14 ದಲಿತ ಕಾರ್ಮಿಕರನ್ನು ಕೂಡಿಹಾಕಿ ಚಿತ್ರಹಿಂಸೆ, ಮಹಿಳೆಗೆ ಗರ್ಭಪಾತ ; ಕಾಫಿ ಎಸ್ಟೇಟ್ ಮಾಲೀಕ, ಪುತ್ರನ ವಿರುದ್ಧ ದೂರು 

12-10-22 04:58 pm       HK News Desk   ಕರ್ನಾಟಕ

ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿಪುರದ ಕಾಫಿ ಎಸ್ಟೇಟ್‌ ಒಂದರಲ್ಲಿ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ 14 ಮಂದಿ ಕಾರ್ಮಿಕರನ್ನು ಎಸ್ಟೇಟ್‌ ಮಾಲೀಕ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ. 

ಚಿಕ್ಕಮಗಳೂರು, ಅ.12 : ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿಪುರದ ಕಾಫಿ ಎಸ್ಟೇಟ್‌ ಒಂದರಲ್ಲಿ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ 14 ಮಂದಿ ಕಾರ್ಮಿಕರನ್ನು ಎಸ್ಟೇಟ್‌ ಮಾಲೀಕ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ಕಾರ್ಮಿಕರನ್ನು ಹಿಂಸಿಸಿ ಸೆರೆಯಲ್ಲಿಟ್ಟ ಆರೋಪದ ಮೇಲೆ ಕಾಫಿ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಮತ್ತು ಆತನ ಪುತ್ರ ತಿಲಕ್ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 Dalits Tortured, Locked Up In Karnataka, Pregnant Woman Loses Baby

ಹಲ್ಲೆಗೀಡಾದ ಮಹಿಳೆಗೆ ಗರ್ಭಪಾತ

ಹಲ್ಲೆಗೊಳಗಾದ ಕಾರ್ಮಿಕರು ಒಂದೇ ಹಳ್ಳಿಗೆ ಸೇರಿದವರು. ಹೆಚ್ಚಿನವರು ಮಹಿಳೆಯರು. ಕಾರ್ಮಿಕರಲ್ಲಿ ಒಬ್ಬ ಮಹಿಳೆ ಗರ್ಭಿಣಿಯಾಗಿದ್ದು ಚಿತ್ರಹಿಂಸೆಯಿಂದ ರಕ್ತಸ್ರಾವ ಉಂಟಾಗಿ ಗರ್ಭಪಾತ ಆಗಿರುವ ಆರೋಪ ಕೇಳಿಬಂದಿದೆ. ಆ ಮಹಿಳೆ ನೀಡಿರುವ ದೂರಿನಂತೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

4 police from Balehonnur police station suspended

ಮಹಿಳೆಯ ಪತಿ ವಿಜಯ್ ಸಂಬಂಧಿಕರು ಮತ್ತು ನೆರೆಮನೆಯವರ ನಡುವೆ 15 ದಿನಗಳ ಹಿಂದೆ ಜಗಳವಾಗಿತ್ತು. ವಿಜಯ್ ಸಂಬಂಧಿಕರಾದ ಸತೀಶ್ ಮತ್ತು ಮಂಜು ಕಾಫಿ ಎಸ್ಟೇಟ್ ಮಾಲೀಕ ಜಗದೀಶ್ ಗೌಡರಿಂದ 9 ಲಕ್ಷ ರೂ. ಹಣ ಸಾಲ ಪಡೆದಿದ್ದಾರೆ ಎನ್ನಲಾಗುತ್ತಿದ್ದು ಹಣ ಪಾವತಿ ಮಾಡುವ ವರೆಗೆ 14 ಕಾರ್ಮಿಕರನ್ನು ಬಿಡೋದಿಲ್ಲ ಎಂದು ಎಸ್ಟೇಟ್ ಮಾಲೀಕರು ತಮ್ಮ ಕ್ವಾಟ್ರರ್ಸ್‌ನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದರು ಎಂದು ಆರೋಪಿಸಲಾಗಿದೆ.‌ ಅ.8ರಂದು ಘಟನೆ ನಡೆದಿದ್ದು ತಡವಾಗಿ ಪೊಲೀಸ್ ದೂರು ನೀಡಲಾಗಿದೆ.

A Case has been filed against coffee estate owner Jagadeesh Gowda (a BJP member) and his son Tilak, allegedly for keeping 14 female Dalit labourers under house arrest in Hunasehalli village over a financial issue. Gowda assaulted a pregnant woman labour too."The Dalit women were kept imprisoned inside the house. There was a pregnant woman among them. All the female labourers including the pregnant woman have been rescued" Chikkamagaluru SP said on Wednesday.