ಭಾರತ್ ಜೋಡೋ ಬೆನ್ನಲ್ಲೇ ಕೃಷ್ಣಾ ನದಿಗಾಗಿ ಪಾದಯಾತ್ರೆ ; ಮೇಕೆದಾಟು ಬಳಿಕ ಮತ್ತೊಂದು ಮಹಾಯಾತ್ರೆಗೆ ಡಿಕೆಶಿ ಸಿದ್ಧತೆ 

17-09-22 08:28 pm       HK News Desk   ಕರ್ನಾಟಕ

ರಾಜ್ಯದಲ್ಲಿ ಕಳೆದ ಬಾರಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ಕೃಷ್ಣಾ ನದಿಯ ನೀರಿಗಾಗಿ ಕಾಂಗ್ರೆಸ್  ಪಾದಯಾತ್ರೆ ನಡೆಸುವ ಬಗ್ಗೆ ಡಿಕೆಶಿ ಮಂಡ್ಯದಲ್ಲಿ ಸುಳಿವು ಕೊಟ್ಟಿದ್ದಾರೆ. 

ಮಂಡ್ಯ, ಸೆ.17 : ರಾಜ್ಯದಲ್ಲಿ ಕಳೆದ ಬಾರಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ಕೃಷ್ಣಾ ನದಿಯ ನೀರಿಗಾಗಿ ಕಾಂಗ್ರೆಸ್  ಪಾದಯಾತ್ರೆ ನಡೆಸುವ ಬಗ್ಗೆ ಡಿಕೆಶಿ ಮಂಡ್ಯದಲ್ಲಿ ಸುಳಿವು ಕೊಟ್ಟಿದ್ದಾರೆ. 

ರಾಹುಲ್ ಗಾಂಧಿ ಅಣತಿಯಂತೆ ಮೇಕೆದಾಟು ಪಾದಯಾತ್ರೆ ನಡೆದಿತ್ತು. ಕೃಷ್ಣಾ ನೀರಾವರಿ ಯೋಜನೆ ಬಗ್ಗೆ ಪಾದಯಾತ್ರೆಗೆ ಸಿದ್ಧತೆ ನಡೆಸಲು ಆ ಭಾಗದ ನಾಯಕರಿಗೆ ಹೇಳಿದ್ದೆ. ಇನ್ನೂ ಅದರ ತಯಾರಿ ಆರಂಭವಾಗಿಲ್ಲ. ಭಾರತ್ ಜೋಡೊ ಯಾತ್ರೆ ಮುಗಿದ ಬೆನ್ನಲ್ಲೇ ನಾನೇ ನೇತೃತ್ವ ತೆಗೆದುಕೊಳ್ತೀನಿ. ಕೃಷ್ಣಾ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಮಾಡ್ತೇವೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದ್ದಾರೆ. 

ಆಯಮ್ಮ ಮಾತಾಡ್ವಾಗ ಖಾಲಿ ಚೇರ್ ಅಷ್ಟೇ ಇದ್ದುವಂತೆ ! 

Enforcement Directorate checkmate for Congress president D K Shivakumar -  Daijiworld.com

ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಡಿಕೆಶಿ ವ್ಯಂಗ್ಯವಾಡಿದರು. ಅದ್ಯಾರೋ ಸ್ಮೃತಿ ಇರಾನಿಯಂತೆ. ಆಯಮ್ಮ ಮಾತನಾಡುವಾಗ ಜನಾನೇ ಇರ್ಲಿಲ್ಲ. ಎಲ್ಲಾ ಬರಿ ಖಾಲಿ ಖಾಲಿ ಚೇರ್ ಗಳಂತೆ. ಏನ್ ಜನಸ್ಪಂದನ ಮಾಡ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ವ್ಯಂಗವಾಡಿದರು. 

ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವ ಸಿದ್ಧತೆ ಬಗ್ಗೆ ಸಭೆ ನಡೆಸಲಾಗಿತ್ತು. ನಮ್ಮ ರಾಜ್ಯದಲ್ಲಿ 22 ದಿನ ಭಾರತ್ ಜೋಡೋ ಯಾತ್ರೆ ಇದೆ. ಯಾತ್ರೆಗೆ ಯಾವ ಕಾರ್ಯಕರ್ತನೂ ಹೂವಿನ ಹಾರ ತರಬೇಡಿ. ಯಾರು ಹೂವಿನ ಹಾರ ಹಾಕಲು ಅವಕಾಶ ಇಲ್ಲ. ಹೂವಿನ ಹಾರ ಹಾಕಿಸಿಕೊಳ್ಳಲು ಪೊಲೀಸ್ ಹಾಗೂ ಸೆಕ್ಯೂರಿಟಿ ಬಿಡಲ್ಲ. ನಿಮ್ಮ ಅಭಿಮಾನ ಪ್ರೀತಿ ಜನ ಸಂಘಟನೆಯಲ್ಲಿ ಇರಲಿ ಅಷ್ಟೇ ಎಂದು ಹೇಳಿದರು. 

ಇದೇ ವೇಳೆ, ಪಕ್ಷದ ಕಾರ್ಯಕರ್ತರ ಬಗ್ಗೆ ಅವಹೇಳನ ಮಾತನಾಡಿದ ಶಾಸಕ ಕೆಜಿಎಫ್ ಬಾಬು ಬಗ್ಗೆ ಡಿಕೆಶಿ ಕೆಂಡಮಂಡಲ ಆಗಿದ್ದಾರೆ. ಅವನ್ನಾ ಸಸ್ಪೆಂಡ್ ಮಾಡಿ ಬಿಡ್ತೀನಿ. ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ಬೈದ್ರೆ ಸಸ್ಪೆಂಡ್ ಮಾಡ್ತೀನಿ ಎಂದು ಕಿಡಿಕಾರಿದ್ದಾರೆ.

The simmering tension within the Karnataka unit of Congress has come to the fore as the party gears up to welcome Rahul Gandhi-led ‘Bharat Jodo Yatra’ into the state on September 30.