ಬ್ಯಾನ್ ಆಗಿರುವ ಸಂಘಟನೆಗಳ ಪರ ಪ್ರತಿಭಟನೆ ನಡೆಸಿದ್ರೆ ದುಷ್ಪರಿಣಾಮ ಆಗತ್ತೆ ; ಡಿಜಿಪಿ ಪ್ರವೀಣ್ ಸೂದ್ 

28-09-22 12:37 pm       Bangalore Correspondent   ಕರ್ನಾಟಕ

ಬ್ಯಾನ್ ಆಗಿರುವ ಆರ್ಗನೈಜೇಷನ್ ಪರವಾಗಿ ಯಾರಾದ್ರೂ ಪ್ರತಿಭಟನೆ ಮಾಡಿದ್ರೆ ದುಷ್ಪರಿಣಾಮ ಆಗತ್ತೆ. ಸದ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪಿಎಫ್ಐ ಪರವಾಗಿ ಪ್ರತಿಭಟನೆ ಮಾಡಿದರೆ ಕ್ರಮ ಕೈಗೊಳ್ತೀವಿ ಎಂದು ಡಿಜಿ- ಐಜಿಪಿ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.‌

ಬೆಂಗಳೂರು, ಸೆ.28: ಬ್ಯಾನ್ ಆಗಿರುವ ಆರ್ಗನೈಜೇಷನ್ ಪರವಾಗಿ ಯಾರಾದ್ರೂ ಪ್ರತಿಭಟನೆ ಮಾಡಿದ್ರೆ ದುಷ್ಪರಿಣಾಮ ಆಗತ್ತೆ. ಸದ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪಿಎಫ್ಐ ಪರವಾಗಿ ಪ್ರತಿಭಟನೆ ಮಾಡಿದರೆ ಕ್ರಮ ಕೈಗೊಳ್ತೀವಿ ಎಂದು ಡಿಜಿ- ಐಜಿಪಿ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.‌

ಪಿಎಫ್ಐ ನಿಷೇಧ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಡಿಜಿಪಿ, ಇದೇ 22ರಂದು ಎನ್ಐಎ ನಮ್ಮ ರಾಜ್ಯಕ್ಕೆ ಬಂದು ದಾಳಿ‌ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮುಂಜಾಗ್ರತಾ ಕ್ರಮಕ್ಕಾಗಿ 101 ಜನರನ್ನು ವಶಕ್ಕೆ ಪಡೆದಿದ್ದೇವೆ. ಎನ್.ಐ.ಎ ಮತ್ತು ನಾವು 15 ಮಂದಿಯನ್ನ ಅರೆಸ್ಟ್ ಮಾಡಿದ್ದೇವೆ. ಬಂಧಿತರ ವಿಚಾರಣೆ ವೇಳೆ ಮಹತ್ವದ ಮಾಹಿತಿ, ಕೆಲವು ಸಾಕ್ಷ್ಯಗಳು ಸಿಕ್ಕಿವೆ. ನಿನ್ನೆ ರಾತ್ರಿ ಭಾರತ ಸರಕಾರ ಪಿ.ಎಫ್.ಐ ಸಂಘಟನೆಯನ್ನು UAPA ಕಾಯ್ದೆ ಅಡಿ ಬ್ಯಾನ್ ಮಾಡಿದೆ. ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್, ಕಮಿಷನರ್ ವ್ಯಾಪ್ತಿಯಲ್ಲಿ ಆರ್ಗನೈಜೇಷನ್ ಬ್ಯಾನ್ ಬಗ್ಗೆ ಕ್ರಮ ಆಗತ್ತೆ ಎಂದು ಹೇಳಿದರು. 

Centre bans PFI and its associates for 5 years - Centre bans PFI and its  associates for 5 years -

ಪಿ.ಎಫ್.ಐ ಬ್ಯಾನ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ.‌ ಕೇಂದ್ರ ಸರ್ಕಾರಕ್ಕೆ ಮಾಹಿತಿ‌ ಇರುತ್ತೆ. ಅದಕ್ಕೆ ಬ್ಯಾನ್ ಮಾಡಿದ್ದಾರೆ.  ಪಿ.ಎಫ್.ಐ ಸೇರಿ ಬ್ಯಾನ್ ಆಗಿರುವ ಸಂಘಟನೆಗಳ ಪರವಾಗಿ ಯಾರಾದ್ರೂ ಪ್ರತಿಭಟನೆ ನಡೆಸಿದರೆ ಕ್ರಮ ತೆಗೆದುಕೊಳ್ತೀವಿ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ಕೆಲವರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದೇವೆ ಎಂದು ಹೇಳಿದರು.

PFI ban in India, if anyone tries to protest, no bail but jail forever warns Karnataka DGP Praveen Sood