ಲಾರಿ ಟೈರ್ ಚೆಕ್ ಮಾಡಲು ಇಳಿದಾಗಲೇ ಸ್ಫೋಟ ; ಚಾಲಕ ಸ್ಥಳದಲ್ಲೇ ದುರಂತ ಸಾವು ! 

03-01-23 01:08 pm       HK News Desk   ಕರ್ನಾಟಕ

ಲಾರಿಯ ಟೈರ್‌ ಚೆಕ್ ಮಾಡಲು ಇಳಿದ ಚಾಲಕ ಟೈರ್ ಸ್ಫೋಟಗೊಂಡು ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ.

ತುಮಕೂರು, ಜ.3 : ಲಾರಿಯ ಟೈರ್‌ ಚೆಕ್ ಮಾಡಲು ಇಳಿದ ಚಾಲಕ ಟೈರ್ ಸ್ಫೋಟಗೊಂಡು ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ನಿವಾಸಿ ವೆಂಕಟೇಶ್ ಲಾರಿ ಚಾಲಕರಾಗಿದ್ದು ಮಂಗಳವಾರ ಬೆಳಗ್ಗೆ ಲಾರಿ ಓಡಿಸುತ್ತಿದ್ದಾಗ ಟೈರ್‌ ಏನೋ ಸಮಸ್ಯೆ ಇರಬೇಕು ಎಂದು ಕೆಳಗಿಳಿದು ಚೆಕ್ ಮಾಡಿದ್ದಾರೆ. ಚೆಕ್‌ ಮಾಡಲೆಂದು ರಸ್ತೆ ಬದಿ ಲಾರಿ ನಿಲ್ಲಿಸಿದ್ದು, ಚೆಕ್‌ ಮಾಡುತ್ತಿದ್ದಾಗಲೇ ಟಯರ್‌ ಸ್ಫೋಟಗೊಂಡು ಅದರಿಂದ ಹೊಮ್ಮಿದ ಗಾಳಿ ಮತ್ತು ರಬ್ಬರ್ ಪದರಗಳು ತಲೆಯ ಭಾಗಕ್ಕೆ ಅಪ್ಪಳಿಸಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.‌

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾನ್ಯವಾಗಿ ವಾಹನ ಹೆಚ್ಚು ಚಲಿಸಿದ ಸಂದರ್ಭದಲ್ಲಿ ಬಿಸಿಯಾಗಿ ಟಯರ್‌ ಸ್ಫೋಟಗೊಳ್ಳುವುದು ಇದೆ. ವಾಹನ ವೇಗವಾಗಿದ್ದರೆ ಪಲ್ಟಿಯಾಗಿ ಅಪಘಾತ ಆಗುವ ಸಾಧ್ಯತೆಯೂ ಇರುತ್ತದೆ. ಆದರೆ, ಇಲ್ಲಿ ಟಯರ್‌ ಬಿಸಿಯಾಗಿದ್ಯಾ ಅಂತ ಚೆಕ್ ಮಾಡಲು ಚಾಲಕ ಇಳಿದಿದ್ದೇ ಅಪಾಯಕ್ಕೀಡಾಗುವಂತಾಗಿದೆ.

Tumkur truck tyre blast, driver dies on spot.