ಶಾಲೆಯಲ್ಲಿ ಆಟ ಆಡುವಾಗ ಪ್ರಜ್ಞೆ ತಪ್ಪಿ ಬಿದ್ದ 7 ವರ್ಷದ ಬಾಲಕ ; ಆಸ್ಪತ್ರೆಯಲ್ಲಿ ಸಾವು, ಕಣ್ಣುಗಳ ದಾನ ! 

29-10-22 05:21 pm       HK News Desk   ಕರ್ನಾಟಕ

ಶಾಲೆಯಲ್ಲಿ ಆಟ ಆಡುವಾಗ ಪ್ರಜ್ಞೆ ತಪ್ಪಿ ಬಿದ್ದ ಬಾಲಕ ಮತ್ತೆ ಕಣ್ಣು ತೆರೆಯಲೇ ಇಲ್ಲ. ಪುಟ್ಟ ಮಗನ ಅಗಲಿಕೆಯ ನೋವಿನಲ್ಲೂ ಸಹ ಆತನ ಕುಟುಂಬದವರು ಬಾಲಕನ ಕಣ್ಣು ದಾನ ಮಾಡುವ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

ಶಿವಮೊಗ್ಗ, ಅ.29: ಶಾಲೆಯಲ್ಲಿ ಆಟ ಆಡುವಾಗ ಪ್ರಜ್ಞೆ ತಪ್ಪಿ ಬಿದ್ದ ಬಾಲಕ ಮತ್ತೆ ಕಣ್ಣು ತೆರೆಯಲೇ ಇಲ್ಲ. ಪುಟ್ಟ ಮಗನ ಅಗಲಿಕೆಯ ನೋವಿನಲ್ಲೂ ಸಹ ಆತನ ಕುಟುಂಬದವರು ಬಾಲಕನ ಕಣ್ಣು ದಾನ ಮಾಡುವ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಸವಾಪುರ ಹಾರೋಹಿತ್ತಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಾಲಕ ಆರ್ಯನ್ (7) ಎರಡನೇ ತರಗತಿ ಓದುತ್ತಿದ್ದ. ಈತನ ತಾಯಿ ಅದೇ ಶಾಲೆಯಲ್ಲಿ ಬಿಸಿಯೂಟ ತಯಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಕೂಲಿ ಕೆಲಸ ಮಾಡುತ್ತಾರೆ. ಗುರುವಾರ ಬೆಳಗ್ಗೆ ಶಾಲೆಯಲ್ಲಿ ಆಟವಾಡುತ್ತಿದ್ದ ಆರ್ಯನ್ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದ.

ತಕ್ಷಣ ಬಾಲಕನನ್ನು ಸಮೀಪದ ರಿಪ್ಪನಪೇಟೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಅಲ್ಲಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಬಾಲಕ ಮೃತಪಟ್ಟಿದ್ದಾನೆ. ಏಕಾಏಕಿ ಜ್ವರ ಜಾಸ್ತಿ ಆಗಿರುವುದೇ ಬಾಲಕನ ಸಾವಿಗೆ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಬಳಿಕ ಕುಟುಂಬದವರು ಬಾಲಕನ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

Shivamogga A seven year old boy falls after being unconscious in school while playing, and dies in hospital.