ಕೋಳಿ ಹಿಡಿಯಲು ಮಾತ್ರ ಗೃಹ ಸಚಿವ ಆರಗ ಜ್ಞಾನೇಂದ್ರ ಲಾಯಕ್ಕು ; ಗೃಹ ಇಲಾಖೆ ನಾಚಿಕೆಗೇಡಿನ ಸ್ಥಿತಿಗೆ ಬಂದಿದೆ , ಕಾಂಗ್ರೆಸ್ ವ್ಯಂಗ್ಯ !

20-01-23 09:59 pm       Bangalore Correspondent   ಕರ್ನಾಟಕ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕು ಎಂದು ರಾಜ್ಯ ಕಾಂಗ್ರೆಸ್‌ ಘಟಕ ಗೃಹ ಸಚಿವರನ್ನು ಛೇಡಿಸಿದೆ.

ಬೆಂಗಳೂರು, ಜ.20 : ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕು ಎಂದು ರಾಜ್ಯ ಕಾಂಗ್ರೆಸ್‌ ಘಟಕ ಗೃಹ ಸಚಿವರನ್ನು ಛೇಡಿಸಿದೆ.

ಕೊಪ್ಪಳದಲ್ಲಿ ಜೂಜಾಟಕ್ಕೆ ಇಡಲಾಗಿದ್ದ ಕೋಳಿಯನ್ನು ಬಂಧಿಸಿದ್ದ ಪ್ರಕರಣ ಹಾಗೂ ಪಿ.ಎಸ್.ಐ ಹಗರಣದ ಆರೋಪಿ ಆರ್‌.ಡಿ ಪಾಟೀಲ ಪರಾರಿಯಾದ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್‌ ಈ ಟ್ವೀಟ್‌ ಮಾಡಿದೆ.

ಬಿಜೆಪಿ ಸರ್ಕಾರದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಲಾಗುತ್ತದೆ. ಬಹುದೊಡ್ಡ ಅಕ್ರಮವೊಂದರ ಆರೋಪಿ ಪೊಲೀಸರನ್ನು ತಳ್ಳಿ ಪರಾರಿಯಾಗುತ್ತಾನೆ. ದೇಶದಲ್ಲೇ ನಂಬರ್ 1 ಎನಿಸಿಕೊಂಡಿದ್ದ ರಾಜ್ಯದ ಗೃಹ ಇಲಾಖೆಯನ್ನು ಇಂದು ನಾಚಿಕೆಗೇಡಿನ ಸ್ಥಿತಿಗೆ ತಂದಿಟ್ಟಿದೆ ಬಿಜೆಪಿ ಸರ್ಕಾರ. ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕಾಗಿದ್ದಾರೆ‘ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

The state Congress unit has slammed the Home Minister saying that Home Minister Araga Jnanendra is only fit to catch chickens. Congress made this tweet referring to the case of arrest of a chicken kept for gambling in Koppal and the case of PSI scam accused RD Patil's escape.