ಶಿವಮೊಗ್ಗದಲ್ಲಿ ಕೋಮುಗಲಭೆ, ಹಿಂಸಾಚಾರಕ್ಕೆ ಪ್ರಚೋಧನೆ ಭಾಷಣ ; ಸಾಧ್ವಿ ವಿರುದ್ಧ ಎಫ್‌ಐಆರ್

29-12-22 09:09 pm       HK News Desk   ಕರ್ನಾಟಕ

ಹಿಂದು ಜಾಗರಣಾ ವೇದಿಕೆ ತ್ರೈವಾರ್ಷಿಕ ಪ್ರಾಂತ ಸಮ್ಮೇಳದನದಲ್ಲಿ ನೀಡಿದ್ದ ಪ್ರಚೋಧನಾಕಾರಿ ಹೇಳಿಕೆಗಾಗಿ ಮಧ್ಯಪ್ರದೇಶದ ಭೂಪಾಲ್‌ನ ಲೋಕಸಭಾ ಕ್ಷೇತ್ರದ ಸದಸ್ಯೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮೇಲೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಶಿವಮೊಗ್ಗ, ಡಿ 29:  ಹಿಂದು ಜಾಗರಣಾ ವೇದಿಕೆ ತ್ರೈವಾರ್ಷಿಕ ಪ್ರಾಂತ ಸಮ್ಮೇಳದನದಲ್ಲಿ ನೀಡಿದ್ದ ಪ್ರಚೋಧನಾಕಾರಿ ಹೇಳಿಕೆಗಾಗಿ ಮಧ್ಯಪ್ರದೇಶದ ಭೂಪಾಲ್‌ನ ಲೋಕಸಭಾ ಕ್ಷೇತ್ರದ ಸದಸ್ಯೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮೇಲೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೀಡಿದ ದೂರಿನ ಅನ್ವಯ ಬುಧವಾರ ಎಫ್‌ಐಆರ್ ದಾಖಲಾಗಿದೆ. ಡಿ.25ರಂದು ಎನ್‌ಇಎಸ್ ಮೈದಾನದಲ್ಲಿ ನಡೆದಿದ್ದ ಪ್ರಾಂತ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಪ್ರಜ್ಞಾ ಸಿಂಗ್ ಠಾಕೂರ್, ಕೋಮುಗಲಭೆ ಮತ್ತು ಹಿಂಸಾಚಾರಕ್ಕೆ ಪ್ರಚೋಧನೆ ನೀಡುವಂತಿದೆ. ಹಾಗಾಗಿ ಸಂಸದೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ದೂರು ನೀಡಿತ್ತು.

What is meant by FIR and Zero FIR? | Criminal Law Guide

ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಶಾಸ್ತಿ ಮಾಡಬೇಕು. ಹೆಣ್ಣು ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು. ತರಕಾರಿ ಕೊಯ್ಯುವ ಚಾಕು ಕೂಡ ಹರಿತವಾಗಿಟ್ಟುಕೊಳ್ಳಬೇಕು. ಹೆಣ್ಣು ಮಕ್ಕಳನ್ನು ತಿರುಗಾಡುವ ಆಟಂಬಾಂಬ್ ಮಾಡುವಂತೆ ಪ್ರಚೋದನೆ ನೀಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

Shivamogga Police on Wednesday registered an FIR against BJP MP Pragya Thakur for her provocative remarks in her speech in the city on Sunday. The FIR was registered at Kote Police Station here after activists and the KPCC district unit filed a complaint against the MP. BJP Member of Parliament from Bhopal in Madhya Pradesh, Thakur had said Hindus have the right to respond to those who attack them and their dignity, even as she spoke about the killing of Hindu activists.