ಭೂಗತ ಪಾತಕಿ ರವಿ ಪೂಜಾರಿಗೂ ಕೊರೊನಾ! 14 ಸಿಸಿಬಿ ಅಧಿಕಾರಿಗಳಿಗೂ ಪಾಸಿಟಿವ್ !!

04-08-20 12:43 pm       Headline Karnataka News Network   ಕರ್ನಾಟಕ

ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಭೂಗತ ದೊರೆ ರವಿ ಪೂಜಾರಿಗೆ ಇಂದು ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಬೆಂಗಳೂರು (ಆ.04): ಹಫ್ತಾ ವಸೂಲಿ, ಸುಪಾರಿ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿದ್ದು ಬಳಿಕ ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಭೂಗತ ದೊರೆ ರವಿ ಪೂಜಾರಿಗೆ ಇಂದು ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಮಡಿವಾಳ ಬಳಿಯಿರುವ ಸಿಸಿಬಿ ಕಚೇರಿಯಲ್ಲಿ ರವಿ ಪೂಜಾರಿಯನ್ನು ಕೊರೊನಾ ಸೋಂಕಿನ ಮುಂಜಾಗೃತಾ ಕ್ರಮ ಕೈಗೊಂಡು ವಿಚಾರಣೆ ನಡೆಸಲಾಗಿದೆ. ಇದೀಗ ಆತನನ್ನು ತನಿಖೆ ಮಾಡಿದ್ದ ಎಸಿಪಿ, ಇನ್ ಸ್ಪೆಕ್ಟರ್, ಟೈಪಿಸ್ಟ್ ಗೂ ಕೊರೊನಾ ಸೋಂಕು ತಗಲಿದ್ದು ಸದ್ಯ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜೈಲಿನಲ್ಲಿ ಹಲವಾರು ಖೈದಿಗಳ ಜೊತೆ ಇದ್ದ ಕಾರಣ ಅವನಿಗೂ ಸೋಂಕು ತಗಲಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.