ಬ್ರೇಕಿಂಗ್ ನ್ಯೂಸ್
12-11-22 12:01 pm HK News Desk ಕರ್ನಾಟಕ
ಹಾಸನ, ನ.12 : ಎರಡನೇ ಮದುವೆ ರಾದ್ಧಾಂತದಿಂದ ಮನನೊಂದ ಯೋಧನೊಬ್ಬ ತಾನು ಪ್ರೀತಿಸುತ್ತಿದ್ದ ವಿಧವೆ ಮಹಿಳೆಯ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಶಾಂತಿಗ್ರಾಮ ಹೋಬಳಿಯಲ್ಲಿ ನಡೆದಿದೆ. ಸೇನೆಯಲ್ಲಿ ಯೋಧನಾಗಿದ್ದ ಕಿರಣ್ ಕುಮಾರ್ ಹಾಗೂ ಆಶಾ ಮೃತ ದುರ್ದೈವಿಗಳು.
ಯೋಧ ಕಿರಣ್ ಕುಮಾರ್, ಗಂಡನನ್ನು ಕಳಕೊಂಡಿದ್ದ ವಿಧವೆ ಆಶಾ ಎಂಬವರನ್ನು ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ ಈ ಮದುವೆಗೆ ಆತನ ಮನೆಯವರ ಒಪ್ಪಿಗೆ ಇರಲಿಲ್ಲ. ಇದರಿಂದಾಗಿ ಮೊದಲ ಮದುವೆ ವಿಚಾರ ಬಚ್ಚಿಟ್ಟು ಯೋಧ ಕಿರಣ್ ಕುಮಾರ್ 2ನೇ ಮದುವೆಯಾಗಲು ತಯಾರಿ ನಡೆಸಿದ್ದ. ಗುರುವಾರ ಹಾಸನ ನಗರದ ಹೊರ ವಲಯದ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಿದ್ಧತೆ ನಡೆದಿತ್ತು. ವಧು-ವರ ಸಪ್ತಪದಿ ತುಳಿಯುವಷ್ಟರಲ್ಲಿ ಮೊದಲ ಪತ್ನಿ ಎನ್ನಲಾದ ಆಶಾ ಕಲ್ಯಾಣ ಮಂಟಪಕ್ಕೆ ಬಂದು ರಾದ್ಧಾಂತ ಮಾಡಿ ಮದುವೆ ನಿಲ್ಲಿಸಿದ್ದಳು. ಬಳಿಕ ಪೊಲೀಸರು ಬಂದು ವರನನ್ನು ವಶಕ್ಕೆ ಪಡೆದಿದ್ದರೆ, ಮದುವೆಯಾಗಲು ರೆಡಿಯಾಗಿ ಬಂದಿದ್ದ ಹುಡುಗಿ ಕಡೆಯವರು ವಿಷಯ ತಿಳಿದು ಜಾಗ ಖಾಲಿ ಮಾಡಿದ್ದರು.
ಕಿರಣ್ ಕುಮಾರ್ 6 ತಿಂಗಳ ಹಿಂದೆ ಮನೆಯಲ್ಲೇ ತಾಳಿ ಕಟ್ಟಿ ತನ್ನನ್ನು ಮದುವೆಯಾಗಿದ್ದರು. ಈಗ ಮತ್ತೊಂದು ಮದುವೆ ಆಗುತ್ತಿದ್ದಾರೆಂಬುದು ಆಶಾ ಆರೋಪ ಆಗಿತ್ತು. ಯೋಧ ಕಿರಣ್ ಕುಮಾರ್ ತನಗೆ ವಂಚನೆ ಮಾಡಿದ್ದಾನೆಂದು ಮಹಿಳೆ ಮದುವೆ ಮಂಟಪದಲ್ಲೇ ರಂಪ ಮಾಡಿದ್ದಳು. ಬಳಿಕ ಹುಡುಗಿ ಮನೆಯವರು ಯೋಧನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಸಂಧಾನ ಬಳಿಕ ಸಾವಿಗೆ ಶರಣು
ವಿಷಯ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದಿದ್ದು ರಂಪಾಟ, ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದು, ವಿಚಾರಣೆಯನ್ನೂ ನಡೆಸಿದ್ದರು. ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಬಳಿಕ ಯೋಧ ಕಿರಣ್ ಕುಮಾರ್ ಮತ್ತು ಆಶಾ ತಮ್ಮ ಹೊಂಗೆರೆ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ತನ್ನ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎರಡನೇ ಮದುವೆ ರಾದ್ಧಾಂತ, ಮರ್ಯಾದೆಗೆ ಅಂಜಿ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು ಆನಂತರ ವಿಧವೆ ಮಹಿಳೆಯೂ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಒಂದೇ ದಿನಕ್ಕೆ ಆಗಿರುವ ವೈರುಧ್ಯ ಹಾಸನದಲ್ಲಿ ಚರ್ಚೆಯ ವಸ್ತುವಾಗಿದೆ.
An incident of a man who was offended by marriage raddhanta committed suicide along with a woman in Hobli village of Shanti village of Hassan. Kiran Kumar, who was a soldier by profession, and Asha are unfortunate deceased.It is said that Kiran, who had been living a peaceful life with Asha who lost her husband for the past two years, agreed to her parents and got married. However, Asha broke the marriage due to some reasons.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm