ ನಮ್ಮನ್ನು ಬ್ಲಾಕ್ಮೇಲ್ ಮಾಡ್ತೀರಾ..? ತಾಕತ್ತಿದ್ದರೆ 2006ರಿಂದ್ಲೇ ತನಿಖೆ ಮಾಡಿಸಲು ಆಯೋಗ ರಚಿಸಿ ; ಸಿದ್ದರಾಮಯ್ಯ ಆಗ್ರಹ

11-09-22 09:29 pm       HK News Desk   ಕರ್ನಾಟಕ

ಅರ್ಕಾವತಿ, ಸೋಲಾರ್ ಹಗರಣದ ತನಿಖೆಯನ್ನು ಬಹಿರಂಗ ಪಡಿಸುವ ಬಿಜೆಪಿ ನಾಯಕರ ಎಚ್ಚರಿಕೆ ಬಗ್ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.‌

ಬಾಗಲಕೋಟೆ, ಸೆ.11: ಅರ್ಕಾವತಿ, ಸೋಲಾರ್ ಹಗರಣದ ತನಿಖೆಯನ್ನು ಬಹಿರಂಗ ಪಡಿಸುವ ಬಿಜೆಪಿ ನಾಯಕರ ಎಚ್ಚರಿಕೆ ಬಗ್ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.‌ ಏನ್ ನಮ್ಮನ್ನು ಹೆದರಿಸುತ್ತೀರಾ.? ಬ್ಲಾಕ್ ಮೇಲ್ ಮಾಡ್ತಿರಾ? ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ. ಇವರಿಗೆ ತಾಕತ್ತಿದ್ದರೆ 2006ರಿಂದ ಈವರೆಗಿನ ಎಲ್ಲ ಹಗರಣಗಳ ಬಗ್ಗೆಯೂ ತನಿಖೆ ಮಾಡಿಸಲಿ. ಅದಕ್ಕೊಂದು ಆಯೋಗವನ್ನೂ ಮಾಡಿಸಿ ಎಂದು ಸವಾಲು ಹಾಕಿದ್ದಾರೆ.

2006 ರಿಂದ ಈವರೆಗೂ 16 ವರ್ಷದಲ್ಲಿ ಬಿಜೆಪಿ 11 ವರ್ಷ ಅಧಿಕಾರ ಮಾಡಿದೆ. ನಾವು ಐದು ವರ್ಷ ಇದ್ದೆವು. ಸಿದ್ದರಾಮಯ್ಯ ಸರ್ಕಾರದ ಹಗರಣ ಅಂತಾರೆ. ಅಲ್ಲಪ್ಪಾ , 2006 ರಿಂದ ಎಲ್ಲವನ್ನು ತನಿಖೆ ಮಾಡಿ. 2006 ರಿಂದ 2023 ವರೆಗೂ ಏನೇನು ಆಗಿದೆ ಎಲ್ಲವನ್ನೂ ತನಿಖೆ ಮಾಡಿಸಿ ಎಂದು ಹೇಳಿದ್ದಾರೆ. ನಿರಂತರ ಆರೋಪ ಮಾಡುವ ಬದಲು ಯಾರ ಕಾಲದಲ್ಲಿ ಏನೇನಾಗಿದೆ, ಎಲ್ಲವನ್ನು ತನಿಖೆ ಮಾಡಲು ಆಯೋಗ ರಚನೆ ಮಾಡಿ ಎಂದು ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.

ಸಿಟಿ ರವಿ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಆತ ಸಿ.ಟಿ.ರವಿ ಅಲ್ಲ,‌ ಅವನು ಲೂಟಿ ರವಿ.. ಹೀಗಂತ ನಾನು ಕರೆಯುತ್ತಿಲ್ಲ. ಚಿಕ್ಕಮಗಳೂರಲ್ಲಿ ಜನರು ಇವರನ್ನ ಲೂಟಿ ರವಿ ಅಂತ ಕರೀತಾರೆ. ನಾನು ಕರೆಯಲ್ಲ.  ಜನರು ಕರೀತಾರೆ ಎಂದು  ಸಿದ್ದರಾಮಯ್ಯ ಹೇಳಿದ್ದಾರೆ.

Senior Congress leader Siddaramaiah on Sunday challenged Karnataka Chief Minister Basavaraj Bommai for an open discussion on corruption at the time and venue of his choice.