ಬ್ರೇಕಿಂಗ್ ನ್ಯೂಸ್
23-12-22 06:51 pm HK News Desk ಕರ್ನಾಟಕ
ನವದೆಹಲಿ, ಡಿ 23: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ದೇಶದ ಅತೀ ದೊಡ್ಡ ಹೋಲ್ ಸೇಲ್ ಮತ್ತು ಫುಡ್ ರೀಟೈಲ್ ಸಂಸ್ಥೆ "ಮೆಟ್ರೋ ಕ್ಯಾಶ್ ಆಯಂಡ್ ಕ್ಯಾರಿ ಇಂಡಿಯಾವನ್ನು" 2,850 ಕೋಟಿ ರೂಪಾಯಿಗೆ ಖರೀದಿಸಿರುವುದಾಗಿ ಉಭಯ ಕಂಪನಿಗಳು ಘೋಷಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಪ್ಪಂದದೊಂದಿಗೆ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕತೆಯಿಂದ ಮೆಟ್ರೋ ಕ್ಯಾಶ್ ಆಯಂಡ್ ಕ್ಯಾರಿ ನಿರ್ಗಮಿಸಿದಂತಾಗಿದೆ. 2003ರಲ್ಲಿ ಜರ್ಮನ್ ಮೂಲದ ಮೆಟ್ರೋ ಭಾರತದಲ್ಲಿ ಆರಂಭಗೊಂಡಿತ್ತು.
ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕ್ಯಾಶ್ ಆಯಂಡ್ ಕ್ಯಾರಿ ವಹಿವಾಟನ್ನು ಆರಂಭಿಸಿದ್ದ ಮೊದಲ ಕಂಪನಿ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದಿತ್ತು. ಭಾರತದ 21 ನಗರಗಳಲ್ಲಿ ಮೆಟ್ರೋ ಸಂಸ್ಥೆಯ 31 ಬೃಹತ್ ಮಳಿಗೆಗಳಿದ್ದು, 3,500 ಮಂದಿ ನೌಕರರನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.
ಇದೀಗ ಮೆಟ್ರೋ ಕ್ಯಾಶ್ ಆಯಂಡ್ ಕ್ಯಾರಿ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಪ್ರಮುಖ ನಗರಗಳಲ್ಲಿರುವ ಮೆಟ್ರೋ ಇಂಡಿಯಾದ ಮಳಿಗೆಗಳ ವಹಿವಾಟನ್ನು ತನ್ನ ಸುಪರ್ದಿಗೆ ಪಡೆದಂತಾಗಿದೆ.
ಮೆಟ್ರೋ ಸಂಸ್ಥೆ 30 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ. 2022ರ ಸೆಪ್ಟೆಂಬರ್ 30ರವರೆಗಿನ ಆರ್ಥಿಕ ವರ್ಷದಲ್ಲಿ ಮೆಟ್ರೋ ಇಂಡಿಯಾ ಬರೋಬ್ಬರಿ 7,700 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ವರದಿ ವಿವರಿಸಿದೆ.
India's Reliance Retail Ventures said on Thursday it had agreed to buy German retailer Metro AG's Indian unit for Rs 28.5 billion ($344 million) as it makes aggressive strides in the retail industry.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 11:47 am
HK News Staffer
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm