ಗುಜರಾತಿನ ಅಮುಲ್ ಜೊತೆ ನಂದಿನಿ ವಿಲೀನ ; ಅಮಿತ್ ಷಾ ಪ್ರಸ್ತಾಪಕ್ಕೆ ಭಾರೀ ವಿರೋಧ, ಬ್ಯಾಂಕುಗಳಿಗಾದ ಗತಿಯೇ ನಂದಿನಿಗೂ ಬಂದೀತು !

31-12-22 09:28 pm       Bangalore Correspondent   ಕರ್ನಾಟಕ

ಗುಜರಾತಿನ ಅಮುಲ್ ಜೊತೆಗೆ ಕರ್ನಾಟಕದ ಕೆಎಂಎಫ್, ನಂದಿನಿಯನ್ನು ವಿಲೀನಗೊಳಿಸುವ ಸಚಿವ ಅಮಿತ್ ಷಾ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು, ಡಿ.31: ಗುಜರಾತಿನ ಅಮುಲ್ ಜೊತೆಗೆ ಕರ್ನಾಟಕದ ಕೆಎಂಎಫ್, ನಂದಿನಿಯನ್ನು ವಿಲೀನಗೊಳಿಸುವ ಸಚಿವ ಅಮಿತ್ ಷಾ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮನ್ಮುಲ್ ಮೇಗಾ ಡೇರಿಗೆ ಶುಕ್ರವಾರ ಚಾಲನೆ ನೀಡಿದ್ದ ಅಮಿತ್ ಷಾ ಅವರು, ಗುಜರಾತ್ ಮತ್ತು ಕರ್ನಾಟಕದ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಮಿತ್ ಷಾ ಪ್ರಸ್ತಾಪಕ್ಕೆ ತೀವ್ರ ವಿರೋಧ ಕೇಳಿಬಂದಿದ್ದು, ಪ್ರಗತಿಪರರು ಜಾಲತಾಣದಲ್ಲಿ ವಿರೋಧಿಸಿ ಬರೆದಿದ್ದಾರೆ. ಅಮುಲ್ ಇಲ್ಲದೆಯೂ ನಂದಿನಿ ಕರ್ನಾಟಕದಲ್ಲಿ ಚೆನ್ನಾಗಿ ನಡೆಯಬಲ್ಲದು. ಅಮುಲ್ ಗೆ ನಂದಿನಿ ಉತ್ತಮ ಪ್ರತಿಸ್ಪರ್ಧಿಯಾಗಬಹುದೇ ಹೊರತು ಅಂಗಸಂಸ್ಥೆಯಾಗುವುದಲ್ಲ ಎಂದು ಪ್ರಗತಿಪರ ಚಿಂತಕ, ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯ ಬರೆದಿದ್ದಾರೆ.

Covid-19 likely to subside by December: Dr Kakkilaya | Deccan Herald

ಕೆಎಂಎಫ್ ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದು, ರಾಜ್ಯಾದ್ಯಂತ ಹಳ್ಳಿಗಳಲ್ಲಿ ಡೈರಿಗಳನ್ನು ಹೊಂದಿದೆ. ಅಮುಲ್ ಅನ್ನು ಇಲ್ಲಿಗೆ ತಂದರೆ ನಂದಿನಿಯ ಸ್ವಾಯತ್ತಗೆ ಧಕ್ಕೆ ಬಿಟ್ಟರೆ ಬೇರೆ ಲಾಭ ಏನಾಗುತ್ತದೆ. ಅಮುಲ್ ಜೊತೆ ವಿಲೀನ ಮಾಡಿದರೆ, ಬ್ಯಾಂಕ್ ಆಫ್ ಬರೋಡಾ ಜೊತೆಗೆ ವಿಜಯಾ ಬ್ಯಾಂಕ್ ವಿಲೀನಗೊಂಡು ನೂರು ವರ್ಷಗಳ ಇತಿಹಾಸ ಅಳಿದಂತೆ ನಂದಿನಿಗೂ ಅದೇ ಗತಿಯಾಗುತ್ತದೆ. ನಂದಿನಿಯ ಆಡಳಿತ ಕನ್ನಡಿಗರ ಕೈತಪ್ಪುತ್ತದೆ ಅಷ್ಟೇ ಎಂದು ಬರಹಗಾರ ವಸಂತ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

Adani Group acquires NDTV promoters' additional 27.26% stake for ₹602 crore  | Mint

ಕರ್ನಾಟಕ ರಾಷ್ಟ್ರ ಸಮಿತಿ ಖಾರವಾಗಿ ಪ್ರತಿಕ್ರಿಯಿಸಿದ್ದು, ದಯವಿಟ್ಟು ಕೆಎಂಎಫ್- ನಂದಿನಿ ತಂಟೆಗೆ ಬರಬೇಡಿ. ನಂದಿನಿ ಮಾರುಕಟ್ಟೆ, ಡೈರಿಗಳು ರಾಜ್ಯದ ಪ್ರತಿ ಹಳ್ಳಿಗಳಲ್ಲೂ ನೆಲೆ ನಿಂತಿದೆ. ನೀವು ಮೊದಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಡೈರಿಗಳನ್ನು ಸ್ಥಾಪಿಸಿ. ನಂದಿನಿಯನ್ನೂ ರಿಲಯನ್ಸ್, ಅದಾನಿಗೆ ಮಾರಾಟ ಮಾಡುವ ಹುನ್ನಾರವೇ ಎಂದು ಪ್ರಶ್ನೆ ಮಾಡಿದೆ.

The victimhood of the Congress party

ಕರ್ನಾಟಕ ಕಾಂಗ್ರೆಸ್ ಕೂಡ ಖಾರವಾಗಿ ಟೀಕಿಸಿದ್ದು, ಕರ್ನಾಟಕದ ಬ್ಯಾಂಕುಗಳನ್ನು ನಾಶ ಪಡಿಸಿದ್ದಾಯ್ತು. ಈಗ ಕೆಎಂಎಫ್ ಮೇಲೆ ಕೇಂದ್ರ ಸರಕಾರದ ವಕ್ರ ದೃಷ್ಟಿ ಬಿದ್ದಿದೆ. ಕರ್ನಾಟಕದ ರೈತರ ಪಾಲಿನ ಕಾಮಧೇನು ಆಗಿರುವ ಕೆಎಂಎಫ್ ಅನ್ನು ಮುಳುಗಿಸುವ ಹುನ್ನಾರದ ವಿರುದ್ಧ ಕನ್ನಡಿಗರು ಸಜ್ಜಾಗಬೇಕಿದೆ. ಕನ್ನಡಿಗರ ಅಸ್ಮಿತೆಗಳನ್ನು ಆಪೋಶನ ತೆಗೆದುಕೊಳ್ಳುವುದೇ ಬಿಜೆಪಿ ಅಜೆಂಡಾ ಎಂದು ಟೀಕಿಸಿದೆ.

K'taka govt curtailed legislature session for Amit Shah's visit:  Siddaramaiah | udayavani

ಕರ್ನಾಟಕದ ಹಾಲು ಮಹಾಮಂಡಲವನ್ನು ಗುಜರಾತಿನ ಅಮುಲ್ ಜೊತೆ ವಿಲೀನಗೊಳಿಸಲು ಅಮಿತ್ ಷಾ ಪ್ರಸ್ತಾಪ ಮಾಡಿದ್ದಾರೆ. ಕನ್ನಡಿಗರು ಈಗಲೇ ಎಚ್ಚೆತ್ತುಕೊಂಡು ವಿರೋಧ ತೋರದೇ ಇದ್ದರೆ, ನಮ್ಮ ಬ್ಯಾಂಕುಗಳಿಗಾದ ಗತಿಯೇ ನಂದಿನಿಗೂ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Union Home Affairs Minister Amit Shah’s statement in Karnataka’s Mandya on Friday for pushing “cooperation” between the Karnataka Milk Federation (KMF) and the Anand Milk Union Limited (Amul) in Gujarat has not gone down well with the citizens and the Opposition to save the brand ‘Nandini’. Shah inaugurated a mega dairy established by the Mandya District Cooperative Milk Producers Associations Federation at a cost of Rs 260 crore in Gejjalagere of Mandya district. During his address he said, “Amul and KMF together will work together towards ensuring there is a primary dairy in every village of the state.