ಕಾಂತಾರ ವೀಕ್ಷಿಸಿ ಥಿಯೇಟರ್ ನಿಂದ ಹೊರಬರುತ್ತಲೇ ಹೃದಯಾಘಾತ ; ಯುವಕ ಸಾವು 

25-10-22 12:29 pm       HK News Desk   ಕರ್ನಾಟಕ

ಕಾಂತಾರ ಚಿತ್ರ ವೀಕ್ಷಿಸಿದ ಪ್ರೇಕ್ಷಕನೊಬ್ಬ ಥಿಯೇಟರ್ ನಲ್ಲಿಯೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ, ಅ.25 : ಕಾಂತಾರ ಚಿತ್ರ ವೀಕ್ಷಿಸಿದ ಪ್ರೇಕ್ಷಕನೊಬ್ಬ ಥಿಯೇಟರ್ ನಲ್ಲಿಯೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆಯ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ. ನಾಗಮಂಗಲ ತಾಲೂಕಿನ ಸಾರೆಮೇಗಲಕೊಪ್ಪಲು ನಿವಾಸಿ ರಾಜಶೇಖರ್ (45) ಮೃತ ದುರ್ದೈವಿ. 

ಕಾಂತಾರ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬರುವಾಗಲೇ ಹೃದಯಾಘಾತ ಉಂಟಾಗಿದೆ. ಬಳಿಕ ಕೆಲ ಹೊತ್ತಿನಲ್ಲಿಯೇ ಚಿತ್ರಮಂದಿರದ ಒಳಗಡೆಯೇ ರಾಜಶೇಖರ್ ಮೃತಪಟ್ಟಿದ್ದಾರೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Heart Attack To Person Dead After Kantara Film Show In Mandya Nagamangala Venkateshwara Theatre.