ಬ್ರೇಕಿಂಗ್ ನ್ಯೂಸ್
06-11-22 12:38 pm HK News Desk ಕರ್ನಾಟಕ
ಚಿಕ್ಕಮಗಳೂರು, ನ.6: ಮಂಗಳೂರಿನಲ್ಲಿ ನಾವು ಬಿಜೆಪಿಯನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಬಿಜೆಪಿ ಜಾತಿ, ಧರ್ಮಕ್ಕೆ ದ್ರೋಹ ಮಾಡಿದ್ದು, ಆಜಾನ್ ನೆಪದಲ್ಲಿ ಕೂಗೆಬ್ಬಿಸಲು ಹೋಗಿ 80 ಪರ್ಸೆಂಟ್ ಹಿಂದೂಗಳಿಗೆ ಮೋಸ ಮಾಡಿದ್ದಾರೆ. ಈಗ ರಾತ್ರಿ ವೇಳೆ ಗಣೇಶ ಹಬ್ಬ ಮಾಡೋಕ್ಕಾಗುತ್ತಾ ಎಂದು ಮಧು ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ವಿ.ಎಚ್.ಪಿಯವರೇ ಮುಖ್ಯ ಪಾತ್ರಧಾರಿಗಳು. ಅಲ್ಲಿ ಪ್ರತಿ ಬಾರಿ ಬೆಂಕಿ ಹಚ್ಚುವವರು ಅವರೇ. ಆಜಾನ್ ಹೆಸರಲ್ಲಿ ಮುಸ್ಲಿಮರಿಗೆ ಮೋಸ ಮಾಡಿದ್ದು ಬಿಜೆಪಿಯವರು. ಆಜಾನ್ ಕೂಗಿನಿಂದ ಯಾರೂ ಹೃದಯಾಘಾತವಾಗಿ ಸತ್ತಿಲ್ಲ. ಯಾವತ್ತೋ ಕೋರ್ಟ್ ಆದೇಶ ಮಾಡಿತ್ತು. ಅದು ಜಾರಿಗೆ ಬಂದಿರಲಿಲ್ಲ. ಅದನ್ನು ಜಾರಿ ಮಾಡಲು ಹೋಗಿ ಹಿಂದುಗಳಿಗೂ ಮೋಸ ಮಾಡಿದ್ದಾರೆ ಎಂದರು.
ಹಿಂದೂಗಳಿಗೆ ಏಕೆ ಬಿಜೆಪಿ ಮೇಲೆ ಸಿಟ್ಟು, ದ್ವೇಷ ಅಂದರೆ, ಅವರದ್ದು ಆಫ್ ಮಾಡಿಸಲು ಹೋಗಿ ಹಿಂದೂಗಳ ಮೈಕ್ ಆಫ್ ಮಾಡಿಸಿದ್ದಾರೆ. ಜಾತಿ, ಧರ್ಮಕ್ಕೆ ದ್ರೋಹ ಮಾಡಿದವರು ಬಿಜೆಪಿಯವರು. ನಾನು ಹೇಳುವುದು ಇಷ್ಟೆ. ಮಂಗಳೂರಿನಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿರುವುದು ಒಂದೇ ಒಂದು ಸೀಟು. ಆದರೆ, ಈ ಬಾರಿ ಮಂಗಳೂರಿನಲ್ಲಿ ಬಿಜೆಪಿಯವರನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ. ನಾನು ಈಗ ಹೇಳಕ್ಕೋಗುವುದಿಲ್ಲ. ಚುನಾವಣೆ ಬಂದಾಗ ಗೊತ್ತಾಗುತ್ತದೆ ಎಂದು ಮಧು ಬಂಗಾರಪ್ಪ ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಏನಾಗಿತ್ತು. ಅಲ್ಲಿ ನಳಿನ್ ಕುಮಾರ್ ಕಾರಿನ ಟೈರ್ ಪಂಚರ್ ಮಾಡಿದ್ದು ಯಾರು? ಅಲ್ಲಿ ಕಾರನ್ನು ಅಲ್ಲಾಡಿಸಿದ್ದು ಯಾರು? ಇದೇ ಬಜರಂಗದಳ, ವಿಎಚ್ ಪಿಯವರು. ಬೇರೆ ಯಾರೂ ಅಲ್ಲ. ಇವರು ಅಧಿಕಾರಕ್ಕೆ ಬಂದು ಕೊಲೆ ರಾಜಕೀಯ ಮಾಡುತ್ತಿದ್ದಾರೆ ಅಂತ ಅವರಿಗೆ ಅರ್ಥ ಆಗಿದೆ. ಅದಕ್ಕಾಗಿ ಗೋ ಬ್ಯಾಕ್ ಸುನಿಲ್, ನಳಿನ್ ಅಂತ ಘೋಷಣೆ ಕೂಗಿದ್ದಾರೆ. ಆರೆಸ್ಸೆಸ್ ಮಂದಿಯೇ ಈ ಘೋಷಣೆ ಕೂಗಿದ್ದಾರೆ. ಇವರು ಅಧಿಕಾರಕ್ಕೆ ಬಂದು ಕೊಲೆ ರಾಜಕೀಯವನ್ನೇ ಮಾಡಿದ್ದು ಬೇರೇನೂ ಮಾಡಿಲ್ಲ. ಜನ ಪಾಠ ಕಲಿಸಲು ತಯಾರಾಗಿದ್ದಾರೆ ಎಂದರು.
See what will be the position of BJP in Mangalore in coming election challenges Madhu Bangarappa
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm